ಒಂದೇ ಓವರ್ನಲ್ಲಿ 2 ವಿಕೆಟ್ ಪತನ
ಆದರೆ 11 ನೇ ಓವರ್ನಲ್ಲಿ ಶಾದಾಬ್ ಖಾನ್ 2 ಎಸೆತಗಳಲ್ಲಿ ಸತತ ಎರಡು ವಿಕೆಟ್ ಪಡೆಯುವ ಮೂಲಕ ಪಂದ್ಯದ ಗತಿಯನ್ನು ಬದಲಾಯಿಸಿದರು. ಅದುವರೆಗೂ ಉತ್ತಮವಾಗಿ ಕಾಣುತ್ತಿದ್ದ ಬಾಂಗ್ಲಾ ನಂತರ ದಿಢೀರ್ ಕುಸಿತ ಕಂಡಿತು.
ಮೊದಲು ಸೌಮ್ಯ ಸರ್ಕಾರ್ ರಿವರ್ಸ್ ಸ್ವೀಪ್ ಆಡಲು ಪ್ರಯತ್ನಿಸುತ್ತಿರುವಾಗ ಔಟ್ ಆದರು, ನಂತರ ಶಕೀಬ್ ಅಲ್ ಹಸನ್ ಕ್ರೀಸ್ ಬಿಟ್ಟು ಮುಂದೆ ಬಂದು ಬಾಲ್ ಹೊಡೆಯುವ ಯತ್ನದಲ್ಲಿ ಎಲ್ಬಿಡಬ್ಲ್ಯೂ ತೀರ್ಪಿಗೆ ಬಲಿಯಾದರು.
ಲೈಂಗಿಕ ದೌರ್ಜನ್ಯದ ಆರೋಪ: ಸಿಡ್ನಿಯಲ್ಲಿ ಶ್ರೀಲಂಕಾ ಕ್ರಿಕೆಟಿಗ ದನುಷ್ಕ ಗುಣತಿಲಕ ಬಂಧನ
ಮೂರನೇ ಅಂಪೈರ್ ವಿವಾದಾತ್ಮಕ ತೀರ್ಪು
ಆದರೆ, ಶಕೀಬ್ ಆನ್ಫೀಲ್ಡ್ ಅಂಪೈರ್ ನಿರ್ಧಾರವನ್ನು ಪ್ರಶ್ನಿಸಿ ಡಿಆರ್ಎಸ್ ಮೂಲಕ ಮೂರನೇ ಅಂಪೈರ್ ಮೊರೆಹೋದರು. ಆದರೆ, ಮೂರನೇ ಅಂಪೈರ್ ಬ್ಯಾಟ್ಗೆ ಬಾಳ್ ತಾಗಿದ್ದರು, ಅದು ನೆಲಕ್ಕೆ ಬಡಿದಿದ್ದರಿಂದ ಅಲ್ಟ್ರಾಎಡ್ಜ್ ಸ್ಪೈಕ್ ಆಗಿದೆ ಎಂದು ಅಂಪೈರ್ ತೀರ್ಪು ನೀಡಿದರು. ಬಾಲ್ ಟ್ರಾಕಿಂಗ್ ಪರಿಶೀಲಿಸಿ ಆನ್ಫೀಲ್ಡ್ ಅಂಫೈರ್ ನಿರ್ಧಾರವನ್ನು ಎತ್ತಿಹಿಡಿದರು.
ಶಕಿಬ್ ಆಘಾತಕ್ಕೊಳಗಾದರು ಮತ್ತು ಅಸಮಾಧಾನಗೊಂಡರು ಮತ್ತು ಮೈದಾನದಲ್ಲಿ ಬಹಳ ಸಮಯದವರೆಗೆ ಇದ್ದರು, ಮೈದಾನದ ಅಂಪೈರ್ಗಳೊಂದಿಗೆ ಮಾತನಾಡಲು ಪ್ರಯತ್ನಿಸಿದರು, ಆದರೆ, ಅಂಪೈರ್ ಗಳು ಪೆವಿಲಿಯನ್ಗೆ ಹಿಂತಿರುಗುವಂತೆ ಶಕೀಬ್ಗೆ ಒತ್ತಾಯಿಸಿದರು.
ಬಾಂಗ್ಲಾದೇಶ ಕಾಮೆಂಟೇಟರ್ ಅಸಮಾಧಾನ
ಬಾಂಗ್ಲಾದೇಶದ ಪ್ರಮುಖ ವೀಕ್ಷಕ ವಿವರಣೆಗಾರ, ಮಾಜಿ ಬಾಂಗ್ಲಾದೇಶದ ಆರಂಭಿಕ ಆಟಗಾರ ಅಥರ್ ಅಲಿ ಖಾನ್ ಅವರು ಈ ನಿರ್ಧಾರವನ್ನು ನಂಬಲು ಸಾಧ್ಯವಿಲ್ಲ ಎಂದು ಹೇಳಿದರು, ಚೆಂಡು ಬ್ಯಾಟ್ಗೆ ತಾಗಿರುವುದು ಮತ್ತು ಬ್ಯಾಟ್ ನೆಲದಿಂದ ಮೇಲಿರುವುದು ವಿಡಿಯೋದಲ್ಲಿ ಸ್ಪಷ್ಟವಾಗಿ ಕಂಡುಬಂದಿದೆ ಎಂದು ಅವರು ವಾದಿಸಿದರು.
ಬಾಂಗ್ಲಾದೇಶವು ಈ ಹಿಂದೆ ಭಾರತದ ವಿರುದ್ಧ ಅಲ್ಪ ಪ್ರಮಾಣದ ಸೋಲಿನ ಸಂದರ್ಭದಲ್ಲಿ ಆನ್-ಫೀಲ್ಡ್ ಅಂಪೈರ್ಗಳು ತೆಗೆದುಕೊಂಡ ನಿರ್ಧಾರಗಳ ಬಗ್ಗೆ ಪ್ರಶ್ನೆ ಮಾಡಿತ್ತು. ಭಾರತದ ವಿರುದ್ಧದ ಪಂದ್ಯದ ವೇಳೆ ಮಳೆ ಕೈಕೊಟ್ಟ ತಕ್ಷಣ ಪಂದ್ಯ ಆರಂಭಿಸುವ ಅಂಪೈರ್ ನಿರ್ಧಾರವನ್ನು ಹಾಗೂ ವಿರಾಟ್ ಕೊಹ್ಲಿ ವಿರುದ್ಧದ 'ನಕಲಿ ಫೀಲ್ಡಿಂಗ್' ಪ್ರಕರಣದ ಬಗ್ಗೆ ಗಮನಹರಿಸದಿರುವ ಅವರ ನಿರ್ಧಾರವನ್ನು ಬಾಂಗ್ಲಾದೇಶದ ಆಟಗಾರರು ಪ್ರಶ್ನಿಸಿದ್ದರು.