
ಸುನಿಲ್ ಗವಾಸ್ಕರ್, ಮನೋಜ್ ಪ್ರಭಾಕರ್ ಇದ್ದರು
ಆದರೆ ವಿಶ್ವಕಪ್ ಹೀರೋಗಳಾದ ಸುನಿಲ್ ಗವಾಸ್ಕರ್, ಮನೋಜ್ ಪ್ರಭಾಕರ್, ಚೇತನ್ ಶರ್ಮಾ, ಸುರೀಂದ್ರ ಖನ್ನಾ ತಂಡದಲ್ಲಿದ್ದು. ಮೊದಲ ಏಷ್ಯಾ ಕಪ್ ಕೇವಲ ಮೂರು ಪಂದ್ಯಗಳದ್ದಾಗಿತ್ತು. ರೌಂಡ್ ರಾಬಿನ್ ಮಾದರಿಯಲ್ಲಿ ನಡೆದ ಟೂರ್ನಿಯಲ್ಲಿ ಭಾರತ ವಿಜಯ ಸಾಧಿಸಿ ಮೊದಲ ಏಷ್ಯಾ ಕಪ್ ಅನ್ನು ಮುಡಿಗೇರಿಸಿಕೊಂಡಿತು. ಸುನಿಲ್ ಗವಾಸ್ಕರ್ ನಾಯಕರಾಗಿದ್ದರು.

ಶ್ರೀಲಂಕಾವನ್ನು 94 ಕ್ಕೆ ಆಲ್ಔಟ್
ಆಗ ತಾನೆ ಕ್ರಿಕೆಟ್ ಜಗತ್ತಿಗೆ ಕಾಲಿಟ್ಟಿದ್ದ ಶ್ರೀಲಂಕಾ ತಂಡವನ್ನು ಮೊದಲ ಪಂದ್ಯದಲ್ಲಿ ಬಹಳ ಸುಲಭವಾಗಿ ಭಾರತ ಸೋಲಿಸಿತು. ಭಾರತದ ಬೌಲರ್ಗಳು ಶ್ರೀಲಂಕಾವನ್ನು ಕೇವಲ 94 ರನ್ಗಳಿಗೆ ಆಲ್ಔಟ್ ಮಾಡಿದರು. ಚೇತನ್ ಶರ್ಮಾ, ಮನೋಜ್ ಪ್ರಭಾಕರ್ ತಲಾ ಮೂರು ವಿಕೆಟ್ ಗಳಿಸಿ ಮಿಂಚಿದರು.

ಪಾಕಿಸ್ತಾನವನ್ನೂ ಬಗ್ಗುಬಡಿದಿದ್ದ ಭಾರತ
ನಂತರದ ಪಂದ್ಯದಲ್ಲಿ ಆಗಲೂ ಸಾಂಪ್ರದಾಯಿಕ ಎದುರಾಳಿ ಎನಿಸಿಕೊಂಡಿದ್ದ ಪಾಕಿಸ್ತಾನವನ್ನು ಎದುರಿಸಿದ ಭಾರತ ತಂಡ ಅಲ್ಲಿಯೂ ಸಹ ಸುಲಭ ಗೆಲುವನ್ನೇ ಸಾಧಿಸಿತು. ಟೂರ್ನಿಯಲ್ಲಿ ಎರಡು ಗೆಲುವು ಸಾಧಿಸಿದ ಭಾರತ ಪ್ರಶಸ್ತಿ ವಿಜೇತ ಎನಿಸಿಕೊಂಡರೆ ಪಾಕಿಸ್ತಾನ ಒಂದು ಪಂದ್ಯ ಮಾತ್ರ ಗೆದ್ದಿತು. ಶ್ರೀಲಂಕಾ ಎರಡೂ ಪಂದ್ಯವನ್ನು ಸೋತಿತು.

ಈ ಬಾರಿ ದುಬೈನಲ್ಲಿ ಟೂರ್ನಿ
ಈ ಬಾರಿ ಏಷ್ಯಾ ಕಪ್ ಟೂರ್ನಿಯು ದುಬೈನಲ್ಲಿ ನಡೆಯಲಿದೆ. ಸೆಪ್ಟೆಂಬರ್ 15ಕ್ಕೆ ಮೊದಲ ಪಂದ್ಯವು ಬಾಂಗ್ಲಾದೇಶ ಮತ್ತು ಶ್ರೀಲಂಕಾ ವಿರುದ್ಧ ನಡೆಯಲಿದೆ. ಈ ಬಾರಿ ಹಾಂಕಾಂಗ್ ಮತ್ತು ಅಫ್ಘಾನಿಸ್ತಾನ ತಂಡಗಳು ಟೂರ್ನಿಯಲ್ಲಿ ಭಾಗವಹಿಸಲಿವೆ. ಭಾರತ ತಂಡವನ್ನು ರೋಹಿತ್ ಶರ್ಮಾ ಮುನ್ನಡೆಸಲಿದ್ದಾರೆ. ಭಾರತ ಮತ್ತು ಪಾಕಿಸ್ತಾನ ನಡುವೆ ಸೆಪ್ಟೆಂಬರ್ 19ರಂದು ಪಂದ್ಯ ನಡೆಯಲಿದೆ.


Click it and Unblock the Notifications












