
ಪದೇ ಪದೇ ತಂಡದಲ್ಲಿ ಬದಲಾವಣೆ ಬೇಡ
ಪದೇ ಪದೇ ತಂಡದಲ್ಲಿ ಬದಲಾವಣೆ ಮಾಡುವುದರಿಂದ ತಂಡದ ಸಮತೋಲನದ ಮೇಲೆ ಪರಿಣಾಮ ಬೀರುತ್ತದೆ ಎಂದು ಸುನಿಲ್ ಗವಾಸ್ಕರ್ ಅಭಿಪ್ರಾಯಪಟ್ಟಿದ್ದಾರೆ. ಭಾರತ ತಂಡದ ಮ್ಯಾನೇಜ್ಮೆಂಟ್ 2023ರಲ್ಲಿ ನಡೆಯಲಿರುವ ಏಕದಿನ ವಿಶ್ವಕಪ್ಗೆ ಮುನ್ನ ಉತ್ತಮ ಬ್ಯಾಟಿಂಗ್ ಸಂಯೋಜನೆಯನ್ನು ನಿರ್ಧರಿಸುವ ಉದ್ದೇಶದಿಂದ ಹಲವರಿಗೆ ಅವಕಾಶ ನೀಡುತ್ತಿದೆ.
"ತಂಡದ ಬ್ಯಾಟಿಂಗ್ ಹೆಚ್ಚು ಆತಂಕ ಪಡುವ ಅಗತ್ಯವಿಲ್ಲ, ಆದರೆ ಏಕದಿನ ವಿಶ್ವಕಪ್ಗೆ ಒಂದು ವರ್ಷಕ್ಕಿಂತ ಕಡಿಮೆ ಸಮಯ ಉಳಿದಿದೆ. ಯಾವುದೇ ವಿಶ್ರಾಂತಿ ನೀಡುವ ಅಗತ್ಯವಿಲ್ಲ. ತಂಡದ ಆಟಗಾರರನ್ನು ಪದೇ ಪದೇ ಬದಲಾಯಿಸಬಾರದು, ಇದರಿಂದ ತಂಡದಲ್ಲಿನ ಸಮತೋಲನ ಹಾಳಾಗುತ್ತದೆ" ಎಂದು ಹೇಳಿದರು.
IND vs NZ 3rd ODI : 3ನೇ ಏಕದಿನ ಪಂದ್ಯಕ್ಕೂ ಮಳೆ ಕಾಟ; ಸರಣಿ ಸೋಲಿನ ಭೀತಿಯಲ್ಲಿ ಭಾರತ!

ಯಾವ ಆಟಗಾರನಿಗೂ ವಿಶ್ರಾಂತಿ ಬೇಡ
ದೀರ್ಘಾವಧಿಯವರೆಗೆ ಒಟ್ಟಿಗೆ ಆಡಲು ಅವಕಾಶ ನೀಡುವ ಸಲುವಾಗಿ ಬ್ಯಾಟರ್ಗಳಿಗೆ ವಿರಾಮ ನೀಡದಂತೆ ತಂಡದ ಮ್ಯಾನೇಜ್ಮೆಂಟ್ಗೆ ಸಲಹೆ ನೀಡಿದ್ದಾರೆ. ಸುನಿಲ್ ಗವಾಸ್ಕರ್ ಅವರ ಪ್ರಕಾರ, ಇದು ದೀರ್ಘಾವಧಿಯಲ್ಲಿ ತಂಡಕ್ಕೆ ಪ್ರಯೋಜನ ನೀಡುತ್ತದೆ.
"ಸೀಮಿತ ಓವರ್ ಕ್ರಿಕೆಟ್ನಲ್ಲಿ, ಬ್ಯಾಟಿಂಗ್ ಜೊತೆಯಾಟಗಳಲ್ಲಿ ಬ್ಯಾಟರ್ಗಳು ಪರಸ್ಪರರ ತೀರ್ಪಿನಲ್ಲಿ ವಿಶ್ವಾಸವನ್ನು ಹೊಂದಿರಬೇಕು, ಆದ್ದರಿಂದ ಹೆಚ್ಚಿನ ಅವಧಿಯವರೆಗೆ ಜೊತೆಯಲ್ಲಿ ಆಡಿದಾಗ ಮಾತ್ರ ಈ ಹೊಂದಾಣಿಕೆ ಸಾಧ್ಯವಾಗುತ್ತದೆ" ಎಂದು ಗವಾಸ್ಕರ್ ಹೇಳಿದ್ದಾರೆ.
ಬಿಡುವಿಲ್ಲದ ಅಂತಾರಾಷ್ಟ್ರೀಯ ವೇಳಾಪಟ್ಟಿಯನ್ನು ಗಮನದಲ್ಲಿಟ್ಟುಕೊಂಡು, ನ್ಯೂಜಿಲೆಂಡ್ ಪ್ರವಾಸದಲ್ಲಿ ಭಾರತ ತಂಡದ ಆಡಳಿತ ಮಂಡಳಿ ನಿಯಮಿತವಾಗಿ ಆಟಗಾರರಿಗೆ ವಿಶ್ರಾಂತಿ ನೀಡಲು ನಿರ್ಧರಿಸಿತು.

ಆಟಗಾರರ ಜೊತೆ ಕೋಚ್ಗೆ ಕೂಡ ವಿಶ್ರಾಂತಿ
ಆಟಗಾರರು ಮಾತ್ರವಲ್ಲದೆ ಕೋಚಿಂಗ್ ಸಿಬ್ಬಂದಿ ಕೂಡ ವಿಶ್ರಾಂತಿಯಲ್ಲಿದ್ದಾರೆ. ಮಾಜಿ ಮುಖ್ಯ ಕೋಚ್ ರವಿಶಾಸ್ತ್ರಿ ಮುಖ್ಯ ಕೋಚ್ ರಾಹುಲ್ ದ್ರಾವಿಡ್ ವಿಶ್ರಾಂತಿ ತೆಗೆದುಕೊಂಡ ಬಗ್ಗೆ ಟೀಕೆ ಮಾಡಿದ್ದಾರೆ. ನಾನು ವಿರಾಮಗಳನ್ನು ನಂಬುವುದಿಲ್ಲ, ತಂಡ ಮತ್ತು ಆಟಗಾರರ ನಡುವೆ ಹೊಂದಾಣಿಕೆ ಇರಬೇಕು. ಪ್ರಾಮಾಣಿಕವಾಗಿ ಹೇಳಬೇಕೆಂದರೆ ಇಷ್ಟು ವಿರಾಮಗಳ ಅಗತ್ಯವಿಲ್ಲ ಎಂದು ರವಿಶಾಸ್ತ್ರಿ ಹೇಳಿದರು.
ಹಿರಿಯ ಕ್ರಿಕೆಟಿಗರು ವಿರಾಮದಲ್ಲಿರುವಾಗ ಪ್ರತಿಭಾವಂತ ವ್ಯಕ್ತಿಗೆ ಅವಕಾಶ ನೀಡುವುದು ನಂತರ ಅವರು ಉತ್ತಮ ಪ್ರದರ್ಶನ ನೀಡಿದ ಹೊರತಾಗಿಯೂ ಅವರನ್ನು ಕೈಬಿಡುವುದು ಯುವಕರ ಆತ್ಮವಿಶ್ವಾಸಕ್ಕೆ ಅಡ್ಡಿಯಾಗಬಹುದು.
ಭಾರತ ತಂಡ ಕೊನೆಯ ಬಾರಿಗೆ 2013ರಲ್ಲಿ ಕೊನೆಯ ಬಾರಿಗೆ ಐಸಿಸಿ ಪಂದ್ಯಾವಳಿಯನ್ನು ಗೆದ್ದುಕೊಂಡಿತು. 2011ರಲ್ಲಿ ಎಂಎಸ್ ಧೋನಿ ನಾಯಕತ್ವದಲ್ಲಿ 50 ಓವರ್ ಗಳ ವಿಶ್ವಕಪ್ ಅನ್ನುಗೆದ್ದುಕೊಂಡಿತ್ತು.


Click it and Unblock the Notifications












