ಕಳೆದ ಕೆಲ ವರ್ಷಗಳಿಂದ ಸಮಸ್ಯೆಗಳು ಹೆಚ್ಚಳ
2013ರಲ್ಲಿ ಲೀಗ್ಗೆ ಸ್ಪಾಟ್ ಫಿಕ್ಸಿಂಗ್ನಿಂದ ಸಮಸ್ಯೆ, 2014ರಲ್ಲಿ ಲೋಕಸಭೆ ಚುನಾವಣೆಯಿಂದಾಗಿ ಅರ್ಧ ಟೂರ್ನಿ ಯುಎಇ ಯಲ್ಲಿ ನಡೆಯಿತು. 2015ರಲ್ಲಿ ಐಪಿಎಲ್ ಮುಗಿದ ಬೆನ್ನಲ್ಲೇ ರಾಜಸ್ಥಾನ ಹಾಗೂ ಚೆನ್ನೈ ತಂಡವನ್ನು 2 ವರ್ಷ ಅಮಾನತು ಮಾಡಲಾಯಿತು. ಈಗ ಬರದ ವಿಷಯವಾಗಿ ವಿವಾದಕ್ಕೆ ಗುರಿಯಾಗಿದೆ.
ಎಲ್ಲಾ ಕ್ರೀಡೆಗಳಿಗೂ ಮಾದರಿಯಾಗುತ್ತಿದೆ
ಐಪಿಎಲ್ ಕ್ರಿಕೆಟ್ ಮಾತ್ರವಲ್ಲ ಎಲ್ಲಾ ಕ್ರೀಡೆಗಳಿಗೂ ಮಾದರಿಯಾಗುತ್ತಿದೆ. ಹೊಸ ಪ್ರತಿಭೆಗಳಿಗೆ ವೇದಿಕೆ ಒದಗಿಸುವುದರ ಜೊತೆಗೆ ಬೇರೆ ಕ್ರೀಡೆಗಳ ಬೆಳವಣಿಗೆಗೂ ಕಾರಣವಾಗಿದೆ. ಅನೇಕ ಫ್ರಾಂಚೈಸಿ ಲೀಗ್ಗಳ ಆರಂಭವಾಗಿದೆ. ಕಬಡ್ಡಿ, ಫುಟ್ಬಾಲ್, ಬ್ಯಾಡ್ಮಿಂಟನ್ ಲೀಗ್ ನಡೆಯುತ್ತಿರುವುದು ಐಪಿಎಲ್ ನಿರ್ವಿುಸಿಕೊಟ್ಟ ವೇದಿಕೆಯಿಂದ ಎಂಬುದನ್ನು ಮರೆಯುವಂತಿಲ್ಲ.
ಪಂದ್ಯಾವಳಿ ಆರಂಭವಾದ ಮೇಲೆ ಕಿರಿಕಿರಿ ಏಕೆ?
ಬರ ಪರಿಸ್ಥಿತಿ ಬಗ್ಗೆ ಕನಿಕರ ಇರುವ ಜನರು ಇಲ್ಲಿ ತನಕ ಸುಮ್ಮನಿದ್ದು ಪಂದ್ಯಾವಳಿ ಆರಂಭವಾದ ಮೇಲೆ ಏಕೆ ಕೋರ್ಟ್ ಮೆಟ್ಟಿಲೇರಿದರು. ಸಮಾಜಿಕ ಕಳಕಳಿಯುಳ್ಳ ದೇಶದ ಒಬ್ಬ ಮಹಿಳೆಯಾಗಿ ನಾನು ಮಹಾರಾಷ್ಟ್ರದ ಹಳ್ಳಿಗಳಲ್ಲಿ ವಯೋವೃದ್ಧರಿಗೆ ನೆರವಾಗುತ್ತಾ ಬಂದಿದ್ದೇನೆ. ಕಾನೂನು ಸಮರ ನಡೆಸುವವರು ಏನು ಮಾಡುತ್ತಾರೋ ಕಾದು ನೋಡೋಣ. ದೇಶದ ಕಾನೂನು ವ್ಯವಸ್ಥೆ ಮೇಲೆ ನಂಬಿಕೆ ಇದೆ ಎಂದಿದ್ದಾರೆ.
ಕಿಂಗ್ಸ್ XI ಪಂಜಾಬ್ ತಂಡದ ಬಗ್ಗೆ
ಕಿಂಗ್ಸ್ XI ಪಂಜಾಬ್ ತಂಡದ ಬಗ್ಗೆ ಮಾತನಾಡಿದ ಪ್ರೀತಿ ಜಿಂಟಾ, ಕಳೆದ ಸೀಸನ್ ನಲ್ಲಿ ಉತ್ತಮ ಪ್ರದರ್ಶನ ನೀಡಲು ಸಾಧ್ಯವಾಗಲಿಲ್ಲ. 2014ರಲ್ಲಿ ಫೈನಲ್ ತಲುಪಿದ ತಂಡದಲ್ಲಿದ್ದ ಅನೇಕ ಆಟಗಾರರು ಈಗಲೂ ಆಡುತ್ತಿದ್ದಾರೆ. ಬೌಲಿಂಗ್ ಇನ್ನಷ್ಟು ಬಲಗೊಳ್ಳಬೇಕು. ಒಳ್ಳೆ ಫಲಿತಾಂಶದ ನಿರೀಕ್ಷೆಯಿದೆ ಎಂದಿದ್ದಾರೆ.