ಭುವನೇಶ್ವರ್ ಕುಮಾರ್ಗೆ ವೇಗದ ಕೊರತೆ
ಟಿ20 ವಿಶ್ವಕಪ್ನಲ್ಲಿ ಭಾರತ ತಂಡದ ಹಿರಿಯ ಆಟಗಾರ ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಕಷ್ಟಪಡುತ್ತಾರೆ ಎಂದು ಪಾಕಿಸ್ತಾನದ ಮಾಜಿ ನಾಯಕ ವಾಸಿಂ ಅಕ್ರಂ ಹೇಳಿದ್ದಾರೆ. ಅವರು ಬೇರೆ ಯಾರು ಅಲ್ಲ ಅನುಭವಿ ವೇಗಿ ಭುವನೇಶ್ವರ್ ಕುಮಾರ್.
ಇದೇ ವೇಳೆಯಲ್ಲಿ ಭಾರತ ಪಾಕಿಸ್ತಾನ ತಂಡದ ಶಕ್ತಿ ಮತ್ತು ದೌರ್ಬಲ್ಯದ ಬಗ್ಗೆ ವಾಸಿಂ ಅಕ್ರಂ ಹೇಳಿದ್ದಾರೆ. ಭಾರತ ತಂಡದ ಹಿರಿಯ ಆಟಗಾರ ಭುವನೇಶ್ವರ್ ಕುಮಾರ್ ಅವರು ಹೊಸ ಚೆಂಡನ್ನು ಚೆನ್ನಾಗಿ ಬಳಸಬಲ್ಲರು, ಆದ್ರೆ ಅವರಿಗೆ ವೇಗದ ಕೊರತೆಯಿದೆ ಎಂದು ಭುವಿ ಹೇಳಿದ್ದಾರೆ.
T20 World Cup 2022: ಎರಡನೇ ಅಭ್ಯಾಸ ಪಂದ್ಯದಲ್ಲಿ ಪಶ್ಚಿಮ ಆಸ್ಟ್ರೇಲಿಯಾ ವಿರುದ್ಧ ಭಾರತಕ್ಕೆ ಸೋಲು!
ಭುವಿ ಚೆಂಡು ಸ್ವಿಂಗ್ ಆಗದಿದ್ರೆ ದುಬಾರಿಯಾಗಬಲ್ಲರು!
ಟೀಂ ಇಂಡಿಯಾದ ಅನುಭವಿ ವೇಗಿ ಭುವನೇಶ್ವರ್ ಕುಮಾರ್ ಅವರ ಚೆಂಡು ಸ್ವಿಂಗ್ ಆಗದಿದ್ದರೆ, ಅವರು ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಕಷ್ಟಪಡುವುದು ಖಚಿತ. ಅವರು ಅತ್ಯುತ್ತಮ ಬೌಲರ್ ಎಂಬುದರಲ್ಲಿ ಎರಡು ಮಾತಿಲ್ಲ. ಅವರು ಚೆಂಡನ್ನು ಎರಡೂ ಕಡೆ ಸ್ವಿಂಗ್ ಮಾಡುತ್ತಾನೆ. ಯಾರ್ಕರ್ ಕೂಡ ಚೆನ್ನಾಗಿ ಬೌಲಿಂಗ್ ಮಾಡುತ್ತಾರೆ. ಆದರೆ ನೀವು ಆಸ್ಟ್ರೇಲಿಯಾದ ಪಿಚ್ಗಳಲ್ಲಿ ಮಿಂಚಬೇಕೆಂದರೆ ವೇಗ ನಿಮಗೆ ಬಹಳ ಮುಖ್ಯ ಎಂದು ವಾಸಿಂ ಅಕ್ರಂ ಹೇಳಿದ್ದಾರೆ.
ಆಸ್ಟ್ರೇಲಿಯದ ಪಿಚ್ ಹೇಗೆ ಕೆಲಸ ಮಾಡುತ್ತದೆ ಎಂಬುದು ನನಗೆ ಚೆನ್ನಾಗಿ ತಿಳಿದಿದೆ. ಭಾರತದ ಬ್ಯಾಟಿಂಗ್ ತುಂಬಾ ಚೆನ್ನಾಗಿದೆ. ಆದ್ರೆ ಬುಮ್ರಾ ಇಲ್ಲದಿರುವುದು ದೊಡ್ಡ ಮೈನಸ್. ಬುಮ್ರಾ ಅವರ ಸ್ಥಾನದಲ್ಲಿ ಯಾರು ಆಡುತ್ತಾರೆ ಎಂಬುದು ಇನ್ನೂ ತಿಳಿದಿಲ್ಲ.
ಮಹಿಳಾ ಏಷ್ಯಾಕಪ್ 2022: ಪಾಕ್ ವಿರುದ್ಧ 1ರನ್ನಿಂದ ಗೆದ್ದು ಫೈನಲ್ ತಲುಪಿದ ಶ್ರೀಲಂಕಾ ವನಿತೆಯರು
ಪಾಕಿಸ್ತಾನ ತಂಡದ ಮಧ್ಯಮ ಕ್ರಮಾಂಕದಲ್ಲಿ ಹಿನ್ನಡೆ
ಪಾಕಿಸ್ತಾನ ತಂಡಕ್ಕೆ ಮಧ್ಯಮ ಕ್ರಮಾಂಕವು ತುಂಬಾ ಕಷ್ಟಕರವಾಗಿದೆ ಎಂದು ವಾಸಿಂ ಅಕ್ರಂ ಹೇಳಿದ್ದಾರೆ. ಪಾಕ್ ತಂಡದ ಮಿಡಲ್ ಆರ್ಡರ್ ಬ್ಯಾಟರ್ಗಳು ಉತ್ತಮವಾಗಿ ಆಡಿದರೆ ಮಾತ್ರ ಆ ತಂಡ ಇತರ ತಂಡಗಳಿಗೆ ಸಿಂಹಸ್ವಪ್ನವಾಗಲಿದೆ. ಏಕೆಂದರೆ ಪಾಕಿಸ್ತಾನದ ಬೌಲಿಂಗ್ ಅತ್ಯಂತ ಬಲಿಷ್ಠವಾಗಿದೆ. ಹಾಗೆಯೇ ಪಾಕಿಸ್ತಾನ ತಂಡದ ಓಪನರ್ ಗಳು ವಿಶ್ವದ ಅತ್ಯುತ್ತಮ ಜೋಡಿ. ಮಧ್ಯಮ ಕ್ರಮಾಂಕ ಮಾತ್ರ ಸ್ವಲ್ಪ ಮಟ್ಟಿಗೆ ಆಡಿದರೆ ಪಾಕಿಸ್ತಾನಕ್ಕೂ ವಿಶ್ವಕಪ್ ಗೆಲ್ಲುವ ಅವಕಾಶವಿದೆ ಎಂದಿದ್ದಾರೆ.