For Quick Alerts
ALLOW NOTIFICATIONS  
For Daily Alerts
 

ಈ ವಿಚಾರದಲ್ಲಿ ಭಾರತ ತಂಡ ತಪ್ಪು ಮಾಡುತ್ತಿದೆ ಎಂದು ಟೀಕಿಸಿದ ಪಾಕಿಸ್ತಾನ ಮಾಜಿ ಕ್ರಿಕೆಟಿಗ

Former Pakistan Cricketer Quetions Team India Management For Not Giving Chances To Pacers

ವೇಗಿಗಳಿಗೆ ಸರಿಯಾಗಿ ಅವಕಾಶ ನೀಡದ ಬಗ್ಗೆ ಪಾಕಿಸ್ತಾನದ ಮಾಜಿ ಕ್ರಿಕೆಟಿಗ ಸಲ್ಮಾನ್ ಬಟ್ ಪ್ರಶ್ನೆ ಮಾಡಿದ್ದಾರೆ. ಪ್ರಸ್ತುತ ಭಾರತ ತಂಡದಲ್ಲಿ 130 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವ ವೇಗಿಗಳಿಗೆ ಹೆಚ್ಚಿನ ಅವಕಾಶ ನೀಡುತ್ತಿದೆ ಎಂದು ಅವರು ಹೇಳಿದ್ದಾರೆ. ಇದು ತಂಡದ ಅಭಿವೃದ್ಧಿಗೆ ಸಹಕಾರಿಯಲ್ಲಿ ಎಂದು ಅವರು ಅಭಿಪ್ರಾಯಪಟ್ಟಿದ್ದಾರೆ.

ಟೆ20 ವಿಶ್ವಕಪ್‌ನ ಸೆಮಿಫೈನಲ್‌ನಲ್ಲಿ ಇಂಗ್ಲೆಂಡ್ ವಿರುದ್ಧ ಸೋಲನುಭವಿಸಿದ ನಂತರ ಭಾರತ ತಂಡದ ಬೌಲಿಂಗ್ ಬಗ್ಗೆ ಸಾಕಷ್ಟು ಪ್ರಶ್ನೆಗಳು ಹುಟ್ಟಿಕೊಂಡಿವೆ. ನ್ಯೂಜಿಲೆಂಡ್ ವಿರುದ್ಧದ ಏಕದಿನ ಸರಣಿಯ ಮೊದಲನೇ ಪಂದ್ಯದಲ್ಲಿ ಕೂಡ ಭಾರತದ ಬೌಲಿಂಗ್ ದೌರ್ಬಲ್ಯ ಮತ್ತೊಮ್ಮೆ ಜಾಹೀರಾಯಿತು.

ಭಾರತ ತಂಡ 306 ರನ್ ಗಳಿಸಿದರೂ ಕೂಡ ಆ ಮೊತ್ತವನ್ನು ರಕ್ಷಿಸಿಕೊಳ್ಳುವಲ್ಲಿ ವಿಫಲವಾಯಿತು. ಟಾಮ್ ಲ್ಯಾಥಮ್ ಅಜೇಯ 145 ರನ್ ಮತ್ತು ಕೇನ್ ವಿಲಿಯಮ್ಸ್ ಅಜೇಯ 94 ರನ್‌ಗಳೊಂದಿಗೆ 221 ರನ್‌ಗಳ ಜೊತೆಯಾಟದ ನೆರವಿನಿಂದ ನ್ಯೂಜಿಲೆಂಡ್ 7 ವಿಕೆಟ್‌ಗಳ ಭರ್ಜರಿ ಜಯ ಸಾಧಿಸಿತು. ಭಾರತದ ಬೌಲಿಂಗ್ ವಿಭಾಗ ಎಷ್ಟು ಹರಸಾಹಸ ಪಟ್ಟರು ಇವರಿಬ್ಬರ ವಿಕೆಟ್ ಪಡೆಯಲು ಸಾಧ್ಯವಾಗಲಿಲ್ಲ.

ಟೀಂ ಇಂಡಿಯಾ ಈ ಬಗ್ಗೆ ಯೋಚಿಸಲಿ

ಟೀಂ ಇಂಡಿಯಾ ಈ ಬಗ್ಗೆ ಯೋಚಿಸಲಿ

ಟೀಮ್ ಇಂಡಿಯಾದ ವೇಗದ ಬೌಲಿಂಗ್ ಸಮಸ್ಯೆಗಳ ಕುರಿತು, ಸಲ್ಮಾನ್ ಬಟ್ ತಮ್ಮ ಯೂಟ್ಯೂಬ್ ಚಾನೆಲ್‌ನಲ್ಲಿ ಮಾತನಾಡಿದ್ದಾರೆ.

"ಭಾರತ ತಂಡ ಬೌಲಿಂಗ್ ಸಮಸ್ಯೆ ಬಗ್ಗೆ ಗಂಭೀರವಾಗಿ ಯೋಚಿಸಬೇಕು. ಅವರು ವೇಗದ ಬೌಲರ್ ಗಳಿಗೆ ಹೆಚ್ಚಿನ ಅವಕಾಶವನ್ನು ನೀಡಬೇಕು. ಮಧ್ಯಮ ವೇಗಿಗಳಿಗೆ ಹೆಚ್ಚಿನ ಅವಕಾಶ ನೀಡುವುದನ್ನು ಕಡಿಮೆ ಮಾಡಬೇಕು. ಹೆಚ್ಚಿನ ವೇಗದಲ್ಲಿ ಬೌಲಿಂಗ್ ಮಾಡುವವರಿಗೆ ಅವಕಾಶ ನೀಡುವ ಮೂಲಕ ಅದರ ಲಾಭ ಪಡೆಯಬೇಕು. 130 ಕಿಲೋ ಮೀಟರ್ ವೇಗದಲ್ಲಿ ಬೌಲಿಂಗ್ ಮಾಡುವವರನ್ನು ಆಡಿಸಿದರೆ ತಂಡದಲ್ಲಿ ಬೌಲಿಂಗ್ ಸುಧಾರಣೆ ಕಾಣುವುದಿಲ್ಲ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ನ್ಯೂಜಿಲೆಂಡ್ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅರ್ಷದೀಪ್ ಸಿಂಗ್ ಮತ್ತು ಉಮ್ರಾನ್ ಮಲಿಕ್‌ ಅಂತಾರಾಷ್ಟ್ರೀಯ ಏಕದಿನ ಕ್ರಿಕೆಟ್‌ಗೆ ಪದಾರ್ಪಣೆ ಮಾಡಿದರು. ಅವರ ಜೊತೆಯಲ್ಲಿ ಮಧ್ಯಮ ವೇಗಿ ಶಾರ್ದೂಲ್ ಠಾಕೂರ್ ಆಡುವ ಅವಕಾಶ ಪಡೆದಿದ್ದರು.

ಪತ್ನಿ ಧನಶ್ರೀ ವರ್ಮಾಗೆ 'ಕೂಲಿ' ಆದ ಯುಜ್ವೇಂದ್ರ ಚಹಾಲ್; ಶಿಖರ್ ಧವನ್ ರೀಲ್ ವೈರಲ್

ಉತ್ತಮವಾದ ಬೌಲಿಂಗ್ ಪಡೆ ಇಲ್ಲ

ಉತ್ತಮವಾದ ಬೌಲಿಂಗ್ ಪಡೆ ಇಲ್ಲ

ಸದ್ಯ ನ್ಯೂಜಿಲೆಂಡ್‌ ತಂಡಕ್ಕೆ ಮಾರಕವಾಗುವಂತಹ ಬೌಲರ್ ಭಾರತ ತಂಡದಲ್ಲಿ ಇಲ್ಲ ಎಂದು ಸಲ್ಮಾನ್ ಬಟ್ ಹೇಳಿದ್ದಾರೆ. ಮೊದಲ ಪಂದ್ಯದಲ್ಲಿ ಉಮ್ರಾನ್ ಮಲಿಕ್ ವೇಗವಾಗಿ ಬೌಲಿಂಗ್ ಮಾಡಿದರು. ಕೊನೆಯ 2-3 ಓವರ್ ಗಳಲ್ಲಿ ಅವರು ರನ್ ಬಿಟ್ಟುಕೊಟ್ಟರು, ಇತರೆ ಬೌಲರ್ ರೀತಿ ದುಬಾರಿಯಾಗಿರಲಿಲ್ಲ.

ಆದರೆ, ಅವರು ವಿಕೆಟ್ ಪಡೆಯುವಲ್ಲಿ ಯಶಸ್ವಿಯಾದರು. ಉತ್ತಮವಾದ ಬ್ಯಾಟಿಂಗ್ ಪಿಚ್‌ನಲ್ಲಿ ಭಾರತದ ಬೌಲಿಂಗ್ ಶಕ್ತಿ ಸೀಮಿತವಾಗಿದೆ ಎಂದು ಹೇಳಿದ್ದಾರೆ. ಉಮ್ರಾನ್ ಮಲಿಕ್ ಹೊರತುಪಡಿಸಿ ಉಳಿದ ಬೌಲರ್ ಗಳು ಪರಿಣಾಮಕಾರಿಯಾಗಿರಲಿಲ್ಲ ಎಂದು ಹೇಳಿದ್ದಾರೆ.

300 ರನ್‌ಗಳನ್ನು ರಕ್ಷಣೆ ಮಾಡುವುದು ಕಷ್ಟ

300 ರನ್‌ಗಳನ್ನು ರಕ್ಷಣೆ ಮಾಡುವುದು ಕಷ್ಟ

"ಭಾರತ ತಂಡ ಮೊದಲು ಬ್ಯಾಟಿಂಗ್ ಮಾಡಿ 370-375 ರನ್ ಗಳಿಸಿದರೆ ಮಾತ್ರ ನ್ಯೂಜಿಲೆಂಡ್ ವಿರುದ್ಧ ಗೆಲ್ಲುವ ಅವಕಾಶ ಇರುತ್ತದೆ. ಆದರೆ, ಅವರು 280 ಮತ್ತು 320 ರ ನಡುವೆ ಸ್ಕೋರ್ ಮಾಡಿದರು ಅದನ್ನು ರಕ್ಷಣೆ ಮಾಡುವುದು ಈ ಬೌಲಿಂಗ್ ಪಡೆಗೆ ಕಷ್ಟವಾಗಲಿದೆ, ಭಾರತ ತಂಡ ಈ ಎಲ್ಲಾ ವಿಚಾರಗಳ ಬಗ್ಗೆ ಯೋಚಿಸಬೇಕು ಎಂದು ಸಲ್ಮಾನ್ ಬಟ್ ಹೇಳಿದರು.

ನವೆಂಬರ್ 27 ರ ಭಾನುವಾರ ಹ್ಯಾಮಿಲ್ಟನ್‌ನಲ್ಲಿ ಭಾರತ ಮತ್ತು ನ್ಯೂಜಿಲೆಂಡ್ ನಡುವಿನ ಮೂರು ಪಂದ್ಯಗಳ ಸರಣಿಯ ಎರಡನೇ ಏಕದಿನ ಪಂದ್ಯವು ಮಳೆಯಿಂದಾಗಿ ರದ್ದಾಗಿದೆ. ಮೂರನೇ ಪಂದ್ಯ ನವೆಂಬರ್ 30 ಬುಧವಾರ ಕ್ರೈಸ್ಟ್‌ಚರ್ಚ್‌ನಲ್ಲಿ ನಡೆಯಲಿದೆ. ಈ ಪಂದ್ಯದಲ್ಲಿ ಭಾರತ ಗೆದ್ದರೆ ಸರಣಿ ಸಮಬಲವಾಗಲಿದೆ.

Story first published: Monday, November 28, 2022, 23:09 [IST]
Other articles published on Nov 28, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+