ಗೆದ್ದ ಭಾವನೆ ಉಂಟಾಗುತ್ತಿದೆ
ಇನ್ನು ಈ ಪಂದ್ಯದಲ್ಲಿ ಸೋಲು ಅನುಭವಿಸಿದ ಬಳಿಕ ಮಾತನಾಡಿದ ವೆಸ್ಟ್ ಇಂಡೀಸ್ ತಂಡದ ನಾಯಕ ನಿಕೋಲಸ್ ಪೂರನ್, "ಈ ಪಂದ್ಯವನ್ನು ಗೆದ್ದಂತೆಯೇ ಭಾವನೆ ಮೂಡುತ್ತದೆ. ರೋಚಕವಾದ ಸೆಣೆಸಾಟ ಇದು. ಎಲ್ಲರು ಕೂಡ ಐವತ್ತು ಓವರ್ಗಳ ಕಾಲ ಸಂಪೂರ್ಣವಾಗಿ ಬ್ಯಾಟಿಂಗ್ ಮಾಡುವ ಬಗ್ಗೆ ಮಾತನಾಡುತ್ತಿದ್ದರು. ಈಗ ಎಲ್ಲರೂ ನಾವು ಸಮರ್ಥವಾಗಿ ಐವತ್ತು ಓವರ್ಗಳ ಕಾಲ ಬ್ಯಾಟಿಂಗ್ ಮಾಡಬಲ್ಲೆವು ಎಂಬುದನ್ನು ನೋಡಿದ್ದಾರೆ. ಇಲ್ಲಿಂದ ನಾವು ಮತ್ತಷ್ಟು ಶಕ್ತಿ ಹೆಚ್ಚಿಸಿಕೊಳ್ಳುತ್ತಾ ಸಾಗಯವ ವಿಶ್ವಾವಿದೆ" ಎಂದಿದ್ದಾರೆ ನಿಕೋಲಸ್ ಪೂರನ್.
ಮುಂದಿನ ಪಂದ್ಯಗಳ ಮೇಲೆ ಗಮನ
"ಈಗ ಈ ಸರಣಿಯ ಉಳಿದ ಪಂದ್ಯಗಳ ಮೇಲೆ ಗಮನಹರಿಸಬೇಕಿದೆ. ಇದು ಉತ್ತಮವಾದ ಬ್ಯಾಟಿಂಗ್ ಟ್ರ್ಯಾಕ್ ಆಗಿತ್ತು. ಅವರನ್ನು ನಿಯಂತ್ರಿಸಲು ನಮ್ಮ ಬೌಲರ್ಗಳು ಉತ್ತಮವಾಗಿ ದಾಳಿ ನಡೆಸಿದ್ದಾರೆ. ಈ ಸೋಲನ್ನು ಅರಗಿಸಿಕೊಳ್ಳುವುದು ಕಷ್ಟ. ಆದರೂ ಸೋಲನ್ನು ಒಪ್ಪಿಕೊಳ್ಳುತ್ತೇವೆ. ನಾವು ಒಬ್ಬರನ್ನೊಬ್ಬರು ಅರ್ಥ ಮಾಡಿಕೊಳ್ಳುವ ಅಗತ್ಯವಿದೆ. ಸಕಾರಾತ್ಮಕ ಸಂಗತಿಗಳ ಕಡೆಗೆ ನಮ್ಮ ಗಮನವಿರಲಿ" ಎಂದಿದ್ದಾರೆ ವೆಸ್ಟ್ ಇಂಡಿಸ್ ತಂಡದ ನಾಯಕ ನಿಕೋಲಸ್ ಪೂರನ್.
ಮಿಂಚಿದ ದಾಂಡಿಗರು
ಭಾರತದ ಪರವಾಗಿ ನಾತಕ ಶಿಖರ್ ಧವನ್ ಅದ್ಭುತ ಬ್ಯಾಟಿಂಗ್ ನಡೆಸಿ 97 ರನ್ಗಳಿಸಿ ಕೇವಲ ಮೂರು ರನ್ಗಳ ಅಂತರದಿಂದ ಶತಕವಂಚಿತವಾಗಿದ್ದಾರೆ. ಇನ್ನು ಶುಬ್ಮನ್ ಗಿಲ್ ಹಾಗೂ ಶ್ರೇಯಸ್ ಐಯ್ಯರ್ ಕೂಡ ಅರ್ಧ ಶತಕ ಸಿಡಿಸಿ ಭಾರತ ತಂಡಕ್ಕೆ ಉತ್ತಮ ಕೊಡುಗೆ ನೀಡಿದ್ದಾರೆ. ಇನ್ನು ವೆಸ್ಟ್ ಇಂಡೀಸ್ ತಂಡದ ಪರವಾಗಿ ಆರಂಭಿಕ ಆಟಗಾರ ಕೈಲ್ ಮೇಯರ್ಸ್ 75 ರನ್ಗಳಿಸಿ ಮಿಂಚಿದರೆ ಬ್ರಾಂಡನ್ ಕಿಂಗ್ 54 ಹಾಗೂ ಬ್ರೂಕ್ಸ್ 46 ರನ್ಗಳ ಕೊಡುಗೆ ನೀಡಿದರು. ಅಂತಿಮ ಹಂತದಲ್ಲಿ ಅಕೀಲ್ ಹುಸೇನ್ ಹಾಗೂ ರೊಮಾರಿಓ ಶೆಫರ್ಡ್ ದೊಟ್ಟ ಹೋರಾಟ ಗಮನ ಸೆಳೆದಿದೆ.
ಆಡುವ ಬಳಗ
ವೆಸ್ಟ್ ಇಂಡೀಸ್: ಶಾಯ್ ಹೋಪ್ (ವಿಕೆಟ್ ಕೀಪರ್), ಬ್ರಾಂಡನ್ ಕಿಂಗ್, ಶಮರ್ ಬ್ರೂಕ್ಸ್, ಕೈಲ್ ಮೇಯರ್ಸ್, ನಿಕೋಲಸ್ ಪೂರನ್ (ನಾಯಕ), ರೋಮನ್ ಪೊವೆಲ್, ಅಕೆಲ್ ಹೊಸೈನ್, ರೊಮಾರಿಯೋ ಶೆಫರ್ಡ್, ಅಲ್ಜಾರಿ ಜೋಸೆಫ್, ಗುಡಕೇಶ್ ಮೋಟಿ, ಜೇಡನ್ ಸೀಲ್ಸ್
ಬೆಂಚ್: ಕೀಸಿ ಕಾರ್ಟಿ, ಕೀಮೋ ಪಾಲ್
ಭಾರತ: ಶಿಖರ್ ಧವನ್ (ನಾಯಕ), ಶುಬ್ಮನ್ ಗಿಲ್, ಶ್ರೇಯಸ್ ಅಯ್ಯರ್, ಸೂರ್ಯಕುಮಾರ್ ಯಾದವ್, ಸಂಜು ಸ್ಯಾಮ್ಸನ್ (ವಿಕೆಟ್ ಕೀಪರ್), ದೀಪಕ್ ಹೂಡಾ, ಅಕ್ಸರ್ ಪಟೇಲ್, ಶಾರ್ದೂಲ್ ಠಾಕೂರ್, ಮೊಹಮ್ಮದ್ ಸಿರಾಜ್, ಯುಜ್ವೇಂದ್ರ ಚಹಾಲ್, ಪ್ರಸಿದ್ಧ್ ಕೃಷ್ಣ,
ಬೆಂಚ್: ಋತುರಾಜ್ ಗಾಯಕ್ವಾಡ್, ಇಶಾನ್ ಕಿಶನ್, ಆವೇಶ್ ಖಾನ್, ಅರ್ಷದೀಪ್ ಸಿಂಗ್