ಧೋನಿಗೆ ರಕ್ಷಣೆ ಬೇಕಿಲ್ಲ
'ಜನರನ್ನು ರಕ್ಷಿಸುವ, ನಾಡನ್ನು ಕಾಯುವ ಜವಾಬ್ದಾರಿ ಧೋನಿಗೆ ನೀಡಿರುವುದರಿಂದ ಅವರಿಗೇ ರಕ್ಷಣೆ ನೀಡಬೇಕಾದ ಅಗತ್ಯವಿದೆ ಅಂತ ನನಗನ್ನಿಸುತ್ತಿಲ್ಲ,' ಎಂದು ಎನ್ಡಿಟಿವಿ ಜೊತೆ ಮಾತನಾಡುತ್ತ ಜನರಲ್ ರಾವತ್ ಹೇಳಿಕೊಂಡಿದ್ದಾರೆ. ಧೋನಿಯವರು ಸೇನಾ ಅಭ್ಯಾಸಕ್ಕಾಗಿ ಓಡಾಡುವಾಗ ಅವರ ಜೊತೆ ಇನ್ನಿತರ ಜವಾನರು ರಕ್ಷಣಾ ನಿಟ್ಟಿನಲ್ಲಿ ಕಾಣಿಸಿದ್ದರು. ಇದಕ್ಕೆ ಕೆಲವರಿಂದ ಟೀಕೆ ವ್ಯಕ್ತವಾಗಿತ್ತು.
ವಿಂಡೀಸ್ ಪ್ರವಾಸ ಸರಣಿಗಿಲ್ಲ
38ರ ಹರೆಯದ ಧೋನಿ ಭಾರತೀಯ ಸೇನೆಯಲ್ಲಿ ಪ್ಯಾರಾಚೂಟ್ ರೆಜಿಮೆಂಟ್ನ ಟೆರಿಟೊರಿಯಲ್ ಆರ್ಮಿ ಯುನಿಟ್ನಲ್ಲಿ ಗೌರವ ಲೆಫ್ಟಿನೆಂಟ್ ಕರ್ನಲ್ ಆಗಿದ್ದಾರೆ. ಹೀಗಾಗಿ ವೆಸ್ಟ್ ಇಂಡೀಸ್ ಪ್ರವಾಸ ಸರಣಿಗಾಗಿ ಬಿಸಿಸಿಐ ತಂಡಗಳನ್ನು ಪ್ರಕಟಿಸುವ ಮುನ್ನವೇ ಧೋನಿ, ತಾನು ಪ್ರವಾಸ ಸರಣಿಗೆ ಬದಲಾಗಿ ಸೇನಾ ಸೇವೆಯಲ್ಲಿ ತೊಡಗುವ ನಿರ್ಧಾರ ಪ್ರಕಟಿಸಿದ್ದರು.
ಧೋನಿ ಸಮರ್ಥರಿದ್ದಾರೆ
'ಭಾರತೀಯ ಸೇನಾ ಸಮವಸ್ತ್ರ ಧರಿಸಬೇಕು ಅಂತ ಬಯಸುವ ಪ್ರತಿಯೊಬ್ಬನೂ ಆಯಾ ಯೂನಿಫಾರ್ಮ್ಗೆ ವಹಿಸಿಕೊಟ್ಟ ಕೆಲಸವನ್ನು ಪೂರೈಸಲು ತಯಾರಾಗಿಯೇ ಇರುತ್ತಾರೆ. ಧೋನಿ ಈಗಾಗಲೇ ಅವರ ಮೂಲ ತರಬೇತಿ ಮುಗಿಸಿದ್ದಾರೆ. ಅವರಿಗೆ ವಹಿಸಿಕೊಟ್ಟ ಕೆಲಸ ನಿರ್ವಹಿಸಲು ಅವರು ಅಮರ್ಥರಿದ್ದಾರೆ ಎಂಬುದು ನಮಗೆ ಗೊತ್ತಿದೆ,' ಎಂದು ಸೇನಾ ಮುಖ್ಯಸ್ಥರು ಹೇಳಿದ್ದಾರೆ.
ಧೋನಿಯದ್ದು ಅದ್ಭುತ ನಿಲುವು
'ಭಾರತೀಯ ಸೇನೆಗೆ ಸೇವೆ ಸಲ್ಲಿಸಲು ನಿರ್ಧರಿಸಿದ ಧೋನಿಯದ್ದು ಅದ್ಭುತ ನಿಲುವು. ಸೇನಾ ಸಮವಸ್ತ್ರ ಧರಿಸಲು ಬಯಸೋದಾದ್ರೆ ಧೋನಿ ಸೇನೆಯಲ್ಲಿ ಸಮಯ ಕಳೆಯಬೇಕು ಎಂದು ಈ ಹಿಂದೆ ನಾನು ಸಾಕಷ್ಟು ಬಾರಿ ಹೇಳಿದ್ದೆ. ಧೋನಿ ಈಗ ಸೇನೆಗೆ ಸೇವೆ ಸಲ್ಲಿಸಲು ಮುಂದಾಗಿರುವುದು ಅವರ ಬದ್ಧತೆಗೆ ಸಾಕ್ಷಿ ಹೇಳುತ್ತಿದೆ' ಎಂದು ಎಬಿಪಿ ನ್ಯೂಸ್ ಜೊತೆ ಮಾಜಿ ಕ್ರಿಕೆಟಿಗ ಗೌತಮ್ ಗಂಭೀರ್ ಹೇಳಿಕೊಂಡಿದ್ದಾರೆ.