ಬೆಂಗಳೂರು, ಆ.7: ಒಡೆಯರ್ ಕರ್ನಾಟಕ ಪ್ರೀಮಿಯರ್ ಲೀಗ್ ಕ್ರಿಕೆಟ್ ಟೂರ್ನಿಯ ಆಟಗಾರರ ಹರಾಜು ಪ್ರಕ್ರಿಯೆ ಗುರುವಾರ ಎಂ.ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಆರಂಭಗೊಂಡಿದೆ. ಆರ್.ವಿನಯ್ ಕುಮಾರ್ (ಬೆಳಗಾವಿ ಪ್ಯಾಂಥರ್ಸ್). ಕರುಣ್ ನಾಯರ್ (ಮಂಗಳೂರು ಯುನೈಟೆಡ್) ಹಳೆ ತಂಡದಲ್ಲೇ ಉಳಿದುಕೊಂಡಿದ್ದಾರೆ.
ಕಾರ್ಬನ್ ಮೊಬೈಲ್ಸ್ ಟೈಟಲ್ ಪ್ರಯೋಜಕತ್ವ ಪಡೆದುಕೊಂಡಿದೆ. ಹಿಂದಿನ ಆವೃತ್ತಿಯಲ್ಲಿ ಎರಡನೇ ಅತಿ ಹೆಚ್ಚು ಬೆಲೆಗೆ ಬಿಕರಿಯಾಗಿದ್ದ ಸ್ಟುವರ್ಟ್ ಬಿನ್ನಿ ಇಂಗ್ಲೆಂಡ್ ವಿರುದ್ಧದ ಏಕದಿನ ಸರಣಿಗೆ ಭಾರತ ತಂಡದಲ್ಲಿ ಸ್ಥಾನ ಪಡೆದಿರುವುದರಿಂದ ಅವರನ್ನು ಹರಾಜಿನಿಂದ ಕೈ ಬಿಡಲಾಗಿದೆ. [ಸುದೀಪ್ ರಾಕ್ ಸ್ಟಾರ್ಸ್ ಎಂಟ್ರಿ]
* ಎಂಸಿ ಅಯ್ಯಪ್ಪ 1.50 ಲಕ್ಷ ರುಗೆ ಬೆಳಗಾವಿ ಪ್ಯಾಂಥರ್ಸ್ ಪಾಲು
* ಜೆ ಸುಜೀತ್ ಮೈಸೂರ್ ವಾರಿಯರ್ಸ್ ಪಾಲು(90 ಸಾವಿರ ರು)
* ಮನೀಶ್ ಪಾಂಡೆ 3.10 ಲಕ್ಷಕ್ಕೆ ಖರೀದಿಸಿದ ಮೈಸೂರ್ ವಾರಿಯರ್ಸ್
* ಕೆಎಲ್ ರಾಹುಲ್ 2 ಲಕ್ಷಕ್ಕೆ ಹುಬ್ಳಿ ಟೈಗರ್ಸ್ ಪಾಲು
* ಮಾಯಾಂಕ್ ಅಗರ್ ವಾಲ್ ಬಳ್ಳಾರಿ ಟಸ್ಕರ್ 3.80 ಲಕ್ಷ ಗೆ ಮಾರಾಟ
* ಗಣೇಶ್ ಸತೀಶ್ ಮಂಗಳೂರ್ ಯುನೈಟೆಡ್ ಗೆ 1.3 ಲಕ್ಷ ರುಗೆ
* ಕೆ ಗೌತಮ್ ಬೆಳಗಾವಿ ಪ್ಯಾಂಥರ್ಸ್ ಗೆ 1.4 ಲಕ್ಷ ರುಗೆ ಮಾರಾಟ
* ಸಾದಿಕ್ ಕಿರ್ಮಾನಿ 80 ಸಾವಿರಕ್ಕೆಮೈಸೂರ್ ವಾರಿಯರ್ಸ್ ಪಾಲು
* ಎಸ್ ಅರವಿಂದ್ ಅವರು 3 ಲಕ್ಷ ರು.ಗೆ ಹುಬ್ಳಿ ಟೈಗರ್ಸ್ ಗೆ ಮಾರಾಟ