ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
ಇಂಡಿಯನ್ ಸೂಪರ್ ಲೀಗ್ ಪೂರ್ವಭಾವಿಗಳು
VS

ಹೊಟ್ಟೆಪಾಡಿಗಾಗಿ ಆಡು ಮೇಯಿಸುತ್ತಿದ್ದಾರೆ ಮಾಜಿ ಫುಟ್ಬಾಲರ್ ತನುಜಾ!

Former Indian team women football team goalkeeper herds goats for a living

ಭುವನೇಶ್ವರ್, ಜುಲೈ 5: ಕೇವಲ 8 ವರ್ಷಗಳ ಹಿಂದಷ್ಟೇ ಭಾರತ ಫುಟ್ಬಾಲ್ ತಂಡದಲ್ಲಿದ್ದು, ಎದುರಾಳಿ ತಂಡದ ಗೋಲ್ ಪ್ರಯತ್ನಗಳಿಗೆ ತಡೆಯೊಡ್ಡುತ್ತಿದ್ದ ಆಟಗಾರ್ತಿ ಈಗ ಜೀವನೋಪಾಯಕ್ಕಾಗಿ ಊರಿನಲ್ಲಿ ಅವರಿವರ ಮನೆಯ ಆಡು ಮೇಯಿಸುವ ಕಾಯಕ ನಡೆಸುತ್ತಿದ್ದಾರೆ. ಇದು ಒಡಿಶಾದ ತನುಜಾ ಭಾಗೆ ಅವರ ಕತೆ.

ಕುತೂಹಲಕಾರಿ ಸ್ಟೋರಿಗಳು, ಅಂಕಿ-ಅಂಶಗಳು 'ಐಸಿಸಿ ಕ್ರಿಕೆಟ್ ವಿಶ್ವಕಪ್ 2019' ವಿಶೇಷ ಮುಖಪುಟದಲ್ಲಿವೆ

ಒಡಿಶಾ ರಾಜ್ಯದ ಝಾರ್ಸುಗುಡ ಜಿಲ್ಲೆಯ ದೇಬಾದಿಹಿ ಗ್ರಾಮದಲ್ಲಿ ಬಡ ಬುಡಕಟ್ಟು ಕುಟುಂಬದಲ್ಲಿ ಜನಿಸಿದ ತನುಜಾ ಭಾಗೆ ಅವರು 2011ರ ವರೆಗೂ ಫುಟ್ಬಾಲ್ ಆಟಗಾರ್ತಿಯಾಗಿ ಗಮನ ಸೆಳೆದಿದ್ದವರು. ಆದರೆ ಮನೆಯ ಬಡತನ ಅವರನ್ನು ಕ್ರೀಡೆಯಲ್ಲಿ ಮುಂದುವರೆಯಲು ಬಿಡಲಿಲ್ಲ. ಈಗ ತನುಜಾ ಅವರು ಹೊಟ್ಟೆಪಾಡಿಗಾಗಿ ಊರಿನ ಅವರಿವರ ಆಡು ಕಾಯುವ ಕೆಲಸ ಮಾಡುತ್ತಿದ್ದಾರೆ.

ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!ಬುಮ್ರಾ ಬೌಲಿಂಗ್‌ ಯಶಸ್ಸಿನ ಗುಟ್ಟನ್ನು ರಟ್ಟು ಮಾಡಿದ ಮಾಲಿಂಗ!

2003ರಲ್ಲಿ ವೇದಾಂತ ಸಾಂಸ್ಥಿಕ ಸಾಮಾಜಿಕ ಜವಾಬ್ದಾರಿ ಕಾರ್ಯಕ್ರಮದ ತರಬೇತಿಯಲ್ಲಿ ಪಾಲ್ಗೊಂಡಿದ್ದಾಗ ತನಿಜಾ ತನ್ನ ಕ್ರೀಡಾ ಪ್ರತಿಭೆ ತೋರಿಕೊಂಡಿದ್ದರು. ಆಗ ಭಾಗೆಗಿನ್ನೂ 14ರ ಹರೆಯ. ಫುಟ್ಬಾಲ್ ಆಡೋದನ್ನು ಚುರುಕಾಗಿ ಕಲಿತರು. ಅನಂತರ ಭಾಗೆ, ಒಡಿಶಾ ರಾಜ್ಯ ತಂಡ ಸೇರಿಕೊಂಡವನ್ನು ಸೇರಿಕೊಂಡರು. ಒಂದೊಮ್ಮೆ ಭಾರತ ತಂಡದಲ್ಲೂ ಆಡಿದ್ದರು.

ವಿಶ್ವಕಪ್: ಏಕದಿನ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಹೇಳಲಿದ್ದಾರೆ ತಾಹಿರ್ವಿಶ್ವಕಪ್: ಏಕದಿನ ಕ್ರಿಕೆಟ್‌ಗೆ ಭಾವನಾತ್ಮಕ ವಿದಾಯ ಹೇಳಲಿದ್ದಾರೆ ತಾಹಿರ್

ಫುಟ್ಬಾಲ್ ಮೈದಾನದಲ್ಲಿ ಅದ್ಭುತ ಪ್ರದರ್ಶನ ನೀಡುತ್ತಿದ್ದ ಭಾಗೇಗೆ ಸಾಲು ಸಾಲು ಟ್ರೋಫಿಗಳು, ಪದಕಗಳು, ಪ್ರಶಸ್ತಿ ಪತ್ರಗಳು ಲಭಿಸಿದವು. ಕೆಲ ವರ್ಷಗಳಿಗೆ ಹಿಂದೆ ಝಾರ್ಸುಗುಡ ಜಿಲ್ಲೆಯ ಪೊಲೀಸ್ ಠಾಣೆಯಲ್ಲಿ ಪೊಲೀಸ್ ಹೋಮ್ ಗಾರ್ಡ್ ಕೆಲಸವೂ ಲಭಿಸಿತ್ತು. ಆದರೆ ಅಲ್ಲಿ ಸಿಗುತ್ತಿದ್ದ ತೀರಾ ಕಡಿಮೆ ಸಂಬಳದಿಂದ ಕುಟುಂಬ ನಡೆಸೋದೇ ಕಷ್ಟವಾಗಿದ್ದರಿಂದ ತನುಜಾ ಆ ಕೆಲಸ ತೊರೆಯಬೇಕಾಯಿತು.

ಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್: ಹಿಮಾ ದಾಸ್‌ಗೆ ಬಂಗಾರದ ಪದಕಪೊಝ್ನಾನ್ ಅಥ್ಲೆಟಿಕ್ಸ್ ಗ್ರ್ಯಾಂಡ್ ಪ್ರಿಕ್ಸ್: ಹಿಮಾ ದಾಸ್‌ಗೆ ಬಂಗಾರದ ಪದಕ

'ಒಡಿಶಾ ಪ್ರತಿನಿಧಿಸಿ ಬಿಹಾರ, ಘತ್ತೀಸ್‌ಗಢ, ಝಾರ್ಖಂಡ್ ಮತ್ತು ಬೆಂಗಾಲ್ ರಾಜ್ಯಗಳಲ್ಲಿ ನಾನು ಆಡಿದ್ದೇನೆ. ಇದರಲ್ಲಿ ಮಣಿಪುರ ವಿರುದ್ಧ ನಾವು ಫೈನಲ್‌ನಲ್ಲಿ ಸೋತೆವು. ಪ್ರದರ್ಶನ ಪಂದ್ಯವೊಂದರಲ್ಲಿ ಭಾರತ ತಂಡದಲ್ಲಿ ನಾನು ಗೋಲ್ ಕೀಪರ್‌ ಆಗಿ ಆಡಿದ್ದೆ. ಆವತ್ತು ನೇಪಾಳ ವಿರುದ್ಧ ನಾವು ಗೆದ್ದಿದ್ದೆವು' ಎಂದು ತನುಜಾ ತನ್ನ ಬದುಕಿನ ಕ್ರೀಡಾ ದಿನಗಳನ್ನು ಸ್ಮರಿಸಿಕೊಂಡರು.

ಧೋನಿ ಒಬ್ಬ ಸೈನಿಕ, ಕೈಬೆರಳಿನ ಗಾಯ ಸಮಸ್ಯೆಯೇ ಅಲ್ಲವಂತೆ!ಧೋನಿ ಒಬ್ಬ ಸೈನಿಕ, ಕೈಬೆರಳಿನ ಗಾಯ ಸಮಸ್ಯೆಯೇ ಅಲ್ಲವಂತೆ!

ಮಾತು ಮುಂದುವರೆಸಿದ ಭಾಗೆ, 'ಆ ಕ್ರೀಡಾ ಕ್ಷಣಗಳು ಈಗ ಮುಗಿದಿದೆ. ಮತ್ತೆ ಇದನ್ನೆಲ್ಲಾ ನೆನಪಿಸಿಕೊಳ್ಳುವ ಗೋಜಿಗೆ ಹೋಗಲಿಲ್ಲ' ಎಂದು ವಿಷಾದದಿಂದ ನುಡಿದರು. ಜೀವನ ನಡೆಸಲು ಸರ್ಕಾರದಿಂದ ಏನಾದರೂ ಪ್ರೋತ್ಸಾಹ ಲಭಿಸಬಹುದು ಎಂದು ಕಾದು ಸೋತಿರುವ ಈ ಬಡ ಕ್ರೀಡಾಪಟುವಿನ ಕುಟುಂಬಕ್ಕೆ ಒಡಿಶಾ ಸರ್ಕಾರ ನೆರವಾಗಬಹುದೇ ನೋಡಬೇಕಿದೆ.

Story first published: Friday, July 5, 2019, 19:21 [IST]
Other articles published on Jul 5, 2019
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X