ರಹಾನೆಗೆ ಮುನ್ನಡೆಸಿದ ಅನುಭವವಿದೆ
"ಅಜಿಂಕ್ಯ ರಹಾನೆ ಟೀಮ್ ಇಂಡಿಯಾವನ್ನು ಈ ಹಿಂದೆಯೂ ಮುನ್ನಡೆಸಿದ್ದಾರೆ. ಆವರಲ್ಲಿನ ಶಾಂತತೆ ಆತನೋರ್ವ ಆಕ್ರಮಣಕಾರಿ ಆಟಗಾರ ಅಲ್ಲ ಎಂದು ಅರ್ಥವಲ್ಲ. ಪ್ರತಿಯೊಬ್ಬ ಆಟಗಾರನೂ ತನ್ನ ಆಕ್ರಮಣಕಾರಿತನವನ್ನು ಭಿನ್ನವಾಗಿ ವ್ಯಕ್ತಪಡಿಸುತ್ತಾರೆ. ಯಾರಾದರೂ ಆಟಗಾರ ತನ್ನ ಆಕ್ರಮಣಕಾರಿ ಆಟವವನ್ನು ವ್ಯಕ್ತಪಡಿಸದೇ ಇದ್ದರೆ ಆತನನ್ನು ಆಕ್ರಮಣಕಾರಿ ಅಲ್ಲ ಎಂದು ವ್ಯಾಖ್ಯಾನಿಸಲು ಸಾಧ್ಯವಿಲ್ಲ" ಎಂದಿದ್ದಾರೆ.
ಚೇತೇಶ್ವರ್ ಪೂಜಾರ ಉದಾಹರಣೆ
"ಉದಾಹರಣೆಗೆ ಚೇತೇಶ್ವರ್ ಪೂಜಾರ. ಆತನೋರ್ವ ತುಂಬಾ ಶಾಂತ ಮತ್ತು ಸಂಯೋಜಿತ ಆಟಗಾರ. ಆತನ ಆಂಗಿಕ ಭಾಷೆ ಆಟಕ್ಕೆ ಕೇಂದ್ರತವಾಗಿರುತ್ತದೆ. ಅದರರ್ಥ ಪೂಜಾರ ಉಳಿದೆಲ್ಲರಿಇಂತ ಕಡಿಮೆ ಪ್ರಯತ್ನವನ್ನು ಮಾಡುತ್ತಾರೆ ಎಂದಲ್ಲ" ಎಂದು ಸಚಿನ್ ತೆಂಡೂಲ್ಕರ್ ಬ್ಯುಸಿನೆಸ್ ಸ್ಟಾಂಡರ್ಡ್ಗೆ ನೀಡಿದ ಪ್ರತಿಕ್ರಿಯೆಯಲ್ಲಿ ತಿಳಿಸಿದ್ದಾರೆ.
ದಾರಿ ಬೇರೆ ಗುರಿ ಒಂದೆ
"ಪ್ರತಿಯೊಬ್ಬ ವ್ಯಕ್ತಿಯೂ ಪರಿಸ್ಥಿತಿಗಳಿಗೆ ಬೇರೆ ಬೇರೆ ರೀತಿಯಾಗಿ ಪ್ರತಿಕ್ರಿಯಿಸುತ್ತದೆ. ಆದರೆ ಎಲ್ಲರ ಉದ್ದೇಶ ಒಂದೇ ಆಗಿರುತ್ತದೆ. ಪ್ರತಿಯೊಬ್ಬರೂ ಬೇರೆ ಬೇರೆ ದಾರಿಯಲ್ಲಿ ಕ್ರಮಿಸಬಹುದು. ಆದರೆ ಅವರ ಗುರಿ ಒಂದೇ ಆಗಿರುತ್ತದೆ. ಅಂತಿಮವಾಗಿ ಟೀಮ್ ಇಂಡಿಯಾ ಗೆಲ್ಲಬೇಕು ಎಂಬುದು" ಎಂದು ಸಚಿನ್ ತೆಂಡೂಲ್ಕರ್ ಹೇಳಿದ್ದಾರೆ.