ಬೆಂಗಳೂರಿನ ಪ್ರಧಾನ ಕೋಚ್ ಕಾರ್ಲಸ್ ಕ್ವಾಡ್ರಾಟ್
‘ನಾವು ಒಂದೇ ತಂಡವನ್ನು ಅಂಗಣಕ್ಕಿಳಿಸುತ್ತಿದ್ದೇವೆ, ಮಿಕು ಆಗಾಗ ಬದಲಾಗುತ್ತಿದ್ದಾರೆ. ಇದೊಂದು ರೀತಿಯಲ್ಲಿ ವಿಭಿನ್ನ ಆಟ. ಲೀಗ್ನ ಆರಂ‘ದ ಪಂದ್ಯದಲ್ಲಿ ಕಂಡು ಬಂದ ತಾಂತ್ರಿಕ ಅಂಶ ಈಗ ಕಾಣುತ್ತಿಲ್ಲ. ಪ್ಲೇಆಫ್ ಪಂದ್ಯಗಳಿಗೆ ಸಜ್ಜಾಗುತ್ತಿರುವ ಈ ಸಂದರ್ಭದಲ್ಲಿ ನಾವು ಕೆಲವು ಆಟಗಾರರಿಗೆ ವಿಶ್ರಾಂತಿ ನೀಡುತ್ತಿದ್ದೇವೆ. ಪ್ಲೇ ಆ್ಗೆ ಆಟಗಾರರು ಫಿಟ್ ಆಗಿ ಇರಬೇಕಾದರೆ ಇಲ್ಲಿ ಬದಲಾವಣೆ ಅನಿವಾರ್ಯವಾಗಿರುತ್ತದೆ. ಇದು ನಮ್ಮ ಯೋಜನೆ,‘ ಎಂದು ಬೆಂಗಳೂರು ತಂಡದ ಪ್ರಧಾನ ಕೋಚ್ ಕಾರ್ಲಸ್ ಕ್ವಾಡ್ರಾಟ್ ಹೇಳಿದ್ದಾರೆ.
ಪ್ಲೇ ಆಫ್ ಹಂತ ತಲುಪಲು ಸಜ್ಜಾಗಿದೆ
ಈ ಋತುವಿನಲ್ಲೂ ಬೆಂಗಳೂರು ತಂಡ ಪ್ಲೇ ಆಫ್ ಹಂತ ತಲುಪಲು ಸಜ್ಜಾಗಿದೆ. 15 ಪಂದ್ಯಗಳಲ್ಲಿ ಬೆಂಗಳೂರು 31 ಅಂಕಗಳನ್ನು ಗಳಿಸಿದೆ, ಪ್ಲೇ ಆಫ್ ಹಂತಕ್ಕೆ 30 ಅಂಕಗಳು ಗಳಿಸಿದರೆ ಸಾಕು. ಇದರಿಂದಾಗಿ ಬೆಂಗಳೂರು ಬಹುತೇಕ ತನ್ನ ಸ್ಥಾನವನ್ನು ಖಚಿತಪಡಿಸಿಕೊಂಡಿದೆ. ಆದರೆ ಎಡ್ಮಂಡ್ ಲಾಲ್ರಿಂಡಿಕಾ, ರಿನೋ ಆಂಟೊ, ಗುರ್ಸಿಮ್ರಾತ್ ಗಿಲ್, ಅಜಯ್ ಛೆಟ್ರಿ ಮತ್ತು ಇತರರಿಗೆ ಕೋಚ್ ಕ್ವಾಡ್ರಾಟ್ ಯಾಕೆ ಅವಕಾಶ ನೀಡುತ್ತಿದಾರೆಂಬುದಕ್ಕೆ ಉತ್ತರ ಸಿಕ್ಕಂತಾಗಿದೆ.
ನಿರಾಶೆ ಮೂಡಿಸಿರುವ ಮಿಕು, ನಿಶುಕುಮಾರ್
ಮಿಕು ಗಾಯದಿಂದ ಚೇತರಿಸಿಕೊಂಡು ತಂಡವನ್ನು ಸೇರಿಕೊಂಡ ನಂತರ ಹಿಂದಿನ ಪ್ರದರ್ಶನ ತೋರುತ್ತಿಲ್ಲ. ನಿಶು ಕುಮಾರ್ ಆಟದಲ್ಲೂ ಹಿಂದಿನ ಉತ್ಸಾಹ ಕಾಣುತ್ತಿಲ್ಲ. ನಾಯಕ ಸುನಿಲ್ ಛೆಟ್ರಿ ಗೋಲು ಗಳಿಸಲು ಪರದಾಡುತ್ತಿದ್ದಾರೆ. ಆದರೆ ಕಳೆದ ಎರಡು ಪಂದ್ಯಗಳಲ್ಲಿ ಒಟ್ಟು ಎರಡು ಗೋಲು ಗಳಿಸಿರುತ್ತಾರೆ. ಚೆಂಕೋ ಗಿಲಿಷೇನ್ ತಂಡಕ್ಕೆ ನಾಲ್ಕು ಅಂಕಗಳನ್ನು ತಂದೊಟ್ಟರೂ, ಅವರನ್ನು ಬೇರೆ ತಂಡಕ್ಕೆ ಸೇರಲು ಅವಕಾಶ ಕಲ್ಪಿಸಲಾಗಿದೆ.
ತಂಡದಲ್ಲಿ ಲೂಯಿಸ್ಮಾ ಫಿಟ್ ಆಗಿಲ್ಲ
ತಂಡವನ್ನು ಸೇರಿಕೊಂಡ ಲೂಯಿಸ್ಮಾ ಇನ್ನೂ ಸಂಪೂರ್ಣ ಫಿಟ್ ಆಗಲಿಲ್ಲ. ಕಳೆದ ಋತುವಿನ ಬೆಂಗಳೂರು ತಂಡದ ಬೆಂಚ್ ಶಕ್ತಿ ಉತ್ತಮವಾಗಿತ್ತು. ಸುಭಾಶಿಶ್ ಬೋಸ್, ಅಲ್ವಿನ್ ಜಾರ್ಜ್, ಲೆನ್ನಿ ರೋಡ್ರಿಗಸ್, ಜಾನ್ ಜಾನ್ಸನ್, ಟೋನಿ ದೊವಾಲೆ ಮತ್ತು ಎಡು ಗಾರ್ಸಿಯಾ ಇದ್ದಿದ್ದರು. ಆದರೆ ಈ ಬಾರಿ ಬೆಂಚ್ನಲ್ಲಿ ಗಮನಾರ್ಹ ಆಟಗಾರರು ಇಲ್ಲದಂತಾಗಿದೆ.