ಆತ ಉತ್ತಮ ಆಯ್ಕೆಗಾರ ಆಗಿರಲಿಲ್ಲ
ಚೇತನ್ ಶರ್ಮಾ ನೇತೃತ್ವದ ಆಯ್ಕೆ ಸಮಿತಿಯ ಕಾಯಕ್ಷಮತೆಯ ಬಗ್ಗೆ ಡ್ಯಾನಿಶ್ ಕನೇರಿಯಾ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಚೇತನ್ ಶರ್ಮಾ ತಾವು ಮಾಡುವ ಕೆಲಸದಲ್ಲಿ ವಿಫಲವಾಗಿದ್ದರು, ಉತ್ತಮ ತಂಡವನ್ನು ಆಯ್ಕೆ ಮಾಡಲಿಲ್ಲ ಎಂದು ಹೇಳಿದರು.
ಹಲವು ಸರಣಿಗಳಿಗೆ ಬೇರೆ ಬೇರೆ ನಾಯಕರನ್ನು ನೇಮಿಸಿದರು, ಹಲವು ಬೇಡದ ಪ್ರಯೋಗಗಳನ್ನು ಮಾಡಿದರು. ಅವರ ಪ್ರಯೋಗಗಳ ಕಾರಣದಿಂದ ಟೀಂ ಇಂಡಿಯಾ ಒಂದು ನಿಶ್ಚಿತ ತಂಡವಾಗಲೇ ಇಲ್ಲ, ಹಲವು ಬದಲಾವಣೆಗಳನ್ನು ಮಾಡುತ್ತಲೇ ಇದ್ದರು ಎಂದು ಹೇಳಿದರು.
FIFA World cup 2022: ಫ್ರಾನ್ಸ್ಗೆ ಆಘಾತ, ಸ್ಟ್ರೈಕರ್ ಕರೀಮ್ ಬೆಂಜೆಮಾ ಟೂರ್ನಿಯಿಂದ ಔಟ್
ಪ್ರತಿಭಾವಂತರಿಗೆ ಅವಕಾಶ ಸಿಗಲಿಲ್ಲ
ಅವರು ಆಯ್ಕೆಗಳು ಪ್ರಶ್ನಾರ್ಹವಾಗಿದ್ದವು. ಕಡಿಮೆ ಸಮಯದಲ್ಲಿ ಹಲವರನ್ನು ನಾಯಕರನ್ನಾಗಿ ನೇಮಿಸಿದರು. ತಂಡದಲ್ಲಿ ಇರಲು ಅರ್ಹತೆ ಇರುವ ಹಲವು ಪ್ರತಿಭಾವಂತ ಆಟಗಾರರಿಗೆ ಅವಕಾಶ ಸಿಗಲಿಲ್ಲ. ಕಳೆದ ವರ್ಷದಲ್ಲಿ ಭಾರತ ತಂಡವನ್ನು ಎಂಟು ವಿಭಿನ್ನ ನಾಯಕರು ಮುನ್ನಡೆಸಿದ್ದಾರೆ. ಕೆಲವರಿಗೆ ಮೂರು ನಾಲ್ಕು ಪಂದ್ಯಗಳಲ್ಲಿ ಅವಕಾಶ ನೀಡಿ ನಂತರ ಕೈಬಿಡಲಾಯಿತು ಎಂದು ಹೇಳಿದರು.
ಮಾಜಿ ಕ್ರಿಕೆಟಿಗರು ಈ ಸಮಿತಿಯಲ್ಲಿ ಇರಬೇಕು ಎನ್ನುವುದು ನಿಜ, ಆದರೆ ಹೆಚ್ಚಿನ ಅನುಭವ ಇರುವ ಮಾಜಿ ಆಟಗಾರರು ಸಮಿತಿಯಲ್ಲಿ ಇರಬೇಕು. ಚೇತನ್ ಶರ್ಮಾ ಉತ್ತಮ ಕ್ರಿಕೆಟಿಗನಾಗಿರಲಿಲ್ಲ, ಈ ಬಾರಿ ಉತ್ತಮ ಅಭ್ಯರ್ಥಿಯನ್ನು ಬಿಸಿಸಿಐ ಆಯ್ಕೆ ಮಾಡಬೇಕು ಎಂದು ಕನೇರಿಯಾ ಹೇಳಿದ್ದಾರೆ.
ಆಯ್ಕೆ ಸಮಿತಿಯನ್ನು ವಜಾಗೊಳಿಸಿದ ಬಿಸಿಸಿಐ
2022ರ ಟಿ20 ವಿಶ್ವಕಪ್ನ ಸೆಮಿ ಫೈನಲ್ನಲ್ಲಿ ಸೋಲುವ ಮೂಲಕ ಟೀಂ ಇಂಡಿಯಾ ವಿಶ್ವಕಪ್ನಿಂದ ನಿರ್ಗಮಿಸಿತ್ತು. ಅದರ ಪರಿಣಾಮವಾಗಿ ಬಿಸಿಸಿಐ ಆಯ್ಕೆ ಸಮಿತಿಯನ್ನು ವಜಾ ಮಾಡಿದೆ. ಹೊಸ ಆಯ್ಕೆಗಾರರ ನೇಮಕ ಮಾಡಿಕೊಳ್ಳಲು ಮುಂದಾಗಿದೆ.
ಕಳೆದ ಟಿ20 ವಿಶ್ವಕಪ್ನಲ್ಲಿ ಭಾರತ ಸೆಮಿಫೈನಲ್ ತಲುಪುವಲ್ಲಿ ಕೂಡ ವಿಫಲವಾಗಿತ್ತು. ನಂತರ ಏಷ್ಯಾಕಪ್ನಲ್ಲಿ ಸೋತು ನಿರ್ಗಮಿಸಿತು. ಈಗ 2022ರ ಟಿ20 ವಿಶ್ವಕಪ್ನಲ್ಲಿ ಸೆಮಿಫೈನಲ್ನಲ್ಲಿ ಸೋತು ನಿರ್ಗಮಿಸಿತು. ಸಂದರ್ಭಗಳಿಗೆ ತಕ್ಕಂತೆ ತಂಡವನ್ನು ಆಯ್ಕೆ ಮಾಡುವಲ್ಲಿ ಬಿಸಿಸಿಐ ವಿಫಲವಾಗಿದೆ ಎಂದು ಹಲವರು ಆಕ್ರೋಶ ವ್ಯಕ್ತಪಡಿಸಿದ್ದರು. ಕೊನೆಗೂ, ಬಿಸಿಸಿಐ ಹಲವು ಬದಲಾವಣೆಗೆ ಮುಂದಾಗಿದೆ.