ಉದ್ದೇಶಪೂರ್ವಕವಾಗಿ ಹೆಸರು ಬಿಟ್ಟರೆ ರವಿಶಾಸ್ತ್ರಿ?
ಭಾರತ ತಂಡದ ಕೋಚ್ ರವಿಶಾಸ್ತ್ರಿ ಸಹ ಬಿಸಿಸಿಐ ಹಾಗೂ ಇತರ ಪ್ರಮುಖರಿಗೆ ಟ್ವಿಟ್ಟರ್ನಲ್ಲಿ ಅಭಿನಂದನೆಗಳನ್ನು ಸಲ್ಲಿಸಿದ್ದಾರೆ. ಆದರೆ ಅವರು ಬಿಸಿಸಿಐ ಅಧ್ಯಕ್ಷ ಸೌರವ್ ಗಂಗೂಲಿ ಹೆಸರನ್ನು ಕೈಬಿಟ್ಟಿದ್ದಾರೆ. ಉದ್ದೇಶ ಪೂರ್ವಕವಾಗಿ ಹೀಗೆ ಮಾಡಿದ್ದಾರೆಯೇ ಎಂಬ ಅನುಮಾನ ವ್ಯಕ್ತವಾಗಿದೆ.
ಜಯ್ ಶಾ, ಬ್ರಿಜೆಶ್ ಪಟೇಲ್ಗೆ ಅಭಿನಂದನೆ
ರವಿಶಾಸ್ತ್ರಿ ತಮ್ಮ ಟ್ವೀಟ್ನಲ್ಲಿ, ಬಿಸಿಸಿಐ ಕಾರ್ಯದರ್ಶಿ, ಜಯ್ ಶಾ, ಬಿಸಿಸಿಐನ ಮಧ್ಯಂತರ ಸಿಇಒ ಹೇಮಂಗ್ ಅಮಿನ್, ಬ್ರಿಜೆಶ್ ಪಟೇಲ್ ಮತ್ತು ಬಿಸಿಸಿಐನ ವೈದ್ಯಕೀಯ ಸಿಬ್ಬಂದಿಗೆ ಅಭಿನಂದನೆ ಹೇಳಿದ್ದಾರೆ. ಐಪಿಎಲ್ ಆಯೋಜನೆಯಲ್ಲಿ ಪ್ರಮುಖ ಪಾತ್ರವಹಿಸಿದ್ದ ಗಂಗೂಲಿ ಹೆಸರು ಕೈಬಿಟ್ಟಿದ್ದಾರೆ ರವಿಶಾಸ್ತ್ರಿ.
ಉದ್ದೇಶಪೂರ್ವಕವಾಗಿ ಹೆಸರು ಕೈಬಿಟ್ಟಿದ್ದೀರೆಂದು ಆಕ್ಷೇಪ
ರವಿಶಾಸ್ತ್ರಿ ಯ ಈ ವರ್ತನೆಗೆ ನೆಟ್ಟಿಗರು ಆಕ್ಷೇಪ ವ್ಯಕ್ತಪಡಿಸಿದ್ದಾರೆ. ಐಪಿಎಲ್ ಆಯೋಜನೆಯಲ್ಲಿ ಬಿಸಿಸಿಐ ಅಧ್ಯಕ್ಷ ಗಂಗೂಲಿ ಪಾತ್ರ ದೊಡ್ಡದಿದೆ. ಆದರೆ ನೀವು ಉದ್ದೇಶಪೂರ್ವಕವಾಗಿ ಅವರ ಹೆಸರು ಕೈಬಿಟ್ಟು, ನಿಮ್ಮ ಮೇಲಿನ ಗೌರವ ಕಡಿಮೆ ಆಗುವಂತೆ ಮಾಡಿಕೊಂಡಿದ್ದಾರೆ ಎಂದಿದ್ದಾರೆ.
ಗಂಗೂಲಿಗೆ ಶೇನ್ ವಾರ್ನ್ ಅಭಿನಂದನೆ
ವಿಶ್ವದ ಹಲವು ಕ್ರಿಕೆಟಿಗರು, ಐಪಿಎಲ್ ಅನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಗಂಗೂಲಿ ಹಾಗೂ ಬಿಸಿಸಿಐ ಅನ್ನು ಹೊಗಳಿದ್ದಾರೆ. ಶೇನ್ ವಾರ್ನ್, ವೀರೇಂದ್ರ ಸೆಹ್ವಾಗ್, ಬ್ರಿಯನ್ ಲಾರಾ ಇನ್ನೂ ಹಲವರು ಧನ್ಯವಾದ ತಿಳಿಸಿದ್ದಾರೆ.