ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

Ind vs SL Asia Cup 2022 : ಶ್ರೀಲಂಕಾ ವಿರುದ್ಧ ಭಾರತದ ಆಡುವ 11ರ ಬಳಗ; ಏನೆಲ್ಲಾ ಬದಲಾವಣೆ?

Asia Cup 2022 Super 4: Indias Prediction Playing 11 Against Sri Lanka; Whats The Change?

ದುಬೈ ಅಂತಾರಾಷ್ಟ್ರೀಯ ಕ್ರೀಡಾಂಗಣದಲ್ಲಿ ಮಂಗಳವಾರ ನಡೆಯಲಿರುವ ಏಷ್ಯಾ ಕಪ್‌ನ ಸೂಪರ್ 4 ಗೆಲ್ಲಲೇಬೇಕಾದ ಪಂದ್ಯದಲ್ಲಿ ಭಾರತವು ಶ್ರೀಲಂಕಾವನ್ನು ಎದುರಿಸಲಿದೆ. ಏಷ್ಯಾ ಕಪ್ ಈ ಪ್ರಮುಖ ಮುಖಾಮುಖಿಯಲ್ಲಿನ ಗೆಲುವು ರೋಹಿತ್ ಶರ್ಮಾ ಬಳಗವನ್ನು ಫೈನಲ್ ಸ್ಪರ್ಧೆಯಲ್ಲಿ ಜೀವಂತವಾಗಿರಿಸುತ್ತದೆ.ಒಂದು ವೇಳೆ ಸೋತರೆ ಹೆಚ್ಚು ಕಡಿಮೆ ತಂಡವನ್ನು ಸ್ಪರ್ಧೆಯಿಂದ ಹೊರಹೋದಂತಾಗುತ್ತದೆ.

ಸೂಪರ್ 4 ಹಂತದ ತಮ್ಮ ಮೊದಲ ಪಂದ್ಯದಲ್ಲಿ ಭಾರತ ತಂಡವು ಪಾಕಿಸ್ತಾನದ ವಿರುದ್ಧ ರೋಚಕವಾಗಿ ಸೋತಿತು. ಆದರೆ ಭಾರತದ ಮುಂದಿನ ಎದುರಾಳಿ ಶ್ರೀಲಂಕಾ ತಂಡವು ಅಫ್ಘಾನಿಸ್ತಾನದ ವಿರುದ್ಧ ನಾಲ್ಕು ವಿಕೆಟ್‌ಗಳ ಜಯದ ಹಿನ್ನೆಲೆಯಲ್ಲಿ ಬರುತ್ತಿದೆ. ಮಂಗಳವಾರದ ಪಂದ್ಯವು ಶ್ರೀಲಂಕಾಕ್ಕೆ ದೊಡ್ಡ ಆಟವಾಗಿದೆ ಮತ್ತು ಸೂಪರ್ 4ರ ಲಂಕಾದ ಕೊನೆಯ ಪಂದ್ಯವು ಮತ್ತೊಂದು ಕಠಿಣ ಎದುರಾಳಿ ಪಾಕಿಸ್ತಾನದ ವಿರುದ್ಧ ಆಡಲಿದೆ.

Asia Cup 2022 IND vs SL; ಭಾರತ ವಿರುದ್ಧ ಪಂದ್ಯಕ್ಕೂ ಮುನ್ನ ಶ್ರೀಲಂಕಾ ನಾಯಕ ಹೇಳಿದ್ದೇನು?Asia Cup 2022 IND vs SL; ಭಾರತ ವಿರುದ್ಧ ಪಂದ್ಯಕ್ಕೂ ಮುನ್ನ ಶ್ರೀಲಂಕಾ ನಾಯಕ ಹೇಳಿದ್ದೇನು?

ಶ್ರೀಲಂಕಾ ವಿರುದ್ಧ ಯಾವುದೇ ಅವಕಾಶವನ್ನು ಪಡೆಯಲು ಬಯಸದ ಕಾರಣ ಭಾರತ ಮತ್ತೊಮ್ಮೆ ಆಡುವ ಹನ್ನೊಂದರ ಬಳಗದ ಆಯ್ಕೆ ಸಂದಿಗ್ಧತೆಯನ್ನು ಎದುರಿಸಬೇಕಾಗುತ್ತದೆ. ಮ್ಯಾಚ್ ಫಿನಿಶರ್ ದಿನೇಶ್ ಕಾರ್ತಿಕ್ ಅವರಿಗೆ ಆಡುವ 11ರಲ್ಲಿ ಸ್ಥಾನ ನೀಡಲಾಗುತ್ತದೆಯೇ? ಒಂದು ವೇಳೆ ಅವಕಾಶ ಕೊಟ್ಟರೆ ಕಾರ್ತಿಕ್‌ಗೆ ದಾರಿ ಮಾಡಿಕೊಡುವವರು ಯಾರು? ಎಂಬ ಪ್ರಶ್ನೆ ಮೂಡುತ್ತದೆ. ಮತ್ತೊಂದೆಡೆ ಯುಜ್ವೇಂದ್ರ ಚಹಾಲ್ ಮೂರು ಪಂದ್ಯಗಳಲ್ಲಿ ಇದುವರೆಗೆ ಕೇವಲ ಒಂದು ವಿಕೆಟ್ ಪಡೆದಿದ್ದಾರೆ. ಅವರನ್ನು ಬೆಂಚ್ ಕಾಯಿಸಲು ಭಾರತ ನಿರ್ಧರಿಸುತ್ತದೆಯೇ? ಎಂಬುದನ್ನು ನೋಡಬೇಕಿದೆ.

ಶ್ರೀಲಂಕಾ ವಿರುದ್ಧ ಭಾರತದ ಆಡುವ ಆಡುವ 11ರ ಬಳಗ ಹೀಗಿರಲಿದೆ

ಶ್ರೀಲಂಕಾ ವಿರುದ್ಧ ಭಾರತದ ಆಡುವ ಆಡುವ 11ರ ಬಳಗ ಹೀಗಿರಲಿದೆ

ರೋಹಿತ್ ಶರ್ಮಾ: ಸದ್ಯ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಬ್ಯಾಟ್‌ನಿಂದ ದೊಡ್ಡ ಸ್ಕೋರ್‌ ಬಂದಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಅವರು ತಮ್ಮ ಸ್ಟ್ರೋಕ್ ಆಟದಿಂದ ಆಕ್ರಮಣಕಾರಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ರೋಹಿತ್ ಶರ್ಮಾ ತನ್ನ ಇನ್ನಿಂಗ್ಸ್ ಅನ್ನು ಮತ್ತಷ್ಟು ಉತ್ತಮವಾಗಿರಿಸಲು ಎದುರು ನೋಡುತ್ತಿದ್ದಾರೆ.

ಕೆಎಲ್ ರಾಹುಲ್: ಗಾಯದ ನಂತರ ಸ್ಪರ್ಧಾತ್ಮಕ ಕ್ರಿಕೆಟ್‌ಗೆ ಮರಳಿದ ನಂತರ ಉಪನಾಯಕ ಕೆಎಲ್ ರಾಹುಲ್ ಫಾರ್ಮ್‌ಗೆ ಮರಳಲು ಹೆಣಗಾಡುತ್ತಿದ್ದರು. ಆದರೆ ಪಾಕಿಸ್ತಾನದ ವಿರುದ್ಧದ ಸೂಪರ್ 4ರ ಪಂದ್ಯದಲ್ಲಿ 20 ಎಸೆತಗಳಲ್ಲಿ 28 ರನ್ ಗಳಿಸಿರುವುದು ತಂಡಕ್ಕಾಗಿ ಉತ್ತಮ ಅಡಿಪಾಯ ಹಾಕುವ ಸೂಚನೆ ನೀಡಿದ್ದಾರೆ.

ವಿರಾಟ್ ಕೊಹ್ಲಿ ಕೊನೆಗೂ ಫಾರ್ಮ್‌ಗೆ ಮರಳಿದ್ದಾರೆ

ವಿರಾಟ್ ಕೊಹ್ಲಿ ಕೊನೆಗೂ ಫಾರ್ಮ್‌ಗೆ ಮರಳಿದ್ದಾರೆ

ವಿರಾಟ್ ಕೊಹ್ಲಿ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಫಾರ್ಮ್‌ಗೆ ಮರಳಿದಂತಿದೆ. ಕೊಹ್ಲಿ ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳನ್ನು ಬಾರಿಸಿದ್ದಾರೆ ಮತ್ತು ಅವರ ಶಾಟ್‌ಗಳಲ್ಲಿನ ಆತ್ಮವಿಶ್ವಾಸವು ಉತ್ತಮ ಲಯದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಸ್ತುತ ಏಷ್ಯಾ ಕಪ್‌ನಲ್ಲಿ 154 ರನ್ ಗಳಿಸಿರುವ ವಿರಾಟ್ ಕೊಹ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.

ಸೂರ್ಯಕುಮಾರ್ ಯಾದವ್: ಹಾಂಗ್ ಕಾಂಗ್ ವಿರುದ್ಧ ಅಮೋಘ ಆಟವಾಡಿದ್ದ ಸೂರ್ಯಕುಮಾರ್ ಯಾದವ್ ಪಾಕಿಸ್ತಾನದ ವಿರುದ್ಧ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ನಿರ್ಣಾಯಕವಾಗಿದೆ.

ಶ್ರೀಲಂಕಾ ವಿರುದ್ಧ ದಿನೇಶ್ ಕಾರ್ತಿಕ್‌ಗೆ ಅವಕಾಶ?

ಶ್ರೀಲಂಕಾ ವಿರುದ್ಧ ದಿನೇಶ್ ಕಾರ್ತಿಕ್‌ಗೆ ಅವಕಾಶ?

ರಿಷಭ್ ಪಂತ್: ವಿಕೆಟ್ ಕೀಪರ್- ಬ್ಯಾಟ್ಸ್‌ಮನ್ ರಿಷಭ್ ಪಂತ್ ಬಿಳಿ ಚೆಂಡಿನೊಂದಿಗೆ ಅವರ ಬ್ಯಾಟಿಂಗ್‌ನಲ್ಲಿ ಹೋರಾಟವನ್ನು ಮುಂದುವರೆಸಿದ್ದಾರೆ. ರನ್‌ಗಳಿಗಿಂತ ಹೆಚ್ಚಾಗಿ ಅವರ ಶಾಟ್ ಆಯ್ಕೆಯೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ರಿಷಭ್ ಪಂತ್ ತಮ್ಮ ಇನ್ನಿಂಗ್ಸ್ ರೂಪಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ಅವರಿಗೆ ಮತ್ತೊಂದು ಅವಕಾಶ ನೀಡಬಹುದು.

ದಿನೇಶ್ ಕಾರ್ತಿಕ್: ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್‌ನಲ್ಲಿ ದಿನೇಶ್ ಕಾರ್ತಿಕ್‌ಗೆ ಕೇವಲ ಒಂದು ಪಂದ್ಯದ ಸಮಯ ಸಿಕ್ಕಿದ್ದರಿಂದ ಅವರಿಗೆ ಅವಕಾಶ ನೀಡಲು ಭಾರತ ಯೋಚಿಸುತ್ತಿರಬಹುದು. ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆಡುವ 11ರ ಬಳಗದಿಂದ ಕೈಬಿಡಲಾಯಿತು.

ಹಾರ್ದಿಕ್ ಪಾಂಡ್ಯ ಮ್ಯಾಚ್ ವಿನ್ನರ್ ಆಗಲಿದ್ದಾರೆ

ಹಾರ್ದಿಕ್ ಪಾಂಡ್ಯ ಮ್ಯಾಚ್ ವಿನ್ನರ್ ಆಗಲಿದ್ದಾರೆ

ಹಾರ್ದಿಕ್ ಪಾಂಡ್ಯ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ನೀಡಿದ್ದರು. ಅವರು ಬ್ಯಾಟ್‌ನಲ್ಲಾಗಲೀ ಅಥವಾ ಬಾಲ್‌ನಲ್ಲಾಗಲೀ ಉತ್ತಮ ಪ್ರದರ್ಶನ ನೀಡಲಿಲ್ಲ. ಆದಾಗ್ಯೂ ಹಾರ್ದಿಕ್ ಪಾಂಡ್ಯ ಮ್ಯಾಚ್ ವಿನ್ನರ್ ಆಗಿದ್ದಾರೆ ಮತ್ತು ಅವರು ತಮ್ಮ ಅತ್ಯುತ್ತಮ ಫಾರ್ಮ್‌ಗೆ ಮರಳಲು ಎದುರು ನೋಡುತ್ತಾರೆ.

ಅಕ್ಷರ್ ಪಟೇಲ್: ಎಡಗೈ ಆಲ್‌ರೌಂಡರ್ ಅಕ್ಷರ್ ಪಟೇಲ್ ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರದರ್ಶನ ನೀಡಿದರೆ ಗಾಯಗೊಂಡ ರವೀಂದ್ರ ಜಡೇಜಾಗೆ ಪರಿಪೂರ್ಣ ಬದಲಿ ಆಟಗಾರನಾಗಿ ತಂಡಕ್ಕೆ ಹಿಂದಿರುಗಬಹುದು.

ಭುವನೇಶ್ವರ್ ಕುಮಾರ್: ಬಲಗೈ ವೇಗಿ ಭುವನೇಶ್ವರ್ ಕುಮಾರ್ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ತಮ್ಮ ಅಪರೂಪದ ಔಟ್‌ ಆಫ್ ಫಾರ್ಮ್‌ನಲ್ಲಿ ರನ್ ಸೋರಿಕೆ ಮಾಡಿದರು. ಭುವನೇಶ್ವರ್ ಕುಮಾರ್ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್‌ಮನ್‌ಗಳನ್ನು ಕಟ್ಟಿಹಾಕಲು ಉತ್ಸುಕರಾಗಿದ್ದಾರೆ.

ಪಾಕಿಸ್ತಾನ ವಿರುದ್ಧ ಅರ್ಷದೀಪ್ ಕಳಪೆ ಫೀಲ್ಡಿಂಗ್ ಪ್ರದರ್ಶನ

ಪಾಕಿಸ್ತಾನ ವಿರುದ್ಧ ಅರ್ಷದೀಪ್ ಕಳಪೆ ಫೀಲ್ಡಿಂಗ್ ಪ್ರದರ್ಶನ

ಅರ್ಷದೀಪ್ ಸಿಂಗ್: ಎಡಗೈ ವೇಗಿ ಪಾಕಿಸ್ತಾನ ವಿರುದ್ಧದ ಕಳಪೆ ಫೀಲ್ಡಿಂಗ್ ಪ್ರದರ್ಶನವನ್ನು ಬದಿಗಿಟ್ಟು ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಹೊಸದಾಗಿ ಪ್ರಾರಂಭಿಸಲು ಎದುರು ನೋಡುತ್ತಾರೆ. ಲೈನ್ ಮತ್ತು ಲೆಂಗ್ತ್‌ನಲ್ಲಿ ಉತ್ತಮವಾಗಿರುವುದರ ಜೊತೆಗೆ ಅರ್ಷದೀಪ್ ಸಿಂಗ್ ಅವರ ಪ್ರಬುದ್ಧತೆ ಮತ್ತು ಶಾಂತತೆಯು ಅವರನ್ನು ವಿಶೇಷ ಆಟಗಾರನನ್ನಾಗಿ ಮಾಡುತ್ತಿದೆ.

ರವಿ ಬಿಷ್ಣೋಯ್: ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಭಾನುವಾರ ನಡೆದ ಏಷ್ಯಾ ಕಪ್‌ನ ಮೊದಲ ಪಂದ್ಯವನ್ನು ಆಡಿದರು ಮತ್ತು ಅವರು ತಮ್ಮ ನಾಲ್ಕು ಓವರ್‌ಗಳಲ್ಲಿ 26 ರನ್‌ಗಳಿಗೆ 1 ವಿಕೆಟ್‌ಗಳ ಅಂಕಿಅಂಶಗಳೊಂದಿಗೆ ಉತ್ತಮವಾಗಿ ಕಂಡರು. ಆದರೆ ಅಲ್ಲಿ ಉಳಿದ ಭಾರತೀಯ ಬೌಲರ್‌ಗಳು ಹೆಚ್ಚು ರನ್‌ಗಳನ್ನು ಬಿಟ್ಟುಕೊಟ್ಟರು. ಶ್ರೀಲಂಕಾ ವಿರುದ್ಧ ರನ್ ಕಡಿವಾಣದ ಜೊತೆಗೆ ವಿಕೆಟ್ ಉರುಳಿಸಲು ಕಾಯುತ್ತಿದ್ದಾರೆ.

Story first published: Tuesday, September 6, 2022, 14:16 [IST]
Other articles published on Sep 6, 2022
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X