ಇಂಥ ಪಂದ್ಯಗಳಲ್ಲಿ ತಪ್ಪು ಸಹಜ
ಅರ್ಷ್ದೀಪ್ ಸಿಂಗ್ ಕ್ಯಾಚ್ ಬಿಟ್ಟದ್ದರ ಕುರಿತು ಪಂದ್ಯ ಮುಕ್ತಾಯದ ನಂತರ ಮಾತನಾಡಿದ ವಿರಾಟ್ ಕೊಹ್ಲಿ ಇಂಥಹ ಒತ್ತಡ ಇರುವ ಪಂದ್ಯಗಳಲ್ಲಿ ಆಟಗಾರರು ತಪ್ಪುಗಳನ್ನು ಮಾಡುವುದು ಸಹಜ ಎಂದಿದ್ದಾರೆ. ಒತ್ತಡ ಹೆಚ್ಚಿರುವ ಪಂದ್ಯಗಳಲ್ಲಿ ಯಾರಾದರೂ ತಪ್ಪುಗಳನ್ನು ಮಾಡುವುದು ಸಹಜ ಹಾಗೂ ತಂಡದಲ್ಲಿ ಹಿರಿಯ ಆಟಗಾರರಿದ್ದು, ಒಳ್ಳೆಯ ವಾತಾವರಣವಿದೆ, ಹೀಗಾಗಿ ತಪ್ಪು ಮಾಡುವ ಆಟಗಾರರು ತಮ್ಮ ತಪ್ಪುಗಳನ್ನು ಸ್ವೀಕರಿಸಿ, ತಿದ್ದಿಕೊಳ್ಳುವತ್ತ ದೃಷ್ಟಿ ಇಡಬೇಕು ಎಂದಿದ್ದಾರೆ. ಇನ್ನೂ ಮುಂದುವರೆದು ಮಾತನಾಡಿದ ವಿರಾಟ್ ಕೊಹ್ಲಿ ನಾಯಕ ಮತ್ತು ಕೋಚ್ಗೆ ತಂಡದಲ್ಲಿ ಇಂಥ ಒಳ್ಳೆಯ ವಾತಾವರಣ ನಿರ್ಮಿಸಿರುವ ಕೋಚ್ ಹಾಗೂ ನಾಯಕನಿಗೆ ಕೀರ್ತಿ ಸಲ್ಲಬೇಕು ಎಂದರು.
ನಾನೂ ಇಂತ ಪರಿಸ್ಥಿತಿ ಎದುರಿಸಿದ್ದೆ ಎಂದ ಕೊಹ್ಲಿ
ಇನ್ನು ತಾನೂ ಸಹ ಈ ರೀತಿಯ ಸಂದರ್ಭವನ್ನು ಅನುಭವಿಸಿದ್ದೆ ಎಂಬ ವಿಚಾರವನ್ನು ಕೊಹ್ಲಿ ಬಿಚ್ಚಿಟ್ಟಿದ್ದು, ಹಳೆಯ ಘಟನೆಯೊಂದನ್ನು ಮೆಲುಕು ಹಾಕಿದ್ದಾರೆ. "ನಾನು ನನ್ನ ಮೊದಲ ಚಾಂಪಿಯನ್ಸ್ ಟ್ರೋಫಿ ಆಡುವಾಗ ಪಾಕ್ ವಿರುದ್ಧದ ಪಂದ್ಯದಲ್ಲಿ ಅಫ್ರಿದಿ ಎಸೆತದಲ್ಲಿ ಕೆಟ್ಟ ಹೊಡೆತ ಬಾರಿಸಿ ಕಡಿಮೆ ಮೊತ್ತಕ್ಕೆ ಔಟ್ ಆಗಿದ್ದೆ ಹಾಗೂ ಅಂದು ನನಗೆ ನಿದ್ರೆ ಬರದೇ ಬೆಳಗ್ಗಿನ ಜಾವ ಐದು ಗಂಟೆಯವರೆಗೂ ಛಾವಣಿ ನೋಡುತ್ತಾ ನಿಂತಿದ್ದೆ ಮತ್ತು ನನ್ನ ಕೆರಿಯರ್ ಮುಗಿಯಿತು ಎಂದುಕೊಂಡಿದ್ದೆ. ಆದರೆ ಅಂತದ್ದೇನೂ ಆಗಲಿಲ್ಲ, ಇಂಥ ತಪ್ಪುಗಳು ಸಹಜ" ಎಂದು ವಿರಾಟ್ ಕೊಹ್ಲಿ ಹೇಳಿದ್ದಾರೆ.
ಅರ್ಷ್ದೀಪ್ ಸಿಂಗ್ ಪರ ಬ್ಯಾಟ್ ಬೀಸಿದ ಮಾಜಿ ಕ್ರಿಕೆಟಿಗರು
ಇನ್ನು ಅರ್ಷ್ದೀಪ್ ಸಿಂಗ್ ವಿರುದ್ಧ ವ್ಯಕ್ತವಾಗುತ್ತಿರುವ ಟೀಕೆಗಳ ಕುರಿತು ಪ್ರತಿಕ್ರಿಯಿಸಿರುವ ಮಾಜಿ ಕ್ರಿಕೆಟಿಗ ಹರ್ಭಜನ್ ಸಿಂಗ್ ಅರ್ಷ್ದೀಪ್ ಸಿಂಗ್ ಉತ್ತಮ ಆಟಗಾರ ಆತನ ಕುರಿತು ಟೀಕಿಸುವವರಿಗೆ ನಾಚಿಕೆ ಆಗಬೇಕು ಎಂದು ಟ್ವೀಟ್ ಮಾಡಿದ್ದಾರೆ. ಪಾಕಿಸ್ತಾನದ ಮೊಹಮ್ಮದ್ ಹಫೀಜ್ ಕೂಡ ಈ ಕುರಿತು ಪ್ರತಿಕ್ರಿಯಿಸಿದ್ದು, ಇಂತ ತಪ್ಪುಗಳಾಗುವುದು ಸಹಜ ಟ್ರೋಲ್ ಮಾಡಬೇಡಿ ಎಂದು ಟ್ವೀಟ್ ಮಾಡಿದ್ದಾರೆ.