ಐಪಿಎಲ್ 2022 ಸೀಸನ್ನಲ್ಲಿ ಅರ್ಜುನ್ಗೆ ಸಿಗಲಿಲ್ಲ ಅವಕಾಶ
ಈ ಋತುವಿನಲ್ಲಿ ಮುಂಬೈ ತಂಡವು ದಯನೀಯವಾಗಿ ಸೋತಿದ್ದು, ಸತತ ಎಂಟು ಪಂದ್ಯಗಳಲ್ಲಿ ಸೋಲನುಭವಿಸಿತು. ಈ ಸಂದರ್ಭದಲ್ಲಿ ಅರ್ಜುನ್ಗೆ ಅವಕಾಶ ನೀಡಬಹುದೆಂದು ನಿರೀಕ್ಷಿಸಲಾಗಿತ್ತು. ಆದರೆ ಮುಂಬೈ ಮ್ಯಾನೇಜ್ಮೆಂಟ್ ಒಂದೇ ಒಂದು ಪಂದ್ಯದಲ್ಲಿ ಅವರನ್ನು ಖುಷಿಪಡಿಸಲಿಲ್ಲ. ಇದರ ಬಳಿಕ ಮುಂಬೈ ರಣಜಿ ತಂಡದಲ್ಲಿ ಸರ್ಫರಾಜ್ ಖಾನ್ ಮತ್ತು ಅವರ ಸಹೋದರ ಮುಶೀರ್ ಸ್ಥಾನ ಪಡೆದರು. ಕೂಚ್ ಬೆಹರ್ ಟ್ರೋಫಿಯಲ್ಲಿ ಮುಶೀರ್ ಮಿಂಚಿದ್ದರು. ವಾಸಿಂ ಜಾಫರ್ ಅವರ ಅಳಿಯ ಅರ್ಮಾನ್ ಜಾಫರ್ ಅವರಿಗೂ ಅವಕಾಶ ಸಿಕ್ಕಿತು. ಆದ್ರೆ ಅರ್ಜುನ್ಗೆ ಅವಕಾಶ ನೀಡದ ಮುಂಬೈ ವಿರುದ್ಧ ಅಭಿಮಾನಿಗಳು ಕೋಪಗೊಂಡಿದ್ದಾರೆ.
RCB vs LSG: ರಜತ್ ಪಾಟೀದಾರ್ ಅಬ್ಬರದ ಶತಕ, ಪ್ಲೇ ಆಫ್ನಲ್ಲಿ ವೇಗದ ಶತಕದ ದಾಖಲೆ
30 ಲಕ್ಷ ಬೆಲೆಗೆ ಹರಾಜಾಗಿದ್ದ ಅರ್ಜುನ್ ತೆಂಡೂಲ್ಕರ್
ಐಪಿಎಲ್ 2022 ರ ಮೆಗಾ ಹರಾಜಿನಲ್ಲಿ ಅರ್ಜುನ್ ತೆಂಡೂಲ್ಕರ್ ಮುಂಬೈ ಫ್ರಾಂಚೈಸಿಯು ಮೂಲ ಬೆಲೆಗಿಂತ 10 ಲಕ್ಷ ರೂಪಾಯಿ ಹೆಚ್ಚು ಮೊತ್ತಕ್ಕೆ (30 ಲಕ್ಷ) ಖರೀದಿಸುವ ಮೂಲಕ ತಂಡವನ್ನ ಎರಡನೇ ಬಾರಿಗೆ ಸೇರಿಸಿಕೊಂಡ್ರು. ಆದ್ರೆ ಕಳೆದ ಸೀಸನ್ನಂತೆ ಐಪಿಎಲ್ 15ನೇ ಸೀಸನ್ನಲ್ಲೂ ಅರ್ಜುನ್ ತೆಂಡೂಲ್ಕರ್ಗೆ ಅವಕಾಶ ನೀಡದೆ ಅಭಿಮಾನಿಗಳ ಕೆಂಗಣ್ಣಿಗೆ ಗುರಿಯಾಯಿತು.
ಯಾಸಿನ್ ಮಲಿಕ್ ಬೆಂಬಲಿಸಿ ಟ್ವೀಟ್ ಮಾಡಿದ್ದ ಅಫ್ರಿದಿಗೆ, ಸಖತ್ ಆಗಿ ಉತ್ತರ ನೀಡಿದ ಅಮಿತ್ ಮಿಶ್ರಾ
ಮುಂಬೈ ರಣಜಿ ಸ್ಕ್ವಾಡ್
ಮುಂಬೈ ತಂಡ: ಪೃಥ್ವಿ ಶಾ (ನಾಯಕ), ಯಶಸ್ವಿ ಜೈಸ್ವಾಲ್, ಭೂಪೇನ್ ಲಾಲ್ವಾನಿ, ಅರ್ಮಾನ್ ಜಾಫರ್, ಸರ್ಫರಾಜ್ ಖಾರ್, ಸುವೇದ್ ಪರ್ಕರ್, ಆಕರ್ಷಿತ್ ಗೊಮೆಲ್, ಆದಿತ್ಯ ತಾರೆ, ಹಾರ್ದಿಕ್ ತಮೋರ್, ಅಮನ್ ಖಾನ್, ಸಾಯಿರಾಜ್ ಪಾಟೀಲ್, ಶಮ್ಸ್ ಮುಲಾನಿ, ದ್ರುಮಿಲ್ ಮಟ್ಕರ್, ತನುಷ್ ಕೊಟ್ಟಿ, ಕುಲಕರ್ಣಿ, ತುಷಾರ್ ದೇಶಪಾಂಡೆ, ಮೋಹಿತ್ ಅವಸ್ತಿ, ರಾಯ್ಸ್ಟನ್ ಡಯಾಸ್, ಸಿದ್ಧಾರ್ಥ್ ರೌತ್, ಮುಶೀರ್ ಖಾನ್