ಡೆಲ್ಲಿ ಕ್ಯಾಪಿಟಲ್ಸ್ ಸಮತೋಲಿತ ತಂಡ: ಸಂಜಯ್ ಬಾಂಗರ್
ಡೆಲ್ಲಿ ಕ್ಯಾಪಿಟಲ್ಸ್, ಅದ್ಭುತವಾದ ಸಮತೋಲನ ಹೊಂದಿದ ತಂಡವನ್ನು ಹೊಂದಿದೆ. ಯುವಕರ-ಅನುಭವಿಗಳ. ವಿದೇಶಿ ಫಾಸ್ಟ್ ಬೌಲಿಂಗ್, ಭಾರತೀಯ ಸ್ಪಿನ್ನರ್ಸ್, ಭಾರತೀಯ ಬಾಟ್ಸ್ಮನ್ಗಳ ಉತ್ತಮ ಸಮತೋಲನ ಆ ತಂಡದಲ್ಲಿದೆ.
ಆಟಗಾರರ ಮೇಲೆ ವಿಶ್ವಾಸವಿಡಬೇಕು: ಸಂಜಯ್ ಬಾಂಗರ್
ಡೆಲ್ಲಿ ಕ್ಯಾಪಿಟಲ್ಸ್ ತಂಡವು ತಮ್ಮ ತಂಡದ ಆಟಗಾರರ ಪ್ರತಿಭೆಯ ಮೇಲೆ ವಿಶ್ವಾಸವಿಡಬೇಕು. ಇಂದಿನ ರಾತ್ರಿಯ ಪಂದ್ಯ ಏನಾದರೂ ಆಗಲಿ, ಅವರ ತಮ್ಮ ತಂಡದ ಆಟಗಾರರ ಮೇಲಿನ ವಿಶ್ವಾಸ ಕಳೆದುಕೊಳ್ಳಬಾರದು, ಏಕೆಂದರೆ ಅದೊಂದು ಸಮತೋಲಿತ ತಂಡ ಎಂದಿದ್ದಾರೆ ಬಾಂಗರ್.
ಶಿಖರ್ ಹಾಗೂ ಅಶ್ವಿನ್ ತಡವಾಗಿ ತಂಡಕ್ಕೆ ಬಂದವರು
ಶಿಖರ್ ಧವನ್ ಹಾಗೂ ಆರ್.ಅಶ್ವಿನ್ ಅನ್ನು ತಡವಾಗಿ ತಂಡಕ್ಕೆ ಸೇರಿಸಿಕೊಂಡಿತು ಡೆಲ್ಲಿ ಕ್ಯಾಪಿಟಲ್ಸ್ ಆದರೆ ಆ ಇಬ್ಬರೂ ಆಟಗಾರರು ಅದ್ಭುತ ಪ್ರದರ್ಶನ ನೀಡುತ್ತಿದ್ದಾರೆ. ಆಟಗಾರರನ್ನು ಕೈಬಿಡುವ, ಹೊಸ ಆಟಗಾರರನ್ನು ಸೇರಿಸಿಕೊಳ್ಳುವ ಪ್ರಕ್ರಿಯೆಗೆ ಸಂಬಂಧಿಸಿದಂತೆ ಬಾಂಗರ್ ಮೇಲಿನ ಮಾತುಗಳನ್ನು ಹೇಳಿದ್ದಾರೆ.
ಡೆಲ್ಲಿ ಪರ ಕೀ ಆಟಗಾರರು
ಮುಂಬೈ ವಿರುದ್ಧ ಇಂದು ರಾತ್ರಿ 7 ಗಂಟೆಗೆ ದುಬೈನಲ್ಲಿ ಐಪಿಎಲ್ ಫೈನಲ್ ನಡೆಯಲಿದ್ದು, ಡೆಲ್ಲಿ ಪರ, ಶಿಖರ್ ಧವನ್, ಸ್ಟೋಯ್ನಿಸ್, ಶ್ರೇಯಸ್ ಐಯ್ಯರ್, ಅಶ್ವಿನ್, ರಬಾಡಾ ಅವರುಗಳು ಪ್ರಮುಖ ಆಟಗಾರರಾಗಿದ್ದಾರೆ. ಪೃಥ್ವಿ ಶಾ, ಪಂತ್ ಲಯಕ್ಕೆ ಬರಬೇಕಿದೆ.