ಕೋಚ್ ಕಾರ್ಲಸ್ ಕ್ವಾಡ್ರಾಟ್
ನಾರ್ತ್ ಈಸ್ಟ್ ಯುನೈಟೆಡ್ ತಂಡದ ವಿರುದ್ಧ ನಡೆದ ಮೊದಲ ಲೆಗ್ನ ಸೆಮಿಫೈನಲ್ ಪಂದ್ಯದಲ್ಲಿ ಬೆಂಗಳೂರು ತಂಡ 1-2 ಗೋಲುಗಲ ಅಂತರದಲ್ಲಿ ಸೋಲುಂಡು ಆತಂಕದ ಹಂತ ತಲುಪಿತ್ತು. ಎರಡನೇ ಲೆಗ್ನ ಪಂದ್ಯದಲ್ಲಿ ಬೆಂಗಳೂರು 70 ನಿಮಿಷಗಳ ಕಾಲ ಗೋಲು ಗಳಿಸಿರಲಿಲ್ಲ, ಆದರೆ ಆ ನಂತರ ಮೂರು ಗೋಲುಗಳನ್ನು ಗಳಿಸಿ ಪಂದ್ಯ ಗೆದ್ದು ಫೈನಲ್ ತಲುಪಿತ್ತು. ಕೇವಲ ಚೆಂಡನ್ನು ನಿಯಂತ್ರಣದಲ್ಲಿರಿಸಿಕೊಂಡರೆ ಗೋಲಾಗುವುದಿಲ್ಲ, ಅದೇ ರೀತಿ ಆಕ್ರಮಣಕಾರಿ ಆಟವೂ ಅಗತ್ಯವಿದೆ ಎಂಬುದನ್ನು ಕೋಚ್ ಕಾರ್ಲಸ್ ಕ್ವಾಡ್ರಾಟ್ ತೋರಿಸಿಕೊಟ್ಟಿದ್ದಾರೆ.
ಯಶಸ್ಸಿನ ಹಾದಿ ತುಳಿದಿತ್ತು.
50 ವರ್ಷ ಪ್ರಾಯದ ಕೋಚ್ ಕಾರ್ಲಸ್, ಕಳೆದ ಋತುವಿನಲ್ಲಿ ಅಷ್ಟು ಪರಿಪೂರ್ಣತೆ ಇಲ್ಲದ ತಂಡಕ್ಕೆ ಆಟದಲ್ಲಿ ಮತ್ತಷ್ಟು ಪಳಗುವಂತೆ ಮಾಡಿದರು. ಇಂಡಿಯನ್ ಸೂಪರ್ ಲೀಗ್ನಲ್ಲಿ ಎರಡನೇ ಋತುವನ್ನು ಪೂರ್ಣಗೊಳಿಸುತ್ತಿರುವ ಬೆಂಗಳೂರು ತಂಡ ಈ ಬಾರಿ ಮಿಕು ಹಾಗೂ ಪಾರ್ತಲು ಅವರಂಥ ಪ್ರಮುಖ ಆಟಗಾರರು ಗಾಯದ ಸಮಸ್ಯೆಯನ್ನು ಎದುರಿಸಿದರೂ ಅಂತಿಮ ಹಂತದಲ್ಲಿ ಚೇರಿಸಿಕೊಂಡು ಯಶಸ್ಸಿನ ಹಾದಿ ತುಳಿದಿತ್ತು. ಉದಾಂತ್ ಸಿಂಗ್, ಸುನಿಲ್ ಛೆಟ್ರಿ, ರಾಹುಲ್ ಭಿಕೆ, ಗುರ್ಪ್ರೀತ್ ಸಿಂಗ್ ಸಂ‘ೂ ಸೇರಿದಂತೆ ‘ಭಾರತದ ಪ್ರಮುಖ ಆಟಗಾರರು ಬೆಂಗಳೂರು ಎ್ಸಿ ತಂಡದ ಯಶಸ್ಸಿನಲ್ಲಿ ಪ್ರಮುಖ ಪಾತ್ರವಹಿಸಿದರು.
ಸುನಿಲ್ ಛೆಟ್ರಿ
ಉದಾಂತ್ ಸಿಂಗ್ ಮಿಂಚಿನ ಆಟವಾಡಿ ಈ ಋತುವಿನಲ್ಲಿ ಐದು ಗೋಲುಗಳನ್ನು ಗಳಿಸಿರುತ್ತಾರೆ. ಸುನಿಲ್ ಛೆಟ್ರಿ ಈ ಬಾರಿ ಗೋಲು ಗಳಿಕೆಯಲ್ಲಿ ಹಿಂದೆ ಬಿದ್ದರೂ ತಂಡಕ್ಕೆ ಆಪದ್ಭಾಂ‘ವನಂತೆ ಕೆಲಸ ಮಾಡಿದರು. ಗುರ್ಪ್ರೀತ್ ಸಿಂಗ್ ಅವರ ಸಾ‘ನೆಗೆ ಗೋಲ್ಡನ್ ಗ್ಲೋವ್ ಸಾಕ್ಷಿ. ಪೆನಾಲ್ಟಿ ಮೂಲಕ ಚಾಂಪಿಯನ್ ತಂಡದ ತೀರ್ಮಾನವಾಗುತ್ತದೆ ಎಂದು ಎಲ್ಲರೂ ಊಹಿಸಿರುವಾಗ ಅಂತಿಮ ಕ್ಷಣದಲ್ಲಿ ಹೆಡರ್ ಮೂಲಕ ಗೋಲು ಗಳಿಸಿದ ಭಿಕೆ ಫೈನಲ್ ಪಂದ್ಯದ ಹೀರೋ ಎನಿಸಿದರು. ಜುವಾನನ್ ಗೋವಾ ತಂಡದ ಆಟಗಾರರಿಗೆ ವಿಶೇಷವಾಗಿ ಫೆರಾನ್ ಕೊರೊಮಿನಾಸ್ಗೆ ಗೋಲು ಗಳಿಸುವ ಅವಕಾಶಕ್ಕೆ ಅಡ್ಡಿಯಾದರು.
ರಾಹುಲ್ ಭಿಕೆ
‘‘ಭಾರತದ ಡಿಫೆಂಡರ್ಗಳಾದ ರಾಹುಲ್ ಭಿಕೆ, ನಿಶು ಕುಮಾರ್ ಮತ್ತು ಹರ್ಮನ್ಜೋತ್ ಖಾಬ್ರ ಉತ್ತಮ ರೀತಿಯಲ್ಲಿ ಪ್ರದರ್ಶನ ತೋರಿರುವುದು ಖುಷಿ ಕೊಟ್ಟಿದೆ. ನಾವು ಆಕ್ರಮಣಕಾರಿ ಆಟಕ್ಕೆ ಮನ ಮಾಡಿದೆವು, ನಮ್ಮ ಯೋಜನೆ ಯಶಸ್ಸು ನೀಡಿತು. ಗೋವಾಕ್ಕೆ ಹೆಚ್ಚಿನ ಅವಕಾಶ ಸಿಗಲಿಲ್ಲ. ಫೆರಾನ್ ಕೊರೊಮಿನಾಸ್ಗೆ ನಾವು ಅವಕಾಶ ಕಲ್ಪಿಸಲಿಲ್ಲ. ಕಳೆದ ಮೂರು ತಂಡದಲ್ಲೂ ಅವರು ಅವಕಾಶ ವಂಚಿತರಾಗಿದ್ದರು. ನಮ್ಮ ರಕ್ಷಣಾ ವಿಭಾಗದ ಬಗ್ಗೆ ಖುಷಿ ಇದೆ,‘ ಎಂದು ಬೆಂಗಳೂರು ಕೋಚ್ ಹೇಳಿದ್ದಾರೆ.