ಪಂತ್ ಕುರಿತು ಚರ್ಚೆ
ಕ್ರಿಕೆಟ್ನಿಂದ ಮಾಜಿ ನಾಯಕ ಎಂಎಸ್ ಧೋನಿ ತಾನಾಗಿಯೇ ಅಲಭ್ಯರಾಗುತ್ತಿರುವುದರಿಂದ ಧೋನಿ ಸ್ಥಾನಕ್ಕೆ ಪಂತ್ ತರುವತ್ತ ಬಿಸಿಸಿಐ ಯೋಚಿಸಿತ್ತು. ಆದರೆ ಪಂತ್ ನಿಜಕ್ಕೂ ಧೋನಿ ಸ್ಥಾನಕ್ಕೆ ಅಂದರೆ ಮೊದಲ ಆಯ್ಕೆಯ ವಿಕೆಟ್ ಕೀಪರ್ ಕಮ್ ಬ್ಯಾಟ್ಸ್ಮನ್ಗೆ ಸೂಕ್ತವೆ ಎಂಬ ಚರ್ಚೆಗಳೀಗ ಶುರುವಾಗಿದೆ.
ಧೋನಿಗೂ ಪಂತ್ಗೂ ಹೋಲಿಕೆ
ಎಂಎಸ್ ಧೋನಿಗೂ ರಿಷಬ್ ಪಂತ್ಗೂ ಹೋಲಿಸುತ್ತಿರುವ ಬಗ್ಗೆ ಮಾತನಾಡಿದ ಯುವಿ, 'ಧೋನಿಯೂ ಒಂದೇ ದಿನದಲ್ಲಿ ಬೆಳೆದು ನಿಂತಿಲ್ಲ. ಧೋನಿ ಪ್ರಭಾವಬೀರಲು ಕೆಲ ವರ್ಷ ತೆಗೆದುಕೊಂಡಿದ್ದಾರೆ. ಪಂತ್, ಧೋನಿ ಜಾಗ ಆವರಿಸಲೂ ಕೆಲ ವರ್ಷಗಳು ಬೇಕಾಗಬಹುದು,' ಎಂದರು.
ನಡವಳಿಕೆಯನ್ನು ಅವಲಂಭಿಸಿದೆ
ಮಾತು ಮುಂದುವರೆಸಿದ ಸಿಂಗ್, 'ಪಂತ್ನಿಂದ ಆತನ ಅತ್ಯುತ್ತಮ ಆಟವನ್ನು ಹೇಗೆ ಹೊರಗೆಳೆಯಬೇಕನ್ನೋದು ಆತನ ನಡವಳಿಕೆಯನ್ನು ಅವಲಂಭಿಸಿದೆ. ಮೊದಲು ನೀವು ಆತನ ಮನಸ್ಥಿತಿಯನ್ನು ಅರ್ಥ ಮಾಡಿಕೊಂಡು ಬಳಿಕ ಮುಂದಡಿಯಿಡಬೇಕು. ನೀವಾತನನ್ನು ಕುಗ್ಗಿಸಿದರೆ ಆತನಿಂದ ಅತ್ಯುತ್ತಮ ಪ್ರದರ್ಶನ ಹೊರ ತೆಗೆಯಲು ಸಾಧ್ಯವಿಲ್ಲ,' ಎಂದು ವಿವರಿಸಿದರು.
ಬದಲಾವಣೆ ತರಬಲ್ಲದು
'ಹೌದು ಆತನಿಗೆ ಈಗಾಗಲೇ ಒಂದಿಷ್ಟು ಅವಕಾಶ ನೀಡಲಾಗಿದೆ. ಆದರೆ ಇಷ್ಟರಲ್ಲೇ ಆತನ ಬೆಸ್ಟ್ ಆಟ ಹೊರಗೆಳೆಯಬಹುದು ಎಂದು ಹೇಗೆ ಹೇಳಲು ಸಾಧ್ಯ? ತಂಡದಲ್ಲಿನ ಕೋಚ್ಗಳು, ನಾಯಕ ಸೇರಿದಂತೆ ವ್ಯಕ್ತಿಗಳ ಮಾರ್ಗದರ್ಶನ ಆತನಲ್ಲಿ ಮಹತ್ವದ ಬದಲಾವಣೆ ತರಬಲ್ಲದು,' ಎಂದು ಯುವರಾಜ್ ಸಿಂಗ್ ತಿಳಿಸಿದರು.