ಬೆಂಗಳೂರು, ನವೆಂಬರ್ 09: ಮಹಾರಾಷ್ಟ್ರ ವಿರುದ್ಧ ಭರ್ಜರಿ ತ್ರಿಶತಕ ಬಾರಿಸಿ ಉತ್ತಮ ಲಯದಲ್ಲಿರುವ ಮಯಾಂಕ್ ಅಗರವಾಲ್ ಅವರು ಮತ್ತೊಮ್ಮೆ ಶತಕ ಬಾರಿಸಿದ್ದಾರೆ.
ಆಲೂರಿನಲ್ಲಿ ನಡೆದಿರುವ ದೆಹಲಿ ವಿರುದ್ಧದ ಪಂದ್ಯದ ಮೊದಲ ದಿನದಂದು ಮೂರನೇ ಕ್ರಮಾಂಕದಲ್ಲಿ ಆಡಲು ಬಂದ ಮಯಾಂಕ್ ಅಗರವಾಲ್ ಅವರು 23 ಬೌಂಡರಿ, 3 ಸಿಕ್ಸರ್ ಗಳಿದ್ದ 169ರನ್ ಚೆಚ್ಚಿ ಅಜೇಯರಾಗಿ ಉಳಿದರು.
ಮಯಾಂಕ್ ಶತಕ, ಮನೀಶ್ ಪಾಂಡೆ ಅವರ 74ರನ್ ಗಳ ನೆರವಿನಿಂದ ಕರ್ನಾಟಕ ತನ್ನ ಮೊದಲ ಇನ್ನಿಂಗ್ಸ್ ನಲ್ಲಿ ಮೊದಲ ದಿನದ ಅಂತ್ಯಕ್ಕೆ 348/4 ಸ್ಕೋರ್ ಮಾಡಿ, ಉತ್ತಮ ಸ್ಥಿತಿಯಲ್ಲಿದೆ. ಸ್ಟುವರ್ಟ್ ಬಿನ್ನಿ 14ರನ್ ಗಳಿಸಿ ಆಡುತ್ತಿದ್ದಾರೆ.
STUMPS, Day 1, Karnataka: 348/4, 90 overs. Mayank Agarwal 169 & Stuart Binny 14. #RanjiTrophy #KARvDEL
— Karnataka Ranji Team (@RanjiKarnataka) November 9, 2017
ರಿಷಬ್ ಪಂತ್ ನಾಯಕತ್ವದ ದೆಹಲಿ ತಂಡದಲ್ಲಿ ಗೌತಮ್ ಗಂಭೀರ್, ಉನ್ಮುಕ್ತ್ ಚಂದ್, ನಿತೀಶ್ ರಾಣ ಕೂಡಾ ಆಡುತ್ತಿದ್ದಾರೆ. ದೆಹಲಿ ಪರ ನವದೀಪ್, ಕುಲ್ವಂತ್, ವಿಕಾಸ್, ಮನನ್ ಶರ್ಮ ತಲಾ ಒಂದು ವಿಕೆಟ್ ಗಳಿಸಿದರು.