ಬರೋಡಾ, ಅಕ್ಟೋಬರ್ 19: ಈ ಬಾರಿಯ ದೀಪಾವಳಿ ಹಬ್ಬವನ್ನು ಭಾರತ ಕ್ರಿಕೆಟ್ ತಂಡದ ಆಲ್ ರೌಂಡರ್ ಯುಸೂಫ್ ಪಠಾಣ್ ವಿಶೇವಾಗಿ ಆಚರಿಸಿದ್ದಾರೆ.
ಬರೋಡಾ ವಿಮಾನ ನಿಲ್ದಾಣದಲ್ಲಿ ಗುರುವಾರ ಸೈನಿಕರಿಗೆ ಸಿಹಿ ಹಂಚಿ ಪರಸ್ಪರ ಶುಭಾಶಯ ವಿನಿಮಯ ಮಾಡಿಕೊಂಡರು. ಅಷ್ಟೇ ಅಲ್ಲದೇ ಹಬ್ಬದ ಸಮಯದಲ್ಲೂ ಸೇವೆ ಸಲ್ಲಿಸುವ ಸೈನಿಕರ ಬಗ್ಗೆ ಅಪಾರ ಗೌರವ ಇದೆ ಎಂದು ಯುಸೂಫ್ ಟ್ವಿಟ್ಟರ್ ನಲ್ಲಿ ಹಂಚಿಕೊಂಡು ಸಂತಸ ವ್ಯಕ್ತಪಡಿಸಿದ್ದಾರೆ.
ಯುಸೂಫ್ ಅವರ ಈ ಟ್ವೀಟ್ ಗೆ ಸಾಮಾಜಿಕ ಜಾಲತಾಣಗಳಲ್ಲಿ ಭಾರೀ ಪ್ರಶಸಂಸೆಗಳು ವ್ಯಕ್ತವಾಗಿದ್ದು, ಸೈನಿಕರ ಬಗ್ಗೆ ಯುಸೂಫ್ ಪಠಾಣ್ ಗೆ ಇರುವ ಗೌರವಕ್ಕೆ ಟ್ವಿಟ್ಟರ್ ನಲ್ಲಿ ಅಭಿನಂದನೆಗಳ ಮಹಾಪೂರ ಹರಿದು ಬಂದಿವೆ.
Salute to the #jawans who are working even on the festival day. We exchanged sweets at the Baroda airport on the occassion of Diwali. #HappyDiwali pic.twitter.com/mtkdsEfNpA
— Yusuf Pathan (@iamyusufpathan) October 18, 2017
ಹಾಗೂ ಯುಸೂಫ್ ಪಠಾಣ್ ದೀಪಾವಳಿಯ ದಿನದಂದು ಇಂದು ಹೊಸ ಐ-ಫೋನ್ 8 ಪ್ಲಸ್ ಖರೀದಿಸಿದ್ದಾರೆ. ಈ ಸಂತೋಷವನ್ನು ಟ್ವಿಟ್ಟರ್ ನಲ್ಲಿ ಹಂಚಿಕೊಂಡಿದ್ದಾರೆ.
Really enjoying using this new iPhone 8 plus. #shotoniPhone8Plus pic.twitter.com/52gFAlfiu1
— Yusuf Pathan (@iamyusufpathan) October 19, 2017
ಮತ್ತೊಂದೆಡೆ ಪ್ರಧಾನಿ ನರೇಂದ್ರ ಮೋದಿ ಸೈನಿಕರ ಜತೆ ದೀಪಾವಳಿ ಸಂಭ್ರಮದಲ್ಲಿ ಪಾಲ್ಗೊಂಡಿದ್ದಾರೆ. ಜಮ್ಮು ಮತ್ತು ಕಾಶ್ಮೀರ ರಾಜ್ಯದ ಗಡಿ ನಿಯಂತ್ರಣ ರೇಖೆ ಬಳಿಯಲ್ಲಿರುವ ಗೂರೆಜ್ ಕಣಿವೆಯಲ್ಲಿ ಭಾರತೀಯ ಸೇನೆ ಮತ್ತು ಗಡಿ ಭದ್ರತಾ ಪಡೆ ಯೋಧರ ಜತೆ ಪ್ರಧಾನಿಗಳು ದೀಪಾವಳಿ ಆಚರಿಸಿದರು.