
ಬೆಂಗಳೂರು, ಅಕ್ಟೋಬರ್ 25: ಹುಟ್ಟಹಬ್ಬವನ್ನು ಕನ್ನಡಿಗ, ಕ್ರಿಕೆಟರ್ ಅಭಿಮನ್ಯು ಮಿಥುನ್ ಅವಿಸ್ಮರಣೀಯವಾಗಿಸಿಕೊಂಡಿದ್ದಾರೆ. ವಿಜಯ್ ಹಜಾರೆ ಟ್ರೋಫಿ 2019ರ ಫೈನಲ್ನಲ್ಲಿ ತಮಿಳುನಾಡು ವಿರುದ್ಧ ಕರ್ನಾಟಕ ಪರ ಅದ್ಭುತ ಬೌಲಿಂಗ್ ಮಾಡಿದ ಮಿಥುನ್ಗೆ ಹ್ಯಾಟ್ರಿಕ್ ವಿಕೆಟ್ಗಳು ಲಭಿಸಿವೆ.
ಬೆಂಗಳೂರಿನ ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಶುಕ್ರವಾರ (ಅಕ್ಟೋಬರ್ 25) ನಡೆದ ಫೈನಲ್ ಪಂದ್ಯದಲ್ಲಿ ಅಭಿಮನ್ಯು ಹ್ಯಾಟ್ರಿಕ್ ವಿಕೆಟ್ ಸಾಧನೆಯೊಂದಿಗೆ ಒಟ್ಟಿಗೆ 34 ರನ್ ನೀಡಿ, 5 ವಿಕೆಟ್ ಪಡೆದರು. 9.5 ಓವರ್ ಎಸೆದು ಮಿಥುನ್ ಎದುರಾಳಿಯ ರನ್ ಕದಿಯುವಿಕೆಗೆ ಕಡಿವಾಣ ಹಾಕಿದರು.
ಟಾಸ್ ಸೋತು ಬ್ಯಾಟಿಂಗ್ಗೆ ಇಳಿಸಲ್ಪಟ್ಟ ತಮಿಳುನಾಡು ತಂಡದ ವಿರುದ್ಧ ಬೌಲಿಂಗ್ ದಾಳಿ ನಡೆಸಿದ ಮಿಥುನ್, ಕ್ರಮವಾಗಿ ಮುರುಳಿ ವಿಜಯ್, ವಿಜಯ್ ಶಂಕರ್, ಶಾರುಖ್ ಖಾನ್, ಎಂ ಮೊಹಮ್ಮದ್ ಮತ್ತು ಮುರುಗನ್ ಅಶ್ವಿನ್ ವಿಕೆಟ್ಗಳನ್ನು ಮುರಿದರು. ಇದರಲ್ಲಿ ಹ್ಯಾಟ್ರಿಕ್ ವಿಕೆಟ್ ಲಭಿಸಿದ್ದು ಕೊನೇ ಓವರ್ ಅಂದರೆ 49.3, 49.4, 49.5ನೇ ಓವರ್ನಲ್ಲಿ.
ಮೊದಲು ಇನ್ನಿಂಗ್ಸ್ ಆಡಿದ ತಮಿಳುನಾಡು ತಂಡ, ಅಭಿನವ್ ಮುಕುಂದ್ 85, ಬಾಬಾ ಅಪರಾಜಿತ್ 66, ವಿಜಯ್ ಶಂಕರ್ 38, ಶಾರುಖ್ ಖಾನ್ 27 ರನ್ ನೆರವಿನೊಂದಿಗೆ 49.5 ಓವರ್ಗಳಲ್ಲಿ ಎಲ್ಲಾ ವಿಕೆಟ್ ಕಳೆದು 252 ರನ್ ಮಾಡಿದೆ. 1989ರ ಅಕ್ಟೋಬರ್ 25ರಂದು ಜನಿಸಿರುವ ಮಿಥುನ್ ಹುಟ್ಟು ಹಬ್ಬದ ದಿನವೇ ಅಪರೂಪದ ಸಾಧನೆ ಮೆರೆದಂತಾಗಿದೆ.