ಗಲ್ಲಿ ಕ್ರಿಕೆಟ್ ನೆನಪು
ಕೆಕೆಆರ್ ಮತ್ತು ರಾಜಸ್ಥಾನ ತಂಡಗಳ ನಡುವಣ ಪಂದ್ಯದ ಬಳಿಕ ಅತಿ ಹೆಚ್ಚು ಲೇವಡಿಗೆ ಒಳಗಾಗಿರುವುದು ಕರ್ನಾಟಕದ ಆಟಗಾರ ಸ್ಟುವರ್ಟ್ ಬಿನ್ನಿ.
ಸ್ಟುವರ್ಟ್ ಬಿನ್ನಿ ನಾವು ಬಾಲ್ಯದಲ್ಲಿ ಗಲ್ಲಿ ಕ್ರಿಕೆಟ್ನಲ್ಲಿ ಆಡುತ್ತಿದ್ದ ಆಟಗಾರನಂತೆ. 'ಅವನನ್ನು ಔಟ್ ಮಾಡಬೇಡ, ಚೆಂಡು ವೇಸ್ಟ್ ಮಾಡ್ತಾನೆ' ಎನ್ನುತ್ತಿದ್ದೆವಲ್ಲ ಹಾಗೆ ಎಂದು ಅಮನ್ ಎಂಬುವವರು ಟ್ವೀಟ್ ಮಾಡಿದ್ದಾರೆ.
ಕಾಡುವ ಬಟ್ಲರ್ ನೆನಪು
ರಾಜಸ್ಥಾನ ರಾಯಲ್ಸ್ ತಂಡದ ನಾಯಕ ಅಜಿಂಕ್ಯ ರಹಾನೆ, ಅಂತರರಾಷ್ಟ್ರೀಯ ಪಂದ್ಯದಲ್ಲಿ ಆಡುವ ಸಲುವಾಗಿ ತವರಿಗೆ ಮರಳಿರುವ ಇಂಗ್ಲೆಂಡ್ನ ಜೋಸ್ ಬಟ್ಲರ್ ಅವರನ್ನು ನೆನಪಿಸಿಕೊಂಡು 'ಯಾದ್ ಆಯಾ ರಹಿ ಹೈ, ತೇರಿ ಯಾದ್ ಆ ರಹಿ ಹೈ' ಎಂದು ಹಾಡುತ್ತಿರುವುದಾಗಿ ಸಾಗರ್ ಟ್ವೀಟ್ ಮಾಡಿದ್ದಾರೆ.
ಈ ಮೂರು ಬಲು ದುಬಾರಿ
ಕಳೆದ ಐಪಿಎಲ್ ಆವೃತ್ತಿಯಲ್ಲಿ ಸಾಧಾರಣ ಪ್ರದರ್ಶನ ನೀಡಿದ್ದರೂ ಈ ಬಾರಿಯ ಹರಾಜು ಪ್ರಕ್ರಿಯೆಯಲ್ಲಿ ಭಾರಿ ಬೇಡಿಕೆ ಗಿಟ್ಟಿಸಿಕೊಂಡವರು ಎಡಗೈ ವೇಗದ ಬೌಲರ್ ಜಯದೇವ್ ಉನದ್ಕತ್. ಅವರನ್ನು ಬರೋಬ್ಬರಿ 11.5 ಕೋಟಿಗೆ ರಾಜಸ್ಥಾನ ರಾಯಲ್ಸ್ ತಂಡ ಖರೀದಿ ಮಾಡಿತ್ತು. ಆದರೆ ಟೂರ್ನಿಯುದ್ದಕ್ಕೂ ಅತಿ ಹೆಚ್ಚು ರನ್ಗಳನ್ನು ಬಿಟ್ಟುಕೊಟ್ಟ ಉನದ್ಕತ್, ಪ್ರತಿ ಪಂದ್ಯದಲ್ಲಿಯೂ ದುಬಾರಿಯಾಗಿದ್ದು ಮಾತ್ರವಲ್ಲ, ತಂಡದ ಖಜಾನೆಗೂ ದುಬಾರಿಯಾಗಿದ್ದರು.
ದೇಶದಲ್ಲಿ ಅತಿ ದುಬಾರಿಯಾಗುತ್ತಿರುವ ವಸ್ತುಗಳೆಂದರೆ
3. ಡೀಸೆಲ್
2. ಪೆಟ್ರೋಲ್
1. ಉನದ್ಕತ್
ಕೆಲವು ಸಂಗತಿಗಳ ಮೂಲ ಗೊತ್ತಾಗುವುದಿಲ್ಲ
ಕೆಲವು ಸಂಗತಿಗಳು ಹೇಗೆ ನಡೆದವು ಎಂಬುದು ಅರ್ಥವಾಗುವುದೇ ಇಲ್ಲ ಎಂದು ರಾಜಸ್ಥಾನ ರಾಯಲ್ಸ್ ತಂಡ ಪ್ಲೇಆಫ್ಗೆ ಪ್ರವೇಶ ಪಡೆದಿದ್ದು ಹೇಗೆ ಎಂಬುದೇ ಗೊತ್ತಾಗುತ್ತಿಲ್ಲ ಎಂದು ಲೇವಡಿ ಮಾಡಿದ್ದಾರೆ.
ಓವರ್ ಕಾನ್ಫಿಡೆನ್ಸ್
ಒಂದೂ ಪಂದ್ಯದಲ್ಲಿ ಉತ್ತಮ ಆಟವಾಡದ ಸ್ಟುವರ್ಟ್ ಬಿನ್ನಿಯನ್ನು ಗೌತಮ್ಗಿಂತ ಮೊದಲು ಬ್ಯಾಟಿಂಗ್ಗೆ ಕಳುಹಿಸಿದ್ದಕ್ಕೆ ರಾಜಸ್ಥಾನ ರಾಯಲ್ಸ್ ಅಭಿಮಾನಿಗಳು ಸಿಟ್ಟಿಗೆದ್ದಿದ್ದಾರೆ. ಇನ್ನು ಕೆಲವರು ಅದನ್ನು ತಮಾಷೆ ಮಾಡಿದ್ದಾರೆ.
ಲಾರ್ಡ್ ಸ್ಟುವರ್ಟ್ ಬಿನ್ನಿ ಅವರನ್ನು ಕೃಷ್ಣಪ್ಪ ಗೌತಮ್ಗಿಂತ ಮೇಲಿನ ಕ್ರಮಾಂಕದಲ್ಲಿ ಕಳುಹಿಸಲಾಗಿದೆ. ಇಷ್ಟು ಅತಿಯಾದ ಆತ್ಮವಿಶ್ವಾಸ ಎಲ್ಲಿಂದ ಬರುತ್ತದೆ? ಎಂದು ಟ್ವಿಟ್ಟಿಗರು ಕೇಳಿದ್ದಾರೆ.


Click it and Unblock the Notifications












