ಏಕದಿನ ಸರಣಿಯಲ್ಲಿ ಅವಕಾಶ
"ಹೊಸ ಆಟಗಾರರಿಗೆ ಖಂಡಿತವಾಗಿಯೂ ಆಡುವ ಅವಕಾಶಗಳು ದೊರೆಯಲಿದೆ. ಆದರೆ ನಾವು ಸರಣಿಯನ್ನು ಗೆಲ್ಲಲೇಬೇಕಿದೆ. ಅಂತಿಮ ಏಕದಿನ ಪಂದ್ಯದಲ್ಲಿ ನಮಗೆ ಕೆಲ ಹೊಸ ಆಟಗಾರರಿಗೆ ಅವಕಾಶ ನೀಡುವ ಸಂದರ್ಭ ದೊರೆತಿತ್ತು. ಈ ಮೂಲಕ ಅಂತಾರಾಷ್ಟ್ರೀಯ ಪಂದ್ಯದಲ್ಲಿ ಆಡುವ ಅನುಭವನ್ನು ಪಡೆದುಕೊಂಡರು, ಯಾಕೆಂದರೆ ನಾವು ಅದಾಗಲೇ ಸರಣಿಯನ್ನು ಗೆದ್ದಾಗಿತ್ತು" ಎಂದು ಶಿಖರ್ ಧವನ್ ಹೇಳಿದ್ದಾರೆ.
ಆರಂಭದ ಎರಡು ಪಂದ್ಯಗಳಲ್ಲ ಗೆಲ್ಲಬೇಕಿದೆ
"ಈಗ ಇದು ಮತ್ತೊಂದು ಹೊಸ ಸರಣಿಯಾಗಿದೆ. ಹೀಗಾಗಿ ನಾವು ಆರಂಭದಲ್ಲಿ ನಮ್ಮ ಅತ್ಯುತ್ತಮ ಆಡುವ ಬಳಗದ ಮೂಲಕ ಕಣಕ್ಕಿಳಿಯಲಿದ್ದೇವೆ. ಆರಂಭಿಕ ಎರಡು ಪಂದ್ಯಗಳನ್ನು ಗೆಲ್ಲಲು ನಾವು ಪ್ರಯತ್ನಿಸುತ್ತೇವೆ. ಬಳಿಕ ಪರಿಸ್ಥಿತಿಯನ್ನು ನೋಡಿಕೊಂಡು ಅಂತಿಮ ಪಂದ್ಯದಲ್ಲಿ ಹೊಸ ಆಟಗಾರರಿಗೆ ಅವಕಾಶವನ್ನು ನೀಡುತ್ತೇವೆ" ಎಂದಿದ್ದಾರೆ ಶಿಖರ್ ಧವನ್.
ಯುವ ಆಟಗಾರರು ಕಣಕ್ಕಿಳಿಯಲು ಸಜ್ಜು
"ಯುವ ಆಟಗಾರರು ಪಂದ್ಯವನ್ನಾಡಲು ಖಂಡಿತಾ ಸಜ್ಜಾಗಿದ್ದಾರೆ. ಅದೇ ಕಾರಣಕ್ಕಾಗಿ ಅವರು ಈ ಪ್ರವಾಸಕ್ಕೆ ಆಗಮಿಸಿದ್ದಾರೆ. ನೀವು ನೋಡಿದಂತೆಯೇ ಯುವ ಆಟಗಾರರು ಏಕದಿನ ಸರಣಿಯಲ್ಲಿ ಅದ್ಭುತವಾದ ಪ್ರದರ್ಶನ ನೀಡಿದ್ದಾರೆ. ಆ ಆತ್ಮವಿಶ್ವಾಸವನ್ನು ನಾವು ಟಿ20 ಸರಣಿಯಲ್ಲಿಯೂ ಮುಂದುವರಿಸುತ್ತೇವೆ" ಎಂದಿದ್ದಾರೆ ಶಿಖರ್ ಧವನ್.
ಭಾರತದ ಸಂಭಾವ್ಯ ತಂಡ
ಪೃಥ್ವಿ ಶಾ, ಶಿಖರ್ ಧವನ್(ನಾಯಕ), ಇಶಾನ್ ಕಿಶನ್/ಸಂಜು ಸ್ಯಾಮ್ಸನ್( ವಿಕೆಟ್ ಕೀಪರ್), ಸೂರ್ಯ ಕುಮಾರ್ ಯಾದವ್, ಮನೀಶ್ ಪಾಂಡೆ, ಹಾರ್ದಿಕ್ ಪಾಂಡ್ಯ, ಕೃನಾಲ್ ಪಾಂಡ್ಯ, ದೀಪಕ್ ಚಹರ್, ಯುಜುವೇಂದ್ರ ಚಾಹಲ್, ಚೇತನ್ ಸಕರಿಯಾ, ಭುವನೇಶ್ವರ್ ಕುಮಾರ್