ಪಂತ್ಗೆ ಕೀಪಿಂಗ್ ಜವಾಬ್ದಾರಿ
ಕ್ರಿಕೆಟ್ ವಲಯದಲ್ಲಿ ಧೋನಿ ಬಗ್ಗೆ ನಿರ್ಲಕ್ಷ್ಯದ ಮಾತುಗಳು ಕೇಳಿ ಬಂದ ಬೆನ್ನಲ್ಲೇ ಧೋನಿಯೂ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗುಳಿಯುವ ನಿರ್ಧಾರ ಪ್ರಕಟಿಸಿದ್ದರು. ವಿಂಡೀಸ್ ಸರಣಿಗೆ ಬದಲಾಗಿ ಭಾರತೀಯ ಆರ್ಮಿಯಲ್ಲಿ 2 ತಿಂಗಳ ಕಾಲ ಸೇವೆ ಸಲ್ಲಿಸುವುದಾಗಿ ಕೂಲ್ ಕ್ಯಾಪ್ಟನ್ ತಿಳಿಸಿದ್ದರು. ವಿಂಡೀಸ್ ಸರಣಿಯ ಏಕದಿನ ಮತ್ತು ಟಿ20 ಎರಡಕ್ಕೂ ಪಂತ್ ಅವರನ್ನು ವಿಕೆಟ್ ಕೀಪರ್ ಆಗಿ ಹೆಸರಿಸಲಾಗಿದೆ.
ಧೋನಿ ಶ್ಲಾಘಿಸಲ್ಪಡುತ್ತಿದ್ದರು
ಪಿಟಿಐ ಸಂದರ್ಶನವೊಂದರಲ್ಲಿ ಮಾತನಾಡಿದ ಎಂಎಸ್ಕೆ ಪ್ರಸಾದ್, 'ಟಾಪ್ ಆರ್ಡರ್ ಬ್ಯಾಟ್ಸ್ಮನ್ಗಳು ವಿಫಲಗೊಂಡ ಬಳಿಕವೂ ನಾವು ನ್ಯೂಜಿಲೆಂಡ್ ವಿರುದ್ಧ ಸೆಮಿಫೈನಲ್ನಲ್ಲಿ ಗೆದ್ದಿದ್ದರೆ, ಜಡೇಜಾ ಮತ್ತು ಧೋನಿಯ ಬ್ಯಾಟಿಂಗ್, ಸದಾ ನೆನಪಿನಲಲ್ಲಿ ಉಳಿಯುವ ಬ್ಯಾಟಿಂಗ್ ಆಗಿ ಶ್ಲಾಘಿಸಲ್ಪಡುತ್ತಿತ್ತು,' ಎಂದು ಎಂಎಸ್ಕೆ ಹೇಳಿದ್ದಾರೆ.
ಈಗಲೂ ಅತ್ಯುತ್ತಮ ಗ್ಲೌಸ್ಮೆನ್
'ಚುಟುಕು ಕ್ರಿಕೆಟ್ ಮಾದರಿಯಲ್ಲಿ ಎಂಎಸ್ ಧೋನಿ ಈಗಲೂ ಅತ್ಯುತ್ತಮ ಗ್ಲೌಸ್ಮೆನ್ ಎನ್ನುವುದನ್ನು ಸ್ಪಷ್ಟವಾಗಿ ಹೇಳಬಲ್ಲೆ. ಇನ್ನುಳಿದವರು ಅದರತ್ತ ಮುಂದುವರೆಯುತ್ತಿದ್ದಾರಷ್ಟೆ. ವಿಶ್ವಕಪ್ನಲ್ಲಿ ಎಂಎಸ್ ಅವರು ವಿಕೆಟ್ ಕೀಪರ್ ಮತ್ತು ಬ್ಯಾಟ್ಸ್ಮನ್ ಎರಡೂ ರೀತಿಯಲ್ಲೂ ಭಾರತ ತಂಡದ ಶಕ್ತಿಯಾಗಬಲ್ಲರು,' ಎಂದು ಪ್ರಸಾದ್ ಹೇಳಿದ್ದಾರೆ.
ನಾಯಕನಿಗೆ ನೆರವು
ಇಷ್ಟೇ ಅಲ್ಲದೆ ಮೈದಾನದಲ್ಲಿ ನಿರ್ಧಾರಗಳನ್ನು ಕೈಗೊಳ್ಳುವಾಗ ಧೋನಿ ತನ್ನ ಅನುಭವಗಳ ಮೂಲಕ ನಾಯಕನಿಗೆ ನೆರವಾಗುತ್ತಲೂ ಇದ್ದಾರೆ,' ಎಂದು ಎಂಎಸ್ಕೆ ಪ್ರಸಾದ್ ವಿವರಿಸಿದ್ದಾರೆ. ಧೋನಿ ಸದ್ಯ ವೆಸ್ಟ್ ಇಂಡೀಸ್ ಪ್ರವಾಸದಿಂದ ಹೊರಗಿದ್ದು, ಭಾರತೀಯ ಸೇನೆಯ ಪರ ಕಾಶ್ಮೀರದಲ್ಲಿ ಗಸ್ತು ತಿರುಗುವ, ಕಾವಲು ಕಾಯುವ ಜವಾಬ್ದಾರಿ ಹೊತ್ತಿದ್ದಾರೆ. ಆಗಸ್ಟ್ 15ರ ವರೆಗೂ ಧೋನಿ ಈ ಕರ್ತವ್ಯದಲ್ಲಿ ಮುಂದುವರೆಯಲಿದ್ದಾರೆ.