ದ್ರಾವಿಡ್ ಕ್ರಿಕೆಟ್ ಪ್ರೀತಿಗೆ ಕನ್ನಡಿ
ಬೇರೆ ಎಲ್ಲಾ ಮಾಜಿ ಕ್ರಿಕೆಟರ್ಗಳು ಐಪಿಎಲ್ ನಲ್ಲಿ ಬ್ಯುಸಿಯಾಗಿದ್ದರೆ, ರಾಹುಲ್ ದ್ರಾವಿಡ್ ಮಾತ್ರ ಭಾರತದ ಕ್ರಿಕೆಟ್ ಭವಿಷ್ಯವನ್ನು ಭದ್ರ ಮಾಡುವಲ್ಲಿ ನಿರತರಾಗಿದ್ದಾರೆ. ಎಂಬ ಅರ್ಥ ಪೂರ್ಣ ಟ್ವೀಟ್ ಹಾಕಿದವರು ರಾಹುಲ್ ವಸ್ವಾನಿ.
ಕ್ರಿಕೆಟ್ ಬಿಟ್ಟು ಇನ್ನೇನಕ್ಕೂ ಇಲ್ಲಿ ಸ್ಥಳವಿಲ್ಲ
'ಇದು ರಾಹುಲ್ ದ್ರಾವಿಡ್ ಅವರು ಕಟ್ಟಿರುವ ತಂಡ ಇಲ್ಲಿ, ಉದ್ರೇಕ, ಮೂರ್ಖತನ, ಭಾವಾವೇಶಕ್ಕೆ ಜಾಗವಿಲ್ಲ, ಏನಿದ್ದರು ಕ್ರಿಕೆಟ್ ಅಷ್ಟೆ, ಮೌನವಾಗಿದ್ದುಕೊಂಡು ಸಾಧಿಸಿತೋರಿಸುವವರ ತಂಡ' ಎಂದು ಮಯಾಂಕ್ ನೆಮಾ ಎಂಬುವರು ಬರೆದುಕೊಂಡಿದ್ದಾರೆ.
ದ್ರಾವಿಡ್ ಹೆಕ್ಕಿದ ಪ್ರತಿಭೆ
ಭಾರತ ಕ್ರಿಕೆಟ್ ತಂಡದ ಭವಿಷ್ಯದ ತಾರೆಗಳಿವರು, ಖಂಡಿತಾ ಈ ತಂಡದಿಂದ 5-6 ಜನ ಭಾರತ ಕ್ರಿಕೆಟ್ ತಂಡವನ್ನು ಪ್ರತಿನಿಧಿಸುತ್ತಾರೆ. ಎಲ್ಲಾ ಶ್ರೇಯ ದ್ರಾವಿಡ್ಗೆ ಸಲ್ಲಬೇಕು, ಆಟಗಾರರಲ್ಲಿನ ಪ್ರತಿಭೆಗೆ ಮೆರುಗು ನೀಡಿದವರವರು. ಅವರಿಗೆ ರಾಷ್ಟ್ರ ಪ್ರಶಸ್ತಿ ನೀಡಿ ಗೌರವಿಸಬೇಕು ಎಂದಿರುವವರು ಅರ್ಮಿಷ್ ಪರೇಖ್.
ರಾಹುಲ್ ಅವರನ್ನು ಮರೆಯುವ ಹಾಗಿಲ್ಲ
ಭಾರತದ ಅಂಡರ್19 ಕ್ರಿಕೆಟ್ ತಂಡದ ಯಶಸ್ಸಿನ ಹಿಂದೆ ಇರುವ ವ್ಯಕ್ತಿಯನ್ನು ಮರೆಯುವುದು ಬೇಡ. ಗೋಡೆ ಇನ್ನೂ ಭಾರತದ ಕ್ರಿಕೆಟ್ ಅನ್ನು ರಕ್ಷಿಸುತ್ತಿದೆ ಎಂದು ಟ್ವೀಟ್ ಮಾಡಿದ್ದಾರೆ ಉಮಂಗ್ ಮಿಶ್ರಾ.
ದಂತ ಕತೆ ದ್ರಾವಿಡ್
ಟ್ವಿಟರ್ನಲ್ಲಿ ತನ್ನದೇ ಆದ ಅಭಿಮಾನಿ ಬಳಗ ಹೊಂದಿರುವ ಸರ್ ರವೀಂದ್ರ ಜಡೇಜಾ ಎಂಬ ಖಾತೆಯ ಮೂಲಕ ದ್ರಾವಿಡ್ ಅವರಿಗೆ ಅಭಿನಂದನೆಗಳು ಸಲ್ಲಿಕೆಯಾಗಿದ್ದು, ದ್ರಾವಿಡ್ ಅವರ ಶ್ರಮಕ್ಕೆ ಅಭಿನಂದನೆಗಳು, ಅವರು ತಂಡವನ್ನು ಎಲ್ಲಾ ವಿಭಾಗದಲ್ಲೂ ಗಟ್ಟಿಗೊಳಿಸಿದ್ದಾರೆ ಎಂದು ಬರೆದು ತಮ್ಮ ಗೌರವ ಅರ್ಪಿಸಿದ್ದಾರೆ.


Click it and Unblock the Notifications











