ಸೈಯದ್ ಮುಷ್ತಾಕ್ ಅಲಿ ಟ್ರೋಫಿ 2022: ಮುಂಬೈ, ಪಂಜಾಬ್ ಸೇರಿ 4 ತಂಡಗಳು ಸೆಮಿಸ್ಗೆ ಎಂಟ್ರಿ

2022ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯ ಕ್ವಾರ್ಟರ್ ಫೈನಲ್ನಲ್ಲಿ ಪಂಜಾಬ್ ಹತ್ತು ರನ್ಗಳಿಂದ ಕರ್ನಾಟಕವನ್ನು ಸೋಲಿಸುವ ಮೂಲಕ ಸೆಮಿಫೈನಲ್ ತಲುಪಿದರು ಮತ್ತು ಶುಭ್ಮನ್ ಗಿಲ್ ಅವರು ತಮ್ಮ ಚೊಚ್ಚಲ ಟಿ20 ಶತಕವನ್ನು ಸಿಡಿಸುವ ಮೂಲಕ ನ್ಯೂಜಿಲೆಂಡ್ ಪ್ರವಾಸಕ್ಕಾಗಿ ಟಿ20 ಸರಣಿಗೆ ಆಯ್ಕೆಯಾಗಿ ಸಂಭ್ರಮಪಟ್ಟರು.
ಪಂಜಾಬ್ ಜೊತೆಗೆ ಮುಂಬೈ, ವಿದರ್ಭ ಮತ್ತು ಹಿಮಾಚಲ ಪ್ರದೇಶ ಕೂಡ ಸೈಯದ್ ಮುಷ್ತಾಕ್ ಅಲಿ ಟ್ರೋಫಿ ಟೂರ್ನಿಯ ಸೆಮಿಫೈನಲ್ಗೆ ಅರ್ಹತೆ ಪಡೆದಿವೆ.
ಪಂಜಾಬ್ ಆರಂಭಿಕ ಬ್ಯಾಟರ್ ಶುಭ್ಮನ್ ಗಿಲ್ ಅಂತಿಮ ಓವರ್ನ ಕೊನೆಯ ಎಸೆತದವರೆಗೆ ಬ್ಯಾಟ್ ಮಾಡಿದರು ಮತ್ತು ವೃತ್ತಿಜೀವನದ ಅತ್ಯುತ್ತಮ 126 ರನ್ಗಳೊಂದಿಗೆ ಅಗ್ರ ರನ್ ಗಳಿಸಿದರು. ಪಂಜಾಬ್ ತಮ್ಮ ಇನಿಂಗ್ಸ್ನ ಕೊನೆಯಲ್ಲಿ 4 ವಿಕೆಟ್ಗೆ 226 ರನ್ ಕಲೆ ಹಾಕಿತು.
ಪ್ರತ್ಯುತ್ತರವಾಗಿ, ಬ್ಯಾಟಿಂಗ್ ಮಾಡಿದ ಎರಡು ಬಾರಿಯ ಚಾಂಪಿಯನ್ ಮತ್ತು ಕಳೆದ ಋತುವಿನ ರನ್ನರ್-ಅಪ್ ಕರ್ನಾಟಕ ತಂಡವು ಸ್ಕೋರ್ ಬೋರ್ಡ್ನಲ್ಲಿ 20 ಓವರ್ಗಳಲ್ಲಿ 6 ವಿಕೆಟ್ ನಷ್ಟಕ್ಕೆ 216 ರನ್ ಗಳಿಸಿ ಹೋರಾಟ ನೀಡಿ ಕೊನೆಗೆ 10 ರನ್ಗಳಿಂದ ಸೋಲನ್ನಪ್ಪಿತು. ಈ ಗೆಲುವಿನ ನಂತರ ಪಂಜಾಬ್ ಗುರುವಾರ ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಮೊದಲ ಸೆಮಿಫೈನಲ್ ಪಂದ್ಯದಲ್ಲಿ ಹಿಮಾಚಲ ಪ್ರದೇಶ ತಂಡವನ್ನು ಎದುರಿಸಲಿದೆ.

ಯಶ್ ಠಾಕೂರ್ ವಿದರ್ಭ ತಂಡದ ಗೆಲುವಿಗೆ ಪ್ರಮುಖ ಪಾತ್ರ
ಇದೇ ವೇಳೆ, ಸಾಲ್ಟ್ ಲೇಕ್ನಲ್ಲಿರುವ ಜಾದವ್ಪುರ ವಿಶ್ವವಿದ್ಯಾನಿಲಯದ ಎರಡನೇ ಕ್ಯಾಂಪಸ್ ಮೈದಾನದಲ್ಲಿ ನಡೆದ ಎರಡನೇ ಕ್ವಾರ್ಟರ್ಫೈನಲ್ನಲ್ಲಿ ದೆಹಲಿ ತಂಡ 158 ರನ್ಗಳ ರೋಚಕ ಚೇಸಿಂಗ್ನಲ್ಲಿ ಕೇವಲ ಒಂದು ರನ್ನಿಂದ ವಿದರ್ಭ ತಂಡದಿಂದ ಸೋಲನುಭವಿಸಿತು.
ಯಶ್ ಠಾಕೂರ್ ಅವರು ವಿದರ್ಭ ತಂಡದ ಗೆಲುವಿಗೆ ಪ್ರಮುಖ ಪಾತ್ರ ವಹಿಸಿದರು. ಯಶ್ ಠಾಕೂರ್ ಅವರು ಅಂತಿಮ ಓವರ್ ಬೌಲ್ ಮಾಡಿ ಲಲಿತ್ ಯಾದವ್ ಮತ್ತು ಲಕ್ಷಯ್ ಥರೇಜಾ ಅವರನ್ನು ಮೂರು ಎಸೆತಗಳಲ್ಲಿ ಔಟ್ ಮಾಡಿ ಪಂದ್ಯದ ದಿಕ್ಕನ್ನು ತಿರುಗಿಸಿದರು. ಈಡನ್ ಗಾರ್ಡನ್ನಲ್ಲಿ ನಡೆಯಲಿರುವ ಎರಡನೇ ಸೆಮಿಫೈನಲ್ ಪಂದ್ಯದಲ್ಲಿ ವಿದರ್ಭ ತಂಡ ಮುಂಬೈ ತಂಡವನ್ನು ಎದುರಿಸಲಿದೆ.

ಬಂಗಾಳ ವಿರುದ್ಧ ಹಿಮಾಚಲ ಪ್ರದೇಶಕ್ಕೆ ಜಯ
ಮೂರನೇ ಕ್ವಾರ್ಟರ್ಫೈನಲ್ನಲ್ಲಿ ಹಿಮಾಚಲ ಪ್ರದೇಶದ ವಿರುದ್ಧ ಬಂಗಾಳ ತಂಡ ನಾಲ್ಕು ವಿಕೆಟ್ಗಳ ಸೋಲು ಅನುಭವಿಸಿತು. ಮೊದಲ ಇನ್ನಿಂಗ್ಸ್ನಲ್ಲಿ ಶಹಬಾಜ್ ಅಹ್ಮದ್ 32 ಎಸೆತಗಳಲ್ಲಿ 59 ರನ್ ಗಳಿಸಿ ಬಂಗಾಳ ತಂಡವನ್ನು 20 ಓವರ್ಗಳಲ್ಲಿ 6 ವಿಕೆಟ್ಗೆ 199 ರನ್ ಗಳಿಸಲು ಮುನ್ನಡೆಸಿದರು. ಉತ್ತರವಾಗಿ ಹಿಮಾಚಲ ಪ್ರದೇಶದ ಆಕಾಶ್ ವಸಿಷ್ಟ್ 42 ಎಸೆತಗಳಲ್ಲಿ ಅಜೇಯ 76 ರನ್ ಗಳಿಸಿದರೆ, ನಿಖಿಲ್ ಗಂಗ್ಟಾ 37 ಎಸೆತಗಳಲ್ಲಿ 50 ರನ್ ಗಳಿಸಿದರು. ಇವರಿಬ್ಬರ ಉತ್ತಮ ಪ್ರದರ್ಶನದಿಂದ ಹಿಮಾಚಲ ಪ್ರದೇಶ ಕೊನೆಯ ಎಸೆತದಲ್ಲಿ ಬಂಗಾಳದ ವಿರುದ್ಧ ಜಯ ಸಾಧಿಸಿತು.

ಸೌರಾಷ್ಟ್ರ ವಿರುದ್ಧ ಮುಂಬೈಗೆ ಗೆಲುವು
ಮುಂಬೈ ಮತ್ತು ಸೌರಾಷ್ಟ್ರ ನಡುವಿನ ನಾಲ್ಕನೇ ಹಾಗೂ ಅಂತಿಮ ಕ್ವಾರ್ಟರ್ ಫೈನಲ್ ಪಂದ್ಯದಲ್ಲಿ ಶ್ರೇಯಸ್ ಅಯ್ಯರ್ 30 ಎಸೆತಗಳಲ್ಲಿ 40 ರನ್ ಗಳಿಸಿ ಮುಂಬೈ ತಂಡದ ಗೆಲುವಿಗೆ ನೆರವಾದರು. ಮೊದಲ ಇನ್ನಿಂಗ್ಸ್ನಲ್ಲಿ ಪ್ರೇರಕ್ ಮಂಕಡ್ ಮುಂಬೈ ಬೌಲಿಂಗ್ ವಿರುದ್ಧ ಸ್ಫೋಟಕ ಅಟ ಪ್ರದರ್ಶಿಸಿ, ಕೇವಲ 25 ಎಸೆತಗಳಲ್ಲಿ 61 ರನ್ ಗಳಿಸಿದರು. ಸೌರಾಷ್ಟ್ರವು ಬೋರ್ಡ್ನಲ್ಲಿ 20 ಓವರ್ಗಳಲ್ಲಿ 8 ವಿಕೆಟ್ಗೆ 166 ರನ್ ಗಳಿಸಲು ಸಹಾಯ ಮಾಡಿದರು. ಪ್ರತ್ಯುತ್ತರವಾಗಿ, ಶ್ರೇಯಸ್ ಅಯ್ಯರ್ ಮತ್ತು ಶಿವಂ ದುಬೆ ಮುಂಬೈ ತಂಡಕ್ಕೆ ಕೇವಲ ಮೂರು ಎಸೆತಗಳು ಬಾಕಿ ಇರುವಂತೆಯೇ 2 ವಿಕೆಟ್ಗಳ ಜಯ ಸಾಧಿಸಲು ನೆರವಾದರು.
ಸೆಮಿಫೈನಲ್ನಲ್ಲಿ ಪಂಜಾಬ್ ತಂಡ ಹಿಮಾಚಲ ಪ್ರದೇಶವನ್ನು ಎದುರಿಸಲಿದ್ದರೆ, ಮುಂಬೈ ತಂಡ ನವೆಂಬರ್ 3ರಂದು ಕೋಲ್ಕತ್ತಾದ ಈಡನ್ ಗಾರ್ಡನ್ಸ್ನಲ್ಲಿ ವಿದರ್ಭ ತಂಡದ ವಿರುದ್ಧ ಆಡಲಿದೆ.
- Male
- Female
- Others
- Under 18
- 18 to 25
- 26 to 35
- 36 to 45
- 45 to 55
- 55+


Click it and Unblock the Notifications