Pakistan Vs Bangladesh: ಮೂರನೇ ಅಂಪೈರ್ ಮಾಡಿದ ಎಡವಟ್ಟಿಗೆ ಬಲಿಯಾದ ಶಕೀಬ್

ನೆದರ್ಲ್ಯಾಂಡ್ಸ್ ವಿರುದ್ಧ ದಕ್ಷಿಣ ಆಫ್ರಿಕಾ ಸೋಲನುಭವಿಸಿದ ನಂತರ ಬಾಂಗ್ಲಾದೇಶ ಮತ್ತು ಪಾಕಿಸ್ತಾನ ನಡುವಿನ ಪಂದ್ಯ ಸಾಕಷ್ಟು ಮಹತ್ವ ಪಡೆದುಕೊಂಡಿದೆ. ಆದರೆ ಈ ಪಂದ್ಯದಲ್ಲಿ ಮೂರನೇ ಅಂಪೈರ್ ನೀಡಿದ ತೀರ್ಪು ಸಾಕಷ್ಟು ವಿವಾದಕ್ಕೆ ಕಾರಣವಾಗಿದೆ.
ದಕ್ಷಿಣ ಆಫ್ರಿಕಾ ಟೂರ್ನಿಯಿಂದ ಹೊರಬಿದ್ದಿದ್ದು, ಬಾಂಗ್ಲಾದೇಶ-ಪಾಕಿಸ್ತಾನ ಪಂದ್ಯದಲ್ಲಿ ಗೆಲ್ಲುವ ತಂಡ ಸೆಮಿಫೈನಲ್ಗೆ ಅರ್ಹತೆ ಪಡೆಯಲಿದೆ. ನೆದರ್ಲ್ಯಾಂಡ್ಸ್ ದಕ್ಷಿಣ ಆಫ್ರಿಕಾ ವಿರುದ್ಧ ಆಘಾತಕಾರಿ ಗೆಲುವು ಸಾಧಿಸಿತು. ಐಸಿಸಿ ಟೂರ್ನಿಯಲ್ಲಿ ದಕ್ಷಿಣ ಆಫ್ರಿಕಾ ಮತ್ತೊಮ್ಮೆ ನತದೃಷ್ಟ ಸೋಲಿನಿಂದ ಹೊರಬಿದ್ದಿದೆ. ಜಿಂಬಾಬ್ವೆ ವಿರುದ್ಧದ ಪಂದ್ಯಕ್ಕೂ ಮುನ್ನ ಟೀಂ ಇಂಡಿಯಾ ಸೆಮಿಫೈನಲ್ಗೆ ಅರ್ಹತೆ ಪಡೆದುಕೊಂಡಿದೆ.
ಅಡಿಲೇಡ್ ಓವಲ್ನಲ್ಲಿ ಬಾಂಗ್ಲಾದೇಶ ಮತ್ತು ಪಾಕಿಸ್ತಾನದ ಮುಖಾಮುಖಿ ವರ್ಚುವಲ್ ನಾಕೌಟ್ ಆಯಿತು. ಟಾಸ್ ಗೆದ್ದ ನಂತರ ಶಕೀಬ್ ಅಲ್ ಹಸನ್ ಬ್ಯಾಟಿಂಗ್ ಆಯ್ಕೆ ಮಾಡಿಕೊಂಡರು ಮತ್ತು ಆರಂಭಿಕ ಜೋಡಿಯಾದ ಲಿಟ್ಟನ್ ದಾಸ್ ಮತ್ತು ನಜ್ಮುಲ್ ಹೊಸೈನ್ ಶಾಂಟೊ ಉತ್ತಮವಾಗಿ ಪ್ರಾರಂಭಿಸಿದರು, ಆದರೆ ಶಾಹೀನ್ ಅಫ್ರಿದಿ ಲಿಟ್ಟನ್ ಅವರನ್ನು ಔಟ್ ಮಾಡುವ ಮೂಲಕ ಬಾಂಗ್ಲಾದೇಶಕ್ಕೆ ಮೊದಲ ಆಘಾತ ನೀಡಿದರು. ಶಾಂಟೊ ನಂತರ ಸೌಮ್ಯ ಸರ್ಕಾರ್ ಜೊತೆಗೂಡಿ ತಮ್ಮ ತಂಡಕ್ಕೆ ಉತ್ತಮ ವೇದಿಕೆಯನ್ನು ಒದಗಿಸಲು ಐವತ್ತು ರನ್ ಜೊತೆಯಾಟವನ್ನು ಮಾಡಿದರು.

ಒಂದೇ ಓವರ್ನಲ್ಲಿ 2 ವಿಕೆಟ್ ಪತನ
ಆದರೆ 11 ನೇ ಓವರ್ನಲ್ಲಿ ಶಾದಾಬ್ ಖಾನ್ 2 ಎಸೆತಗಳಲ್ಲಿ ಸತತ ಎರಡು ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು. ಅದುವರೆಗೂ ಉತ್ತಮವಾಗಿ ಕಾಣುತ್ತಿದ್ದ ಬಾಂಗ್ಲಾ ನಂತರ ದಿಢೀರ್ ಕುಸಿತ ಕಂಡಿತು.
ಮೊದಲು ಸೌಮ್ಯ ಸರ್ಕಾರ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸುತ್ತಿರುವಾಗ ಔಟ್ ಆದರು, ನಂತರ ಶಕೀಬ್ ಅಲ್ ಹಸನ್ ಕ್ರೀಸ್ ಬಿಟ್ಟು ಮುಂದೆ ಬಂದು ಬಾಲ್ ಹೊಡೆಯುವ ಯತ್ನದಲ್ಲಿ ಎಲ್ಬಿಡಬ್ಲ್ಯೂ ತೀರ್ಪಿಗೆ ಬಲಿಯಾದರು.
ಲೈಂಗಿಕ ದೌರ್ಜನ್ಯದ ಆರೋಪ: ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಬಂಧನ

ಮೂರನೇ ಅಂಪೈರ್ ವಿವಾದಾತ್ಮಕ ತೀರ್ಪು
ಆದರೆ, ಶಕೀಬ್ ಆನ್ಫೀಲ್ಡ್ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿ ಡಿಆರ್ಎಸ್ ಮೂಲಕ ಮೂರನೇ ಅಂಪೈರ್ ಮೊರೆಹೋದರು. ಆದರೆ, ಮೂರನೇ ಅಂಪೈರ್ ಬ್ಯಾಟ್ಗೆ ಬಾಳ್ ತಾಗಿದ್ದರು, ಅದು ನೆಲಕ್ಕೆ ಬಡಿದಿದ್ದರಿಂದ ಅಲ್ಟ್ರಾಎಡ್ಜ್ ಸ್ಪೈಕ್ ಆಗಿದೆ ಎಂದು ಅಂಪೈರ್ ತೀರ್ಪು ನೀಡಿದರು. ಬಾಲ್ ಟ್ರಾಕಿಂಗ್ ಪರಿಶೀಲಿಸಿ ಆನ್ಫೀಲ್ಡ್ ಅಂಫೈರ್ ನಿರ್ಧಾರವನ್ನು ಎತ್ತಿಹಿಡಿದರು.
ಶಕಿಬ್ ಆಘಾತಕ್ಕೊಳಗಾದರು ಮತ್ತು ಅಸಮಾಧಾನಗೊಂಡರು ಮತ್ತು ಮೈದಾನದಲ್ಲಿ ಬಹಳ ಸಮಯದವರೆಗೆ ಇದ್ದರು, ಮೈದಾನದ ಅಂಪೈರ್ಗಳೊಂದಿಗೆ ಮಾತನಾಡಲು ಪ್ರಯತ್ನಿಸಿದರು, ಆದರೆ, ಅಂಪೈರ್ ಗಳು ಪೆವಿಲಿಯನ್ಗೆ ಹಿಂತಿರುಗುವಂತೆ ಶಕೀಬ್ಗೆ ಒತ್ತಾಯಿಸಿದರು.

ಬಾಂಗ್ಲಾದೇಶ ಕಾಮೆಂಟೇಟರ್ ಅಸಮಾಧಾನ
ಬಾಂಗ್ಲಾದೇಶದ ಪ್ರಮುಖ ವೀಕ್ಷಕ ವಿವರಣೆಗಾರ, ಮಾಜಿ ಬಾಂಗ್ಲಾದೇಶದ ಆರಂಭಿಕ ಆಟಗಾರ ಅಥರ್ ಅಲಿ ಖಾನ್ ಅವರು ಈ ನಿರ್ಧಾರವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು, ಚೆಂಡು ಬ್ಯಾಟ್ಗೆ ತಾಗಿರುವುದು ಮತ್ತು ಬ್ಯಾಟ್ ನೆಲದಿಂದ ಮೇಲಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಅವರು ವಾದಿಸಿದರು.
ಬಾಂಗ್ಲಾದೇಶವು ಈ ಹಿಂದೆ ಭಾರತದ ವಿರುದ್ಧ ಅಲ್ಪ ಪ್ರಮಾಣದ ಸೋಲಿನ ಸಂದರ್ಭದಲ್ಲಿ ಆನ್-ಫೀಲ್ಡ್ ಅಂಪೈರ್ಗಳು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪ್ರಶ್ನೆ ಮಾಡಿತ್ತು. ಭಾರತದ ವಿರುದ್ಧದ ಪಂದ್ಯದ ವೇಳೆ ಮಳೆ ಕೈಕೊಟ್ಟ ತಕ್ಷಣ ಪಂದ್ಯ ಆರಂಭಿಸುವ ಅಂಪೈರ್ ನಿರ್ಧಾರವನ್ನು ಹಾಗೂ ವಿರಾಟ್ ಕೊಹ್ಲಿ ವಿರುದ್ಧದ 'ನಕಲಿ ಫೀಲ್ಡಿಂಗ್' ಪ್ರಕರಣದ ಬಗ್ಗೆ ಗಮನಹರಿಸದಿರುವ ಅವರ ನಿರ್ಧಾರವನ್ನು ಬಾಂಗ್ಲಾದೇಶದ ಆಟಗಾರರು ಪ್ರಶ್ನಿಸಿದ್ದರು.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications