For Quick Alerts
ALLOW NOTIFICATIONS  
For Daily Alerts
 

ಅಜಿಂಕ್ಯ ರಹಾನೆ ಮತ್ತು ಪೂಜಾರ ಮತ್ತೆ ಟೆಸ್ಟ್ ತಂಡಕ್ಕೆ ಮರಳುವುದು ಕಷ್ಟಸಾಧ್ಯ: ಸುನಿಲ್ ಗವಾಸ್ಕರ್

Ajinkya rahane and pujara

ಶ್ರೀಲಂಕಾ ವಿರುದ್ಧದ ಮುಂಬರುವ ಟೆಸ್ಟ್ ಸರಣಿಗೆ ಭಾರತ ತಂಡವನ್ನ ಪ್ರಕಟಿಸಿದಾಗ ಹಲವು ಹಿರಿಯ ಆಟಗಾರರ ಅನುಪಸ್ಥಿತಿ ಕಂಡುಬಂದಿದೆ. ಅದರಲ್ಲಿ ಪ್ರಮುಖ ಆಟಗಾರರೆಂದರೆ ಚೇತೇಶ್ವರ್ ಪೂಜಾರ, ಅಜಿಂಕ್ಯ ರಹಾನೆ , ಇಶಾಂತ್ ಶರ್ಮಾ ಹಾಗೂ ವೃದ್ದಿಮಾನ್ ಸಾಹಾ ಆಗಿದ್ದಾರೆ.

ಆದ್ರೆ ರಹಾನೆ ಮತ್ತು ಪೂಜಾರ ಇತ್ತೀಚಿನ ಕಳಪೆ ಪ್ರದರ್ಶನದಿಂದಾಗಿ ಟೀಂ ಇಂಡಿಯಾದಿಂದ ಸ್ಥಾನ ಕಳೆದುಕೊಂಡಿದ್ದಾರೆ. ಕಳೆದ ಹಲವು ವರ್ಷಗಳಿಂದ ಈ ಇಬ್ಬರು ಆಟಗಾರರು ಭಾರತ ಟೆಸ್ಟ್ ಕ್ರಿಕೆಟ್‌ನ ಆಧಾರ ಸ್ತಂಭವಾಗಿದ್ದರು. ಆದರೆ ಕಳೆದ ಎರಡೂವರೆ ವರ್ಷಗಳಿಂದ ಸಂಪೂರ್ಣ ನಿರಾಸೆ ಮೂಡಿಸಿದ್ದ ಇವರಿಬ್ಬರು ಶ್ರೀಲಂಕಾ ಸರಣಿಯಿಂದ ಹೊರಗುಳಿದಿದ್ದಾರೆ.

ರಣಜಿ ಆಡಲು ಕಳುಹಿಸಿದ ಬಿಸಿಸಿಐ

ರಣಜಿ ಆಡಲು ಕಳುಹಿಸಿದ ಬಿಸಿಸಿಐ

ದಕ್ಷಿಣ ಆಫ್ರಿಕಾದ ಸರಣಿಯು ಇಬ್ಬರಿಗೂ ಕೊನೆಯ ಟೆಸ್ಟ್ ಸರಣಿ ಆಗಿತ್ತು. ಇದರೊಂದಿಗೆ ಬಿಸಿಸಿಐ ಇಬ್ಬರನ್ನೂ ಫಾರ್ಮ್ ಸಾಬೀತುಪಡಿಸಿ ರಣಜಿ ಟ್ರೋಫಿ ಆಡಿದ ನಂತರ ಮರಳುವಂತೆ ಕೇಳಿಕೊಂಡಿದೆ. ಇದರ ಪ್ರಕಾರ ಇಬ್ಬರೂ ರಣಜಿ ಆಡಿದ್ದು ರಹಾನೆ ಶತಕ ಹಾಗೂ ಪೂಜಾರ ಅರ್ಧಶತಕ ದಾಖಲಿಸಿದರು. ಆದ್ರೂ ಸಹ ಇವರಿಬ್ಬರ ಮುಂದೆ ಭಾರತ ತಂಡದ ಬಾಗಿಲು ಸಂಪೂರ್ಣ ಮುಚ್ಚಿದೆಯೇ ಎಂಬುದನ್ನು ಕಾದು ನೋಡಬೇಕಿದೆ.

ಟೀಂ ಇಂಡಿಯಾಗೆ ಮರಳುವುದು ಸುಲಭವಲ್ಲ: ಸುನಿಲ್ ಗವಾಸ್ಕರ್

ಟೀಂ ಇಂಡಿಯಾಗೆ ಮರಳುವುದು ಸುಲಭವಲ್ಲ: ಸುನಿಲ್ ಗವಾಸ್ಕರ್

ಟೀಮ್ ಮ್ಯಾನೇಜ್‌ಮೆಂಟ್ ಮೂಲಗಳ ಪ್ರಕಾರ, ಅವರು ಮರಳಲು ಇನ್ನೂ ಅವಕಾಶವಿದೆ. ಆದರೆ ಭಾರತ ತಂಡದ ಮಾಜಿ ನಾಯಕ ಮತ್ತು ಲೆಜೆಂಡ್ ಸುನಿಲ್ ಗವಾಸ್ಕರ್ ಇಬ್ಬರಿಗೂ ಭಾರತ ತಂಡಕ್ಕೆ ವಾಪಸ್ಸಾತಿ ಸುಲಭವಲ್ಲ ಎಂದು ಹೇಳಿದ್ದಾರೆ. ದಕ್ಷಿಣ ಆಫ್ರಿಕಾದಲ್ಲಿ ನಡೆದ ಟೆಸ್ಟ್ ಸರಣಿಯಲ್ಲಿ ಶತಕ ಅಥವಾ 80 ರಿಂದ 90 ರನ್ ಗಳಿಸಿದ್ದರೆ ಪರಿಸ್ಥಿತಿ ಬದಲಾಗುತ್ತಿತ್ತು. ಅಜಿಂಕ್ಯ ರಹಾನೆ ಆಕ್ರಮಣಕಾರಿ ಆಟವಾಡಿದ್ದು ನಿಜ. ಆದರೆ ಅದಕ್ಕೆ ತಕ್ಕಂತೆ ರನ್ ಗಳಿಸಬೇಕು. ತಂಡಕ್ಕೆ ರನ್‌ಗಳ ಅಗತ್ಯವಿತ್ತು ಮತ್ತು ಅದನ್ನು ಪಡೆಯಲು ಸಾಧ್ಯವಾಗಲಿಲ್ಲ "ಎಂದು ಸುನಿಲ್ ಗವಾಸ್ಕರ್ ಹೇಳಿದರು.

ಉತ್ತಮ ಫಾರ್ಮ್‌ನಲ್ಲಿಲ್ಲ ರಹಾನೆ ಮತ್ತು ಪೂಜಾರ

ಉತ್ತಮ ಫಾರ್ಮ್‌ನಲ್ಲಿಲ್ಲ ರಹಾನೆ ಮತ್ತು ಪೂಜಾರ

ರಹಾನೆ ಮತ್ತು ಪೂಜಾರ ಬಹಳ ದಿನಗಳಿಂದ ಕೆಟ್ಟ ಫಾರ್ಮ್‌ನಲ್ಲಿದ್ದಾರೆ. ಆದರೆ ಭಾರತ ಛಲ ಬಿಡದೆ ಎರಡನ್ನೂ ಹಿಡಿದಿಟ್ಟುಕೊಳ್ಳುವ ನಿಲುವು ತಳೆದಿದೆ. ಕೋಚ್ ರಾಹುಲ್ ದ್ರಾವಿಡ್ ಕೂಡ ಹಿರಿಯ ಆಟಗಾರರಿಗೆ ಸಾಕಷ್ಟು ಬೆಂಬಲ ನೀಡಿದರು. ಆದರೆ, ಫಾರ್ಮ್‌ಗೆ ಮರಳಲು ಸಾಧ್ಯವಾಗದ ಕಾರಣ ತಂಡದ ಮ್ಯಾನೇಜ್‌ಮೆಂಟ್ ಅವರನ್ನು ಬದಲಾಯಿಸಲು ಒತ್ತಾಯಿಸಲಾಯಿತು ಎಂದು ಹೇಳಬಹುದು.

ಇಬ್ಬರೂ ಖಂಡಿತವಾಗಿಯೂ ಭಾರತ ತಂಡಕ್ಕೆ ಮರಳಬಹುದು. ಆದರೆ ಪ್ರತಿ ರಣಜಿ ಪಂದ್ಯದಲ್ಲೂ 200 ರಿಂದ 250 ರನ್ ಗಳಿಸಲೇಬೇಕು. ಹಾಗಿದ್ದಲ್ಲಿ, ನೀವು ಖಂಡಿತವಾಗಿಯೂ ಹಿಂತಿರುಗಬಹುದು. ಆದರೆ ರಣಜಿ ಟ್ರೋಫಿ ನಂತರ ಒಂದೇ ಒಂದು ಟೆಸ್ಟ್ ಇದ್ದು, ಅದು ಇಂಗ್ಲೆಂಡ್ ವಿರುದ್ಧ ಭಾರತ ಆಡಲಿದೆ. ಅದರ ನಂತರ ಟಿ20 ವಿಶ್ವಕಪ್ ನಡೆಯಲಿದೆ. ಆದ್ದರಿಂದ ಮುಂದಿನ ಟೆಸ್ಟ್ ಸರಣಿಯು ನವೆಂಬರ್ ಮತ್ತು ಡಿಸೆಂಬರ್‌ನಲ್ಲಿ ನಡೆಯಲಿದೆ. ಇಬ್ಬರ ವಯಸ್ಸನ್ನು ಗಮನಿಸಿದರೆ ಅದೊಂದು ಸಮಸ್ಯೆಯಾಗಲಿದೆ. ಯುವ ಆಟಗಾರರಿಗೆ ಅವಕಾಶ ಸಿಕ್ಕರೆ ಮತ್ತು ಅದನ್ನು ಸದುಪಯೋಗಪಡಿಸಿಕೊಂಡರೆ, ರಹಾನೆ ಮತ್ತು ಪೂಜಾರ ಮರಳಲು ಕಷ್ಟವಾಗುತ್ತದೆ, "ಎಂದು ಗವಾಸ್ಕರ್ ಹೇಳಿದರು.

ಟೀಂ ಇಂಡಿಯಾ ಪ್ರವೇಶಿಸಿರುವ ಯುವ ಆಟಗಾರರು

ಟೀಂ ಇಂಡಿಯಾ ಪ್ರವೇಶಿಸಿರುವ ಯುವ ಆಟಗಾರರು

ಸದ್ಯಕ್ಕೆ ಶ್ರೇಯಸ್ ಅಯ್ಯರ್, ಹನುಮ ವಿಹಾರಿ, ಪ್ರಿಯಾಂಕ್ ಪಾಂಚಾಲ್ ಮುಂತಾದ ಹಲವು ತಾರೆಯರು ಅವಕಾಶಕ್ಕಾಗಿ ಕಾಯುತ್ತಿದ್ದಾರೆ. ಭಾರತದ ಭವಿಷ್ಯವನ್ನು ಪರಿಗಣಿಸುವಾಗ ಅವರನ್ನ ಪೋಷಿಸುವುದು ಬಹಳ ಮುಖ್ಯ. ಆ ನಿಟ್ಟಿನಲ್ಲಿ ಇದೀಗ ಬಿಸಿಸಿಐ ನಿರ್ಣಾಯಕ ಹೆಜ್ಜೆ ಇಟ್ಟಿದೆ ಎನ್ನಬಹುದು. ಭಾರತದ ಭವಿಷ್ಯದ ಬಗ್ಗೆ ಯೋಚಿಸುವಾಗ ಈ ಬದಲಾವಣೆಯು ಪ್ರಯೋಜನಕಾರಿಯಾಗಿದೆ. ಪೂಜಾರ ಮತ್ತು ರಹಾನೆ ಹೊರತಾಗಿ ಇಶಾಂತ್ ಶರ್ಮಾ ಮತ್ತು ವೃದ್ಧಿಮಾನ್ ಸಹಾ ಅವರನ್ನು ಭಾರತ ತಂಡದಿಂದ ಕೈಬಿಟ್ಟಿದೆ. ಈ ಆಟಗಾರರು ಹಿಂತಿರುಗುವುದು ಕಷ್ಟಸಾಧ್ಯವಾಗಿದೆ.

Story first published: Tuesday, February 22, 2022, 16:48 [IST]
Other articles published on Feb 22, 2022
Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+