ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts
 

ಮಯಾಂಕ್ ಗೆ ಕೈ ಕೊಟ್ಟ ಅದೃಷ್ಟ, ಟೀಂ ಮ್ಯಾನೇಜ್ಮೆಂಟ್ ಹಳಿದ ಫ್ಯಾನ್ಸ್

Twitterati criticise Team India selection as Mayank Agarwal misses out again

ಪ್ರತಿಭೆ ಇದ್ದು, ಸಾಧನೆ ಮಾಡಿ, ಅವಕಾಶ ಪಡೆದರೂ ಅದೃಷ್ಟ ಕೈಗೂಡದಿದ್ದರೆ ಏನು ಮಾಡುವುದು ಹೇಳಿ. ಈಗ ಕರ್ನಾಟಕದ ಸ್ಟಾರ್ ಆಟಗಾರ ಮಯಾಂಕ್ ಅಗರವಾಲ್ ಕಥೆಯೂ ಹೀಗೆ ಆಗಿದೆ. ರಾಷ್ಟ್ರೀಯ ತಂಡವನ್ನು ಸೇರಿಕೊಳ್ಳುವ ಕನಸು ನನಸಾಗಿದ್ದರೂ, ಮಯಾಂಕ್ ಅವರಿಗೆ ಇನ್ನೂ ಟೆಸ್ಟ್ ಕ್ಯಾಪ್ ಧರಿಸುವ ಕಾಲ ಕೂಡಿ ಬಂದಿಲ್ಲ.

ಹೈದರಾಬಾದ್‌ನಲ್ಲಿ ಶುಕ್ರವಾರದಿಂದ ಆರಂಭವಾಗುವ ವೆಸ್ಟ್‌ ಇಂಡೀಸ್‌ ವಿರುದ್ಧದ ಎರಡನೆಯ ಟೆಸ್ಟ್‌ನಲ್ಲಿಯೂ ಅಂತಿಮ ಹನ್ನೊಂದರ ಬಳಗದಲ್ಲಿ ಮಯಾಂಕ್‌ಗೆ ಸ್ಥಾನ ನೀಡಿಲ್ಲ. ಮೊದಲ ಟೆಸ್ಟ್‌ನಲ್ಲಿ ಭರ್ಜರಿ ಗೆಲುವು ಸಾಧಿಸಿದ್ದರಿಂದ ಎರಡನೆಯ ಹಾಗೂ ಅಂತಿಮ ಟೆಸ್ಟ್‌ನಲ್ಲಿ ಬೇರೆ ಆಟಗಾರರಿಗೆ ವಿಶ್ರಾಂತಿ ನೀಡಲಾಗುತ್ತದೆ.

ವಿಂಡೀಸ್ ವಿರುದ್ಧದ ಎರಡನೆಯ ಟೆಸ್ಟ್‌ನಲ್ಲೂ ಮಯಾಂಕ್‌ಗೆ ಅವಕಾಶ ಇಲ್ಲವಿಂಡೀಸ್ ವಿರುದ್ಧದ ಎರಡನೆಯ ಟೆಸ್ಟ್‌ನಲ್ಲೂ ಮಯಾಂಕ್‌ಗೆ ಅವಕಾಶ ಇಲ್ಲ

ಮಯಾಂಕ್ ಆರಂಭಿಕ ಆಟಗಾರರಾಗಿರುವುದರಿಂದ ಅವರಿಗೆ ಆ ಸ್ಥಾನ ಖಾಲಿ ಇಲ್ಲ. ಮೊದಲ ಟೆಸ್ಟ್‌ನಲ್ಲಿ ಶತಕ ಬಾರಿಸಿದ ಪೃಥ್ವಿ ಶಾಗೆ ಅವಕಾಶ ನೀಡಲೇಬೇಕು. ಇನ್ನೊಂದು ಆರಂಭಿಕ ಸ್ಥಾನಕ್ಕೆ ರಾಹುಲ್ ತ್ಯಾಗ ಮಾಡಬೇಕಾಗುತ್ತದೆ. ಇಬ್ಬರು ಹೊಸಬರೊಂದಿಗೆ ಇನ್ನಿಂಗ್ಸ್ ಆರಂಭಿಸುವ ಸಾಹಸಕ್ಕೆ ಕೊಹ್ಲಿ ಮುಂದಾಗಿಲ್ಲ.

ಕೊಹ್ಲಿ ವಿರುದ್ಧವೂ ಕಿಡಿ

ತಂಡದ ಆಯ್ಕೆ ವಿಷಯದಲ್ಲಿ ನಾಯಕ ವಿರಾಟ್ ಕೊಹ್ಲಿ ಅವರಿಗೆ ಅಧಿಕಾರವಿಲ್ಲವೇ? ಅವರು ಏಕೆ ದೇಶಿ ಪ್ರತಿಭೆಗಳಿಗೆ ಅವಕಾಶ ನೀಡುತ್ತಿಲ್ಲ. ತಂಡಕ್ಕೆ ಮಯಾಂಕ್ ಆಯ್ಕೆ ಯಾಕೆ ಮಾಡುತ್ತಿಲ್ಲ

ಇಬ್ಬರು ನತದೃಷ್ಟರು

ಮಯಾಂಕ್ ಹಾಗೂ ಮೊಹಮ್ಮದ್ ಸಿರಾಜ್ ಗೆ ಎರಡನೇ ಟೆಸ್ಟ್ ನಲ್ಲಿ ಆಡಲು ಅವಕಾಶ ನೀಡಬೇಕಿತ್ತು. ಇಬ್ಬರ ಪ್ರತಿಭೆಗೆ ಸೂಕ್ತ ಅವಕಾಶ ಸಿಗದೇ ತಂಡದಿಂದ ಹೊರಬೀಳುವಂತಾಗದಿರಲಿ

ಮೊದಲು ಕರುಣ್ ನಂತರ ಮಯಾಂಕ್

ಕರ್ನಾಟಕದ ಕರುಣ್ ನಾಯರ್ ಹಾಗೂ ಮಯಾಂಕ್ ಅಗರವಾಲ್ ಇಬ್ಬರಿಗೂ ಅನ್ಯಾಯವಾಗಿದೆ. ಕೊಹ್ಲಿ ಅವರಿಗೆ ಆಪ್ತ ಎನ್ನುವ ಕಾರಣಕ್ಕೆ ಕೆಎಲ್ ರಾಹುಲ್ ಗೆ ಮತ್ತೆ ಮತ್ತೆ ಅವಕಾಶ ಸಿಗುತ್ತಿದೆ.

Story first published: Friday, October 12, 2018, 0:08 [IST]
Other articles published on Oct 12, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X