ಬ್ಯಾಟಿಂಗ್ ಆಯ್ದುಕೊಂಡಿದ್ದ ಬಾಂಗ್ಲಾದೇಶ
ಮೊದಲ ಟೆಸ್ಟ ಪಂದ್ಯ ಡ್ರಾನಲ್ಲಿ ಅಂತ್ಯಗೊಂಡ ಬಳಿಕ , ಎರಡನೇ ಟೆಸ್ಟ್ ಪಂದ್ಯದಲ್ಲಿ ಬಾಂಗ್ಲಾದೇಶ ಟಾಸ್ ಗೆದ್ದು ಬ್ಯಾಟಿಂಗ್ ಆಯ್ಕೆ ಮಾಡಿಕೊಂಡಿತು. ಈ ಸಂದರ್ಭದಲ್ಲಿ ಪೈಪೋಟಿ ನಡುವೆ ಮನಕಲಕುವ ಘಟನೆಯೊಂದು ನಡೆದಿದೆ. ಪಂದ್ಯದ 23ನೇ ಓವರ್ ನಲ್ಲಿ ಫೀಲ್ಡಿಂಗ್ ಮಾಡುತ್ತಿದ್ದ ಕುಸಾಲ್ ಮೆಂಡಿಸ್ ಇದ್ದಕ್ಕಿದ್ದಂತೆ ಹೃದಯಾಘಾತದಿಂದ ಕುಸಿದರು.
ದ. ಆಪ್ರಿಕಾ ವಿರುದ್ಧ ಟಿ20 ಸರಣಿ: ಭಾರತದ ಸಂಭಾವ್ಯ ಪ್ಲೇಯಿಂಗ್ 11 ತಿಳಿಸಿದ ಆಕಾಶ್ ಚೋಪ್ರಾ
ಕೂಡಲೇ ಆಸ್ಪತ್ರೆಗೆ ದಾಖಲಾದ ಮೆಂಡೀಸ್
ಹೀಗಾಗಿ, ವೈದ್ಯಕೀಯ ತಂಡ ಘಟನಾ ಸ್ಥಳಕ್ಕೆ ಧಾವಿಸಿ ಪ್ರಥಮ ಚಿಕಿತ್ಸೆ ನೀಡಿದೆ. ಆದರೆ ನೋವಿನಿಂದ ಒದ್ದಾಡುತ್ತಿದ್ದ ಅವರನ್ನು ಕೂಡಲೇ ಅಲ್ಲಿಂದ ಆಸ್ಪತ್ರೆಗೆ ಸಾಗಿಸಲಾಯಿತು. ಎದೆನೋವಿಗೆ ನಿಖರವಾದ ಕಾರಣ ಇನ್ನೂ ದೃಢಪಟ್ಟಿಲ್ಲ ಮತ್ತು ಅಜೀರ್ಣದಿಂದ ಅಡಚಣೆ ಉಂಟಾಗಿರಬಹುದು ಎಂದು ತಿಳಿದುಬಂದಿದೆ.
IPL 2023 ಸೀಸನ್ನಲ್ಲಿ ರಾಜಸ್ತಾನ್ ರಾಯಲ್ಸ್ ತಂಡ ಸೇರಲಿರುವ ಅಮೀರ್ ಖಾನ್!
ಶ್ರೀಲಂಕಾಕ್ಕೆ ಆಸರೆಯಾಗಿದ್ದ ಬ್ಯಾಟರ್
ಈ ಸರಣಿಯಲ್ಲಿ ಶ್ರೀಲಂಕಾ ತಂಡಕ್ಕೆ ಕುಸಾಲ್ ಮೆಂಡಿಸ್ ಆಸರೆಯಾಗಿದ್ದಾರೆ. ಮೊದಲ ಟೆಸ್ಟ್ನಲ್ಲಿ ಅವರ 54 ಮತ್ತು 48 ಸ್ಕೋರ್ ಸಮಬಲಕ್ಕೆ ನೆರವಾಯಿತು. ಸದ್ಯ ಸ್ಟಾರ್ ಬ್ಯಾಟರ್ ಇಲ್ಲದೆ ಶ್ರೀಲಂಕಾ ಹೇಗೆ ಎದುರಿಸಲಿದೆ ಎಂಬ ಆತಂಕ ಅಭಿಮಾನಿಗಳಲ್ಲಿದೆ.
ಕುಸಾಲ್ ಮೆಂಡೀಸ್ ಬಿಟ್ಟರೆ ಈ ಸರಣಿಯಲ್ಲಿ ಮೈದಾನ ತೊರೆಯುತ್ತಿರುವ 3ನೇ ವ್ಯಕ್ತಿ ಇವರಾಗಿದ್ದಾರೆ. ಹಿಂದಿನ ದಿನದ ಆರಂಭದಲ್ಲಿ, ಅಂಪೈರ್ ರಿಚರ್ಡ್ ಕೆಟಲ್ಫಾರ್ಫ್ ಮಂಡಿರಜ್ಜು ಗಾಯದಿಂದ ಮೊದಲ ಟೆಸ್ಟ್ನಿಂದ ಹೊರಗುಳಿದಿದ್ದರು. ತಮೀಮ್ ಇಕ್ಬಾಲ್ ಅವರು ಇದೇ ರೀತಿಯ ಸ್ನಾಯು ಸೆಳೆತದಿಂದ ನಿವೃತ್ತರಾದರು ಎಂಬುದು ಗಮನಾರ್ಹ.