ಶ್ರೀಲಂಕಾ ವಿರುದ್ಧ ಭಾರತದ ಆಡುವ ಆಡುವ 11ರ ಬಳಗ ಹೀಗಿರಲಿದೆ
ರೋಹಿತ್ ಶರ್ಮಾ: ಸದ್ಯ ನಡೆಯುತ್ತಿರುವ ಏಷ್ಯಾ ಕಪ್ನಲ್ಲಿ ಭಾರತೀಯ ನಾಯಕ ರೋಹಿತ್ ಶರ್ಮಾ ಬ್ಯಾಟ್ನಿಂದ ದೊಡ್ಡ ಸ್ಕೋರ್ ಬಂದಿಲ್ಲ. ಆದರೆ ಕಳೆದ ಪಂದ್ಯದಲ್ಲಿ ಅವರು ತಮ್ಮ ಸ್ಟ್ರೋಕ್ ಆಟದಿಂದ ಆಕ್ರಮಣಕಾರಿ ರೂಪದಲ್ಲಿ ಕಾಣಿಸಿಕೊಂಡಿದ್ದಾರೆ. ಆದಾಗ್ಯೂ, ರೋಹಿತ್ ಶರ್ಮಾ ತನ್ನ ಇನ್ನಿಂಗ್ಸ್ ಅನ್ನು ಮತ್ತಷ್ಟು ಉತ್ತಮವಾಗಿರಿಸಲು ಎದುರು ನೋಡುತ್ತಿದ್ದಾರೆ.
ಕೆಎಲ್ ರಾಹುಲ್: ಗಾಯದ ನಂತರ ಸ್ಪರ್ಧಾತ್ಮಕ ಕ್ರಿಕೆಟ್ಗೆ ಮರಳಿದ ನಂತರ ಉಪನಾಯಕ ಕೆಎಲ್ ರಾಹುಲ್ ಫಾರ್ಮ್ಗೆ ಮರಳಲು ಹೆಣಗಾಡುತ್ತಿದ್ದರು. ಆದರೆ ಪಾಕಿಸ್ತಾನದ ವಿರುದ್ಧದ ಸೂಪರ್ 4ರ ಪಂದ್ಯದಲ್ಲಿ 20 ಎಸೆತಗಳಲ್ಲಿ 28 ರನ್ ಗಳಿಸಿರುವುದು ತಂಡಕ್ಕಾಗಿ ಉತ್ತಮ ಅಡಿಪಾಯ ಹಾಕುವ ಸೂಚನೆ ನೀಡಿದ್ದಾರೆ.
ವಿರಾಟ್ ಕೊಹ್ಲಿ ಕೊನೆಗೂ ಫಾರ್ಮ್ಗೆ ಮರಳಿದ್ದಾರೆ
ವಿರಾಟ್ ಕೊಹ್ಲಿ: ಭಾರತ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಕೊನೆಗೂ ಫಾರ್ಮ್ಗೆ ಮರಳಿದಂತಿದೆ. ಕೊಹ್ಲಿ ಬ್ಯಾಕ್-ಟು-ಬ್ಯಾಕ್ ಅರ್ಧಶತಕಗಳನ್ನು ಬಾರಿಸಿದ್ದಾರೆ ಮತ್ತು ಅವರ ಶಾಟ್ಗಳಲ್ಲಿನ ಆತ್ಮವಿಶ್ವಾಸವು ಉತ್ತಮ ಲಯದಲ್ಲಿದ್ದಾರೆ ಎಂಬುದು ಸ್ಪಷ್ಟವಾಗಿ ಗೋಚರಿಸುತ್ತದೆ. ಪ್ರಸ್ತುತ ಏಷ್ಯಾ ಕಪ್ನಲ್ಲಿ 154 ರನ್ ಗಳಿಸಿರುವ ವಿರಾಟ್ ಕೊಹ್ಲಿ ಭಾರತದ ಪರ ಅತಿ ಹೆಚ್ಚು ರನ್ ಗಳಿಸಿದ ಆಟಗಾರನಾಗಿದ್ದಾರೆ.
ಸೂರ್ಯಕುಮಾರ್ ಯಾದವ್: ಹಾಂಗ್ ಕಾಂಗ್ ವಿರುದ್ಧ ಅಮೋಘ ಆಟವಾಡಿದ್ದ ಸೂರ್ಯಕುಮಾರ್ ಯಾದವ್ ಪಾಕಿಸ್ತಾನದ ವಿರುದ್ಧ ತಮ್ಮ ಫಾರ್ಮ್ ಅನ್ನು ಮುಂದುವರಿಸಲು ವಿಫಲರಾದರು. ಆದರೆ ಮಧ್ಯಮ ಕ್ರಮಾಂಕದಲ್ಲಿ ಸೂರ್ಯಕುಮಾರ್ ಸ್ಫೋಟಕ ಬ್ಯಾಟಿಂಗ್ ಭಾರತಕ್ಕೆ ನಿರ್ಣಾಯಕವಾಗಿದೆ.
ಶ್ರೀಲಂಕಾ ವಿರುದ್ಧ ದಿನೇಶ್ ಕಾರ್ತಿಕ್ಗೆ ಅವಕಾಶ?
ರಿಷಭ್ ಪಂತ್: ವಿಕೆಟ್ ಕೀಪರ್- ಬ್ಯಾಟ್ಸ್ಮನ್ ರಿಷಭ್ ಪಂತ್ ಬಿಳಿ ಚೆಂಡಿನೊಂದಿಗೆ ಅವರ ಬ್ಯಾಟಿಂಗ್ನಲ್ಲಿ ಹೋರಾಟವನ್ನು ಮುಂದುವರೆಸಿದ್ದಾರೆ. ರನ್ಗಳಿಗಿಂತ ಹೆಚ್ಚಾಗಿ ಅವರ ಶಾಟ್ ಆಯ್ಕೆಯೇ ಅವರು ಸಾಕಷ್ಟು ಟೀಕೆಗಳನ್ನು ಎದುರಿಸುತ್ತಿದ್ದಾರೆ. ಪಂದ್ಯದ ಪರಿಸ್ಥಿತಿಗೆ ಅನುಗುಣವಾಗಿ ರಿಷಭ್ ಪಂತ್ ತಮ್ಮ ಇನ್ನಿಂಗ್ಸ್ ರೂಪಿಸಿಕೊಳ್ಳಲು ಕಷ್ಟಪಡುತ್ತಿದ್ದಾರೆ. ಶ್ರೀಲಂಕಾ ವಿರುದ್ಧ ಅವರಿಗೆ ಮತ್ತೊಂದು ಅವಕಾಶ ನೀಡಬಹುದು.
ದಿನೇಶ್ ಕಾರ್ತಿಕ್: ದುಬೈನಲ್ಲಿ ನಡೆಯುತ್ತಿರುವ ಏಷ್ಯಾ ಕಪ್ನಲ್ಲಿ ದಿನೇಶ್ ಕಾರ್ತಿಕ್ಗೆ ಕೇವಲ ಒಂದು ಪಂದ್ಯದ ಸಮಯ ಸಿಕ್ಕಿದ್ದರಿಂದ ಅವರಿಗೆ ಅವಕಾಶ ನೀಡಲು ಭಾರತ ಯೋಚಿಸುತ್ತಿರಬಹುದು. ಪಾಕಿಸ್ತಾನ ವಿರುದ್ಧದ ಕೊನೆಯ ಪಂದ್ಯದಲ್ಲಿ ದಿನೇಶ್ ಕಾರ್ತಿಕ್ ಅವರನ್ನು ಆಡುವ 11ರ ಬಳಗದಿಂದ ಕೈಬಿಡಲಾಯಿತು.
ಹಾರ್ದಿಕ್ ಪಾಂಡ್ಯ ಮ್ಯಾಚ್ ವಿನ್ನರ್ ಆಗಲಿದ್ದಾರೆ
ಹಾರ್ದಿಕ್ ಪಾಂಡ್ಯ: ಪಾಕಿಸ್ತಾನ ವಿರುದ್ಧದ ಪಂದ್ಯದಲ್ಲಿ ಆಲ್ರೌಂಡರ್ ಹಾರ್ದಿಕ್ ಪಾಂಡ್ಯ ಕಳಪೆ ಪ್ರದರ್ಶನ ನೀಡಿದ್ದರು. ಅವರು ಬ್ಯಾಟ್ನಲ್ಲಾಗಲೀ ಅಥವಾ ಬಾಲ್ನಲ್ಲಾಗಲೀ ಉತ್ತಮ ಪ್ರದರ್ಶನ ನೀಡಲಿಲ್ಲ. ಆದಾಗ್ಯೂ ಹಾರ್ದಿಕ್ ಪಾಂಡ್ಯ ಮ್ಯಾಚ್ ವಿನ್ನರ್ ಆಗಿದ್ದಾರೆ ಮತ್ತು ಅವರು ತಮ್ಮ ಅತ್ಯುತ್ತಮ ಫಾರ್ಮ್ಗೆ ಮರಳಲು ಎದುರು ನೋಡುತ್ತಾರೆ.
ಅಕ್ಷರ್ ಪಟೇಲ್: ಎಡಗೈ ಆಲ್ರೌಂಡರ್ ಅಕ್ಷರ್ ಪಟೇಲ್ ಅವರು ತಮ್ಮ ಸಾಮರ್ಥ್ಯಕ್ಕೆ ಅನುಗುಣವಾಗಿ ಪ್ರದರ್ಶನ ನೀಡಿದರೆ ಗಾಯಗೊಂಡ ರವೀಂದ್ರ ಜಡೇಜಾಗೆ ಪರಿಪೂರ್ಣ ಬದಲಿ ಆಟಗಾರನಾಗಿ ತಂಡಕ್ಕೆ ಹಿಂದಿರುಗಬಹುದು.
ಭುವನೇಶ್ವರ್ ಕುಮಾರ್: ಬಲಗೈ ವೇಗಿ ಭುವನೇಶ್ವರ್ ಕುಮಾರ್ ಪಾಕಿಸ್ತಾನ ವಿರುದ್ಧದ ಪಂದ್ಯದ ವೇಳೆ ತಮ್ಮ ಅಪರೂಪದ ಔಟ್ ಆಫ್ ಫಾರ್ಮ್ನಲ್ಲಿ ರನ್ ಸೋರಿಕೆ ಮಾಡಿದರು. ಭುವನೇಶ್ವರ್ ಕುಮಾರ್ ಮುಂದಿನ ಪಂದ್ಯದಲ್ಲಿ ಶ್ರೀಲಂಕಾ ಬ್ಯಾಟ್ಸ್ಮನ್ಗಳನ್ನು ಕಟ್ಟಿಹಾಕಲು ಉತ್ಸುಕರಾಗಿದ್ದಾರೆ.
ಪಾಕಿಸ್ತಾನ ವಿರುದ್ಧ ಅರ್ಷದೀಪ್ ಕಳಪೆ ಫೀಲ್ಡಿಂಗ್ ಪ್ರದರ್ಶನ
ಅರ್ಷದೀಪ್ ಸಿಂಗ್: ಎಡಗೈ ವೇಗಿ ಪಾಕಿಸ್ತಾನ ವಿರುದ್ಧದ ಕಳಪೆ ಫೀಲ್ಡಿಂಗ್ ಪ್ರದರ್ಶನವನ್ನು ಬದಿಗಿಟ್ಟು ಶ್ರೀಲಂಕಾ ವಿರುದ್ಧದ ಪಂದ್ಯವನ್ನು ಹೊಸದಾಗಿ ಪ್ರಾರಂಭಿಸಲು ಎದುರು ನೋಡುತ್ತಾರೆ. ಲೈನ್ ಮತ್ತು ಲೆಂಗ್ತ್ನಲ್ಲಿ ಉತ್ತಮವಾಗಿರುವುದರ ಜೊತೆಗೆ ಅರ್ಷದೀಪ್ ಸಿಂಗ್ ಅವರ ಪ್ರಬುದ್ಧತೆ ಮತ್ತು ಶಾಂತತೆಯು ಅವರನ್ನು ವಿಶೇಷ ಆಟಗಾರನನ್ನಾಗಿ ಮಾಡುತ್ತಿದೆ.
ರವಿ ಬಿಷ್ಣೋಯ್: ಲೆಗ್ ಸ್ಪಿನ್ನರ್ ರವಿ ಬಿಷ್ಣೋಯ್ ಅವರು ಭಾನುವಾರ ನಡೆದ ಏಷ್ಯಾ ಕಪ್ನ ಮೊದಲ ಪಂದ್ಯವನ್ನು ಆಡಿದರು ಮತ್ತು ಅವರು ತಮ್ಮ ನಾಲ್ಕು ಓವರ್ಗಳಲ್ಲಿ 26 ರನ್ಗಳಿಗೆ 1 ವಿಕೆಟ್ಗಳ ಅಂಕಿಅಂಶಗಳೊಂದಿಗೆ ಉತ್ತಮವಾಗಿ ಕಂಡರು. ಆದರೆ ಅಲ್ಲಿ ಉಳಿದ ಭಾರತೀಯ ಬೌಲರ್ಗಳು ಹೆಚ್ಚು ರನ್ಗಳನ್ನು ಬಿಟ್ಟುಕೊಟ್ಟರು. ಶ್ರೀಲಂಕಾ ವಿರುದ್ಧ ರನ್ ಕಡಿವಾಣದ ಜೊತೆಗೆ ವಿಕೆಟ್ ಉರುಳಿಸಲು ಕಾಯುತ್ತಿದ್ದಾರೆ.