IPL 2022: ಈ 5 ಪ್ಲೇಯರ್ಸ್ ಮುಂದಿನ ಸೀಸನ್ನಲ್ಲಿ ತಂಡ ಬದಲಾಯಿಸೋದು ಗ್ಯಾರೆಂಟಿ , ಕಾರಣ ತಿಳಿಯಿರಿ

ಇಂಡಿಯನ್ ಪ್ರೀಮಿಯರ್ ಲೀಗ್ 15ನೇ ಸೀಸನ್ ಅಂತಿಮ ಘಟ್ಟದತ್ತ ತಲುಪಿದ್ದು, ಚಾಂಪಿಯನ್ ಯಾರು ಎಂದು ಬಹಿರಂಗವಾಗಲು ಕೇವಲ ಎರಡು ಪಂದ್ಯಗಳಷ್ಟೇ ಬಾಕಿ ಉಳಿದಿವೆ.
ಮೇ 29ರಂದು ನಡೆಯಲಿರುವ ಫೈನಲ್ ಪಂದ್ಯಕ್ಕೆ ಗುಜರಾತ್ ಟೈಟನ್ಸ್ ಈಗಾಗಲೇ ಟಿಕೆಟ್ ಪಡೆದಿದೆ. ಹೀಗಾಗಿ ಫೈನಲ್ ಆಡಲಿರುವ ಮತ್ತೊಂದು ತಂಡ ಯಾವುದು ಎಂಬುದು ಇಂದಿನ (ಮೇ. 27) ರಾಜಸ್ತಾನ್ ರಾಯಲ್ಸ್ ಮತ್ತು ಆರ್ಸಿಬಿ ನಡುವಿನ ದ್ವಿತೀಯ ಕ್ವಾಲಿಫೈಯರ್ನಲ್ಲಿ ನಿರ್ಧಾರವಾಗಲಿದೆ.
ಈ ಬಾರಿ ಸೀಸನ್ನಲ್ಲಿ ಐದು ಬಾರಿಯ ಚಾಂಪಿಯನ್ ಮುಂಬೈ ಮತ್ತು ನಾಲ್ಕು ಬಾರಿ ಚಾಂಪಿಯನ್ ಸಿಎಸ್ಕೆ ನಿರಾಸೆ ಮೂಡಿಸಿದವು. ಜೊತೆಗೆ ಬ್ಯಾಟಿಂಗ್ ನಲ್ಲೂ ಹಲವು ಪ್ರಮುಖ ಆಟಗಾರರು ರನ್ ಗಳಿಸಲು ಎಡವಿದ್ದಾರೆ. ಈ ಋತುವಿನಲ್ಲಿ ರೋಹಿತ್ ಶರ್ಮಾ, ವಿರಾಟ್ ಕೊಹ್ಲಿ, ಎಂಎಸ್ ಧೋನಿ ಮತ್ತು ರಿಷಬ್ ಪಂತ್ ನಿರೀಕ್ಷೆಗೆ ತಕ್ಕಂತೆ ಆಡಲಿಲ್ಲ.
ಇದರ ಜೊತೆಗೆ ಹಲವು ಪ್ರತಿಭಾವಂತ ಆಟಗಾರರು ಅವಕಾಶ ಸಿಗದೆ ಹೆಚ್ಚು ಬೆಂಚ್ ಮೇಲೆ ಕುಳಿತುಕೊಳ್ಳಬೇಕಾಯಿತು. ಕೆಲವರಿಗಂತೂ ಒಂದೂ ಪಂದ್ಯದಲ್ಲಿ ಅವಕಾಶ ಸಿಗಲಿಲ್ಲ. ಕಳೆದ ಸೀಸನ್ ಸೇರಿದಂತೆ ಹಲವು ಅತ್ಯುತ್ತಮ ಪ್ರದರ್ಶನ ನೀಡಿದವರನ್ನು ಕೂಡ ಈ ಬಾರಿ ಪರಿಗಣಿಸಲಾಗಿಲ್ಲ.
ಹೀಗಾಗಿ ಪ್ರಸ್ತುತ ಕೆಲವು ತಂಡಗಳ ಅನೇಕ ಆಟಗಾರರು ಅಸಮಾಧಾನಗೊಂಡಿದ್ದು, ಮುಂದಿನ ಸೀಸನ್ನಲ್ಲಿ ತಂಡದ ಬದಲಾವಣೆ ಎದುರು ನೋಡುತ್ತಿದ್ದಾರೆ. ಹಾಗಿದ್ದಾರೆ ಈ ಸೀಸನ್ನಲ್ಲಿ ಕಡಿಮೆ ಅವಕಾಶದಿಂದಾಗಿ ತಂಡ ಬದಲಿಸಲು ಮುಂದಾಗಲಿರುವ ಐದು ಆಟಗಾರರನ್ನು ಈ ಕೆಳಗೆ ಕಾಣಬಹುದು.

ಕೆ.ಎಸ್. ಭರತ್
ಮುಂದಿನ ಋತುವಿನಲ್ಲಿ ತಂಡವನ್ನು ಬದಲಾಯಿಸಲು ಬಯಸುವ ಆಟಗಾರರಲ್ಲಿ ಡೆಲ್ಲಿ ಕ್ಯಾಪಿಟಲ್ಸ್ನ ಕೆ.ಎಸ್ ಭರತ್ ಒಬ್ಬರು. ಏಕೆಂದರೆ ವಿಕೆಟ್ ಕೀಪರ್ ಬ್ಯಾಟ್ಸ್ಮನ್ಗೆ ದೆಹಲಿಯಲ್ಲಿ ಹೆಚ್ಚಿನ ಅವಕಾಶ ಸಿಗಲಿಲ್ಲ. ಇನ್ನು ಮುಂದೆ ಸಿಗುವ ಸಾಧ್ಯತೆಯೂ ಕಡಿಮೆ. ಭರತ್ ಒಬ್ಬ ವಿಕೆಟ್ ಕೀಪರ್-ಬ್ಯಾಟ್ಸ್ಮನ್. ಆದರೆ ನಾಯಕ ರಿಷಭ್ ವಿಕೆಟ್ ಕೀಪರ್ ಆಗಿರುವುದರಿಂದ ಭರತ್ ಗೆ ಈ ಸ್ಥಾನದಲ್ಲಿ ಅವಕಾಶ ಸಿಗುವ ಸಾಧ್ಯತೆ ಕಡಿಮೆ.
ಕೆ.ಎಸ್ ಭರತ್ ಆರಂಭಿಕರಾಗಿ ಆಡುವ ಆಟಗಾರರಲ್ಲ. ಹೀಗಾಗಿ ಮಧ್ಯಮ ಕ್ರಮಾಂಕದಲ್ಲಿ ಭರತ್ ಅವರನ್ನು ಡೆಲ್ಲಿ ಪರಿಗಣಿಸುವ ಸಾಧ್ಯತೆ ಕಡಿಮೆ ಇದೆ. ಭರತ್ 2021 ರಲ್ಲಿ ಆರ್ಸಿಬಿಗೆ ಮ್ಯಾಚ್ ವಿನ್ನಿಂಗ್ ಇನ್ನಿಂಗ್ಸ್ ಆಡುವ ಮೂಲಕ ತಮ್ಮ ಪ್ರತಿಭೆಯನ್ನು ತೋರಿದ ಆಟಗಾರ. ಹೀಗಾಗಿ ಮುಂದಿನ ಋತುವಿನಲ್ಲಿ ಸನ್ ರೈಸರ್ಸ್ ಹೈದರಾಬಾದ್ ಮತ್ತು ರಾಜಸ್ಥಾನ್ ರಾಯಲ್ಸ್ ತಂಡಗಳಿಗೆ ಪರಿಗಣಿಸಬಹುದಾದ ಆಟಗಾರ.

ಕಾರ್ತಿಕ್ ತ್ಯಾಗಿ
ಸನ್ ರೈಸರ್ಸ್ ಹೈದರಾಬಾದ್ ತಂಡದ ಯುವ ವೇಗಿ ಕಾರ್ತಿಕ್ ತ್ಯಾಗಿ ಕೂಡ ಮುಂದಿನ ಋತುವಿನಲ್ಲಿ ಬದಲಾವಣೆ ಬಯಸಬಹುದು. ಹೈದರಾಬಾದ್ ಅನೇಕ ಶ್ರೇಷ್ಠ ವೇಗಿಗಳನ್ನು ಹೊಂದಿರುವ ತಂಡವಾಗಿದೆ. ಭುವನೇಶ್ವರ್ ಕುಮಾರ್, ಉಮ್ರಾನ್ ಮಲಿಕ್, ಟಿ ನಟರಾಜನ್ ಮತ್ತು ಮಾರ್ಕೊ ಜಾನ್ಸನ್ ಅವರನ್ನೊಳಗೊಂಡ ತಂಡದಲ್ಲಿ ತ್ಯಾಗಿ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವುದು ಕಷ್ಟ.
2021ರ ಋತುವಿನಲ್ಲಿ ಅತ್ಯುತ್ತಮ ಪ್ರದರ್ಶನ ನೀಡಿದ ಆಟಗಾರ ಈ ಬಾರಿ ಬೆಂಚ್ನಲ್ಲಿದ್ದರು. ಈ ಋತುವಿನಲ್ಲಿ ಅವರು ಎರಡು ಪಂದ್ಯಗಳಲ್ಲಿ ಒಂದು ವಿಕೆಟ್ ಪಡೆದಿದ್ದಾರೆ. ಎಕಾನಮಿಯು 9.87 ಆಗಿತ್ತು. ಭಾರತ ತಂಡದಲ್ಲಿ ಬೆಳೆಯಲು ಸಮರ್ಥ ಆಟಗಾರ ಎಂಬ ಮೌಲ್ಯಮಾಪನವನ್ನು ಹೊಂದಿರುವ ಇವರಿಗೆ ತಕ್ಕಂತೆ ಅವಕಾಶ ಈಗ ಸಿಗುತ್ತಿಲ್ಲ. ಈ ಪರಿಸ್ಥಿತಿಯಲ್ಲಿ ತ್ಯಾಗಿ ಹೆಚ್ಚು ಅವಕಾಶ ಪಡೆಯುವ ತಂಡವನ್ನು ಸೇರಿಕೊಳ್ಳಬೇಕಿದೆ. ಮುಂಬೈ ಇಂಡಿಯನ್ಸ್, ಪಂಜಾಬ್ ಕಿಂಗ್ಸ್ ಮತ್ತು ಕೋಲ್ಕತ್ತಾ ನೈಟ್ ರೈಡರ್ಸ್ ತಂಡಗಳಲ್ಲಿ ಯಾವುದಾದರೂ ಒಂದು ಸೇರಲು ತ್ಯಾಗಿಗೆ ಅವಕಾಶ ಸಿಗಬಹುದು.

ಚೇತನ್ ಸಕಾರಿಯಾ
ಕಳೆದ ಋತುವಿನಲ್ಲಿ ರಾಜಸ್ಥಾನ್ ರಾಯಲ್ಸ್ ಜೊತೆಗಿನ ಅದ್ಭುತ ಪ್ರದರ್ಶನಕ್ಕಾಗಿ ಚೇತನ್ ಸಕಾರಿಯಾ ಭಾರತೀಯ ತಂಡದಲ್ಲಿ ಸ್ಥಾನ ಪಡೆದಿದ್ದಾರೆ. ಆದರೆ ಈ ಬಾರಿ ಅವರು ಡೆಲ್ಲಿ ಕ್ಯಾಪಿಟಲ್ಸ್ಗೆ ಬಂದಾಗ ಹೆಚ್ಚಾಗಿ ಬೆಂಚ್ನಲ್ಲಿದ್ದರು. ಶಾರ್ದೂಲ್ ಠಾಕೂರ್, ನೊರ್ಕಿಯಾ, ಮುಸ್ತಾಫಿಜುರ್ ರೆಹಮಾನ್ ಮತ್ತು ಖಲೀಲ್ ಅಹ್ಮದ್ ಒಳಗೊಂಡಿರುವ ದೆಹಲಿಯ ವೇಗಿಗಳ ಸಾಲಿನಲ್ಲಿ ಚೇತನ್ ಜಕಾರಿಯಾ ದೊಡ್ಡ ಅವಕಾಶವನ್ನು ನಿರೀಕ್ಷಿಸಲು ಸಾಧ್ಯವಾಗಲಿಲ್ಲ.
ಆದ್ದರಿಂದ, ಈ ಆಟಗಾರನು ಮುಂದಿನ ಋತುವಿನಲ್ಲಿ ಬದಲಾವಣೆಯನ್ನು ನಿರೀಕ್ಷಿಸುತ್ತಾನೆ. ಈ ಸೀಸನ್ನಲ್ಲಿ ಅವರಿಗೆ ಒಟ್ಟು ಮೂರು ಅವಕಾಶಗಳು ಲಭಿಸಿದ್ದವು. ಎಡಗೈ ವೇಗಿ 7.63 ಎಕಾನಮಿಯಲ್ಲಿ ಮೂರು ವಿಕೆಟ್ ಪಡೆದರು. ಆದರೆ ಈ ಬಾರಿ ಅವರಿಗೆ ಸಿಗಬೇಕಾದ ಅವಕಾಶ ಸಿಕ್ಕಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ, ಮುಂದಿನ ಋತುವಿನಲ್ಲಿ ಕೋಲ್ಕತ್ತಾ ನೈಟ್ ರೈಡರ್ಸ್ಗೆ ಉತ್ತಮ ವೇಗದ ಬೌಲರ್ಗಳ ಅಗತ್ಯವಿದೆ. ಹೀಗಾಗಿ ಚೇತನ್ ಅವರನ್ನು ಕೆಕೆಆರ್ ತಂಡಕ್ಕೆ ಪರಿಗಣಿಸಬಹುದು.

ನವದೀಪ್ ಸೈನಿ
ನವದೀಪ್ ಸೈನಿ ಭಾರತ ತಂಡದ ವೇಗದ ಬೌಲರ್ಗಳಲ್ಲಿ ಒಬ್ಬರು. ಆರ್ಸಿಬಿಯಲ್ಲಿ ಉತ್ತಮ ಪ್ರದರ್ಶನ ನೀಡಿರುವ ಸೈನಿ ಈ ಬಾರಿ ರಾಜಸ್ಥಾನ್ ರಾಯಲ್ಸ್ ತಂಡದಲ್ಲಿದ್ದಾರೆ. ಟ್ರೆಂಟ್ ಬೋಲ್ಟ್, ಪ್ರಸಿದ್ಧ್ ಕೃಷ್ಣ ಮತ್ತು ಒಬೆದ್ ಮೆಕಾಯ್ ರಸ್ತಾನ್ ವೇಗಕ್ಕೆ ಅನುಗುಣವಾಗಿ ಸೈನಿ ಬೆಂಚ್ ಮೇಲೆ ಹೆಚ್ಚು ಸಮಯ ಕಳೆಯಬೇಕಾಯಿತು. ಅವರು ಎರಡು ಪಂದ್ಯಗಳಲ್ಲಿ ಮೂರು ವಿಕೆಟ್ ಪಡೆದರು ಆದರೆ ಅವರ ಎಕಾನಮಿಯು 12 ಆಗಿತ್ತು. ಆದರೆ ಹೆಚ್ಚಿನ ಅವಕಾಶಗಳಿದ್ದರೆ, ಸೈನಿ ಉತ್ತಮ ಸಾಧನೆ ಮಾಡಬಹುದು. ಕೆಕೆಆರ್, ಪಂಜಾಬ್ ಕಿಂಗ್ಸ್ ಮತ್ತು ಮುಂಬೈ ಇಂಡಿಯನ್ಸ್ಗೆ ಉತ್ತಮ ವೇಗಿಗಳ ಅಗತ್ಯವಿದೆ ಮತ್ತು ಸೈನಿ ಮುಂದಿನ ಸೀಸನ್ನಲ್ಲಿ ಈ ತಂಡಗಳಿಗೆ ಬದಲಾಯಿಸಬಹುದು.

ಶ್ರೇಯಸ್ ಗೋಪಾಲ್
ಶ್ರೇಯಸ್ ಗೋಪಾಲ್ ಐಪಿಎಲ್ನ ಅತ್ಯಂತ ಸಕ್ರಿಯ ಸ್ಪಿನ್ನರ್ಗಳಲ್ಲಿ ಒಬ್ಬರು. ರಾಜಸ್ಥಾನ್ ರಾಯಲ್ಸ್ ಜೊತೆ ಅಮೋಘ ಪ್ರದರ್ಶನ ನೀಡಿದ್ದ ಶ್ರೇಯಸ್ ಗೋಪಾಲ್ ಈ ಬಾರಿ ಸನ್ ರೈಸರ್ಸ್ ಹೈದರಾಬಾದ್ ತಂಡದಲ್ಲಿದ್ದರು. ಹೈದರಾಬಾದ್ ಟೀಂ ವಾಷಿಂಗ್ಟನ್ ಸುಂದರ್ ಗೆ ಹೆಚ್ಚಿನ ಪ್ರಾಮುಖ್ಯತೆ ನೀಡಿದ್ದರಿಂದ ಶ್ರೇಯಸ್ ಗೋಪಾಲ್ ಬೆಂಚ್ ಮೇಲಿದ್ದರು. ಒಂದು ಪಂದ್ಯದಲ್ಲಿ ಅವರಿಗೆ ಒಂದೇ ಒಂದು ಅವಕಾಶ ಸಿಕ್ಕಿತು. ಅವರು 34 ರನ್ಗಳಿಗೆ ಒಂದು ವಿಕೆಟ್ ಪಡೆದರು. ಅನುಭವಿ ಲೆಗ್ ಸ್ಪಿನ್ನರ್ ಗೆ ಈ ಬಾರಿ ಅವಕಾಶ ಸಿಗಲಿಲ್ಲ. ಹೀಗಾಗಿ ಮುಂದಿನ ಋತುವಿನಲ್ಲಿ ಶ್ರೇಯಸ್ ಹೊಸ ತಂಡಕ್ಕೆ ತೆರಳುವ ಸಾಧ್ಯತೆ ಇದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications