ನನ್ನ ಕ್ರಿಕೆಟ್ ಕಲಿಕೆಗೆ ಇದು ಸದವಾಕಾಶ
ಯುಎಇಗೆ ಬುಧವಾರದಂದು ವಿಮಾನ ಏರುವುದಕ್ಕೂ ಮುನ್ನ ಮುಂಬೈನ ಹೋಟೆಲ್ ನಲ್ಲಿ ಕ್ವಾರಂಟೈನಲ್ಲಿದ್ದಾಗ ಡೆಕ್ಕನ್ ಕ್ರಾನಿಕಲ್ ಜೊತೆ ಮಾತನಾಡಿ ತಮ್ಮ ಸಂತಸ ಹಂಚಿಕೊಂಡಿದ್ದಾರೆ. ಹಿರಿಯರು ಅನೇಕರು ಇರುವ ತಂಡಕ್ಕೆ ಆಯ್ಕೆಯಾಗಿರುವುದು ನನ್ನ ಪುಣ್ಯ. ನನ್ನ ಕ್ರಿಕೆಟ್ ಕಲಿಕೆಗೆ ಒಳ್ಳೆ ಅವಕಾಶ ಸಿಕ್ಕಿದೆ. ಈ ಬಾರಿ ಬೇರೆ ದೇಶದ ಆಟಗಾರರನ್ನು ನೋಡಿ ಕಲಿಯಬಹುದು. ಸಿಕ್ಕ ಅವಕಾಶದಲ್ಲಿ ಉತ್ತಮ ಸಾಧನೆ ಮಾಡುವ ಭರವಸೆ ಇದೆ ಎಂದಿದ್ದಾರೆ.
ಇತರೆ ಕ್ರೀಡೆಗಳಲ್ಲೂ ಪ್ರವೀಣೆ
ಕ್ರಿಕೆಟ್ ಅಲ್ಲದೆ ಈಜು, ಲಾನ್ ಟೆನಿಸ್ ಆಟದಲ್ಲೂ ಅನಘ ಪರಿಣತಿ ಹೊಂದಿದ್ದಾರೆ. 5 ವರ್ಷ ವಯಸ್ಸಿನಲ್ಲಿದ್ದಾಗ ಟೆನಿಸ್ ಆಡಲು ಶುರು ಮಾಡಿದೆ ಜೊತೆಗೆ ಈಜು ಕಲಿಕೆ ಮುಂದುವರೆಯಿತು. ಗಲ್ಲಿಯಲ್ಲಿ ಟೆನಿಸ್ ಬಾಲ್ ಕ್ರಿಕೆಟ್ ಆಡುತ್ತಿದ್ದಾಗ, ನನ್ನ ತಂದೆಯ ಸ್ನೇಹಿತರೊಬ್ಬರು ನನ್ನ ಕ್ರಿಕೆಟ್ ಆಟದ ಶೈಲಿ ಕಂಡು ಸರಿಯಾದ ಕೋಚಿಂಗ್ ಕೊಡಿಸುವಂತೆ ಸಲಹೆ ನೀಡಿದರು. ನಂತರ ನನ್ನ ಕ್ರಿಕೆಟ್ ಆಟ ಶುರುವಾಯಿತು. ಟಾನ್ಸೆಂಡ್ ಪಿಯುಸಿ ಕಾಲೇಜಿಗೆ ಈಗಷ್ಟೇ ಎಂಟ್ರಿ ಕೊಟ್ಟಿರುವ ಅನಘ ಸದ್ಯ ಅಂತಾರಾಷ್ಟ್ರೀಯ ಮಟ್ಟದ ಕ್ರಿಕೆಟ್ ಆಡುತ್ತಿದ್ದಾರೆ
ಐಪಿಎಲ್ 2020 ನೆಚ್ಚಿನ ತಂಡ, ಆಟಗಾರ ಆಯ್ಕೆ ಮಾಡಿದ ಮಿಥಾಲಿ ರಾಜ್
ಹೆರಾನ್ ಕ್ರಿಕೆಟ್ ಕ್ಲಬ್ ಕೋಚ್
ಹೆರಾನ್ ಕ್ರಿಕೆಟ್ ಕ್ಲಬ್ ಕೋಚ್ ಕೆ ಮುರಳೀಧರ್ ಅವರು ಮೊದಲಿಗೆ ಅನಘ ಪ್ರತಿಭೆ ಗುರುತಿಸಿ ಕೋಚಿಂಗ್ ನೀಡಿದರು. 2 ವಾರದ ತರಬೇತಿ ನಂತರ ಕರ್ನಾಟಕ ಅಂಡರ್ 16 ತಂಡಕ್ಕೆ ಆಡಿದ ಅನಘ ಒಂದು ವರ್ಷದ ಬಳಿಕ ಅಂಡರ್ 19 ತಂಡಕ್ಕೆ ಸೇರಿದ ಸಾಧನೆ ಮಾಡಿದರು. ಅಂಡರ್ 23 ಮಟ್ಟದಲ್ಲೂ ಆಡಿ ಬೆಸ್ಟ್ ಎಡಗೈ ಸ್ಪಿನ್ನರ್ ಎನಿಸಿಕೊಂಡರು.
ನಂತರ ಲಾಕ್ಡೌನ್ ಅವಧಿಯಲ್ಲಿ ಸಿಕ್ಸ್ ಅಕಾಡೆಮಿಯಲ್ಲಿ ಜೆಸ್ವಂತ್ ಅವರ ಮಾರ್ಗದರ್ಶನದಲ್ಲಿ ಆಲ್ ರೌಂಡರ್ ಆಗಿ ರೂಪುಗೊಳ್ಳಲು ಬೇಕಾದ ಕೌಶಲ್ಯ ಪಡೆದುಕೊಂಡರು. ಬೌಲಿಂಗ್, ಬ್ಯಾಟಿಂಗ್ ಹಾಗೂ ಫೀಲ್ಡಿಂಗ್ ಬಗ್ಗೆ ಗಮನ ಹರಿಸಿ ನಡೆಸಿದ ಪರಿಶ್ರಮ ಈಗ ಫಲ ನೀಡಿದೆ.
ರವೀಂದ್ರ ಜಡೇಜ ಮಾನಸಿಕ ಗುರು
ಟೀಂ ಇಂಡಿಯಾ ಆಲ್ ರೌಂಡರ್ ರವೀಂದ್ರ ಜಡೇಜ ಮಾನಸಿಕ ಗುರುವಾಗಿ ಅನಘ ಪರಿಗಣಿಸಿದ್ದಾಳೆ, ಜಡೇಜರಂತೆ ಅನಘ ಕೂಡಾ ಎಡಗೈ ಬ್ಯಾಟಿಂಗ್ ಮಾಡುತ್ತಾಳೆ. ಚಿಕ್ಕಂದಿನಿಂದ ಎಷ್ಟೋ ಪ್ರಶಸ್ತಿಗಳನ್ನು ಗೆದ್ದಿದ್ದಾಳೆ. ಟಿ20 ಚಾಲೆಂಜ್ ತಂಡಕ್ಕೆ ಆಯ್ಕೆಯಾಗಿರುವುದು ದೊಡ್ಡ ಬಹುಮಾನವಾಗಿದೆ ಎಂದು ಅನಘ ಅವರ ತಂದೆ ಮುರಳಿ ಪ್ರಸಾದ್ ಸಂತಸ ವ್ಯಕ್ತಪಡಿಸಿದ್ದಾರೆ.
ಅನಘಾಳ ಕ್ರಿಕೆಟ್ ಆಸೆಗೆ ನೆರವಾಗಲು ಎಂಎನ್ ಸಿ ಕಂಪನಿ ಕೆಲಸವನ್ನು ಪ್ರಸಾದ್ ತೊರೆದಿದ್ದಾರೆ. ಅನಘಾ ಅವರ ತಾಯಿ ಆಯುರ್ವೇದ ವೈದ್ಯೆಯಾಗಿದ್ದಾರೆ.