
ಕೋಪಗೊಂಡಿರುವ ಬಿಸಿಸಿಐ ಅಧಿಕಾರಿಗಳು
ಕೆಲವು ಬಿಸಿಸಿಐ ಅಧಿಕಾರಿಗಳು, ಗಾಯವು ಹೇಗೆ ಸಂಭವಿಸಿತು ಎಂಬುದರ ಬಗ್ಗೆ ಈಗಾಗಲೇ ಕೋಪಗೊಂಡಿದ್ದಾರೆ. ಬಿಸಿಸಿಐ ಈ ಕುರಿತು ಸದ್ಯ ಯಾವುದೇ ವಿಚಾರಣೆ ಮಾಡಿಲ್ಲವಾದರೂ, ಮುಂದಿನ ದಿನಗಳಲ್ಲಿ ರವೀಂದ್ರ ಜಡೇಜಾ ಬಿಸಿಸಿಐಗೆ ವಿವರಣೆ ಕೊಡಬೇಕಾಗುತ್ತದೆ ಎಂದು ಹೇಳಲಾಗಿದೆ.
ರವೀಂದ್ರ ಜಡೇಜಾ ಗಾಯಗೊಂಡಿದ್ದು, ಏಷ್ಯಾಕಪ್ ಟೂರ್ನಿಯಲ್ಲಿ ಟೀಂ ಇಂಡಿಯಾ ಪ್ರದರ್ಶನದ ಮೇಲೆ ಪರಿಣಾಮ ಬೀರಿದ್ದು, ಬಿಸಿಸಿಐ ಅಧಿಕಾರಿಗಳ ಸಿಟ್ಟು ಮತ್ತಷ್ಟು ಹೆಚ್ಚಾಗಲು ಕಾರಣವಾಗಿದೆ.
ಏಷ್ಯಾ ಕಪ್ ಸೋಲು: ಕೋಚ್ ರಾಹುಲ್ ದ್ರಾವಿಡ್ರ ಹನಿಮೂನ್ ಅವಧಿ ಮುಗಿದಿದೆ; ಮಾಜಿ ಆಯ್ಕೆಗಾರ

ಸತತವಾಗಿ ಎರಡು ಪಂದ್ಯಗಳಲ್ಲಿ ಸೋಲು
ಹಾಂಗ್ಕಾಂಗ್ ವಿರುದ್ಧದ ಪಂದ್ಯದ ನಂತರ ರವೀಂದ್ರ ಜಡೇಜಾ ಗಾಯದ ಸಮಸ್ಯೆಯಿಂದ ಟೂರ್ನಿಯಿಂದ ಹೊರಬಿದ್ದರು. ಎಡಗೈ ಆಲ್ರೌಂಡರ್ ಟೂರ್ನಿ ಮಧ್ಯದಲ್ಲಿ ಗಾಯಗೊಂಡಿದ್ದು ತಂಡದಲ್ಲಿ ಅಸಮತೋಲನಕ್ಕೆ ಕಾರಣವಾಯಿತು.
ಲೀಗ್ ಸುತ್ತಿನಲ್ಲಿ ಅಜೇಯರಾಗಿದ್ದರೂ, ಸೂಪರ್ 4 ಹಂತದ ಮೊದಲ ಎರಡು ಬಹುಮುಖ್ಯ ಪಂದ್ಯಗಳಲ್ಲಿ ಸೋಲು ಕಂಡ ಭಾರತ ತಂಡ ಏಷ್ಯಾಕಪ್ ಟೂರ್ನಿಯಿಂದಲೇ ಹೊರಬಿದ್ದಿತು.

ರವೀಂದ್ರ ಜಡೇಜಾಗೆ ಶಸ್ತ್ರಚಿಕಿತ್ಸೆ
ಗಾಯಗೊಂಡಿರುವ ಜಡೇಜಾ ಈಗಾಗಲೇ ತಮ್ಮ ಗಾಯಕ್ಕೆ ಶಸ್ತ್ರಚಿಕಿತ್ಸೆ ಮಾಡಿಸಿಕೊಂಡಿದ್ದಾರೆ ಮತ್ತು ಅದರ ಬಗ್ಗೆ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಆದಷ್ಟು ಬೇಗ ವಾಪಸ್ ಬರುತ್ತೇನೆ ಎಂದು ಹೇಳಿದ್ದಾರೆ.
ಆದಾಗ್ಯೂ, ಆಲ್ರೌಂಡರ್ ಫಿಟ್ನೆಸ್ಗೆ ಚೇತರಿಸಿಕೊಳ್ಳಲು ಎಷ್ಟು ಸಮಯ ತೆಗೆದುಕೊಳ್ಳುತ್ತದೆ ಎಂಬುದರ ಕುರಿತು ಯಾವುದೇ ಖಚಿತ ಮಾಹಿತಿ ಇಲ್ಲದಿರುವುದರಿಂದ ಶೀಘ್ರದಲ್ಲೇ ರವೀಂದ್ರ ಜಡೇಜಾ ಅಂತಾರಾಷ್ಟ್ರೀಯ ಕ್ರಿಕೆಟ್ಗೆ ಮರಳುವುದು ಅನುಮಾನವಾಗಿದೆ.

ದ್ರಾವಿಡ್, ರೋಹಿತ್ ಶರ್ಮಾ ಮೇಲೂ ಬಿಸಿಸಿಐ ಕೆಂಗಣ್ಣು
ಬಿಸಿಸಿಐ ಅಧಿಕಾರಿಗಳು ರಾಹುಲ್ ದ್ರಾವಿಡ್ ಮತ್ತು ರೋಹಿತ್ ಶರ್ಮಾ ಮೇಲೂ ಕೋಪಗೊಂಡಿದ್ದಾರೆ ಎನ್ನಲಾಗಿದೆ. ಈ ರೀತಿಯ ಸಾಹಸ ಕ್ರೀಡೆಗಳಲ್ಲಿ ಭಾಗವಹಿಸದಂತೆ ರವೀಂದ್ರ ಜಡೇಜಾಗೆ ಕೋಚ್ ರಾಹುಲ್ ದ್ರಾವಿಡ್ ಸಲಹೆ ನೀಡಿದ್ದಾರೆ ಎನ್ನಲಾಗಿದ್ದೂ, ಆದರೂ ರವೀಂದ್ರ ಜಡೇಜಾ ಜಿಗಿದದ್ದು ಗಾಯಗೊಳ್ಳಲು ಕಾರಣ ಎಂದು ವರದಿಯಾಗಿದೆ.
ಗಾಯದ ಸಮಸ್ಯೆಯಿಂದ ಆಸ್ಟ್ರೇಲಿಯಾದಲ್ಲಿ ನಡೆಯಲಿರುವ ಟಿ20 ವಿಶ್ವಕಪ್ ಟೂರ್ನಿಯಿಂದ ರವೀಂದ್ರ ಜಡೇಜಾ ಹೊರಗುಳಿಯಲಿದ್ದಾರೆ. ಆಯ್ಕೆದಾರರಿಗೆ ಈಗ ಜಡೇಜಾಗೆ ಪರ್ಯಾಯ ಆಟಗಾರನ ಹುಡುಕುವುದು ಸಮಸ್ಯೆಯಾಗಿದೆ.


Click it and Unblock the Notifications











