ಇಂಡಿಯಾ ಕೇರ್ಸ್ ಫೌಂಡೇಷನ್ ನಡೆಸಿದ ಲೋಕೋಪಯೋಗಿ ಕಾರ್ಯಗಳಿಂದ ಟಿಸಿಎಸ್ ವಿಶ್ವ 10ಕೆ ದೊಡ್ಡ ಬೆಳವಣಿಗೆ ಕಂಡಿದೆ. ಮತ್ತು ದಕ್ಷಿಣ ಭಾರತದಲ್ಲಿ ಅತಿದೊಡ್ಡ ಏಕೈಕ ದತ್ತಿ ನಿ ಸಂಗ್ರಹಿಸುವ ವೇದಿಕೆಯಾಗಿ ಮಾರ್ಪಟ್ಟಿದೆ.
ಕೂಟದ 2018ನೇ ಆವೃತ್ತಿ, ಈವರೆಗೆ ಸುಮಾರು 4 ಕೋಟಿ ರೂಪಾಯಿ ದತ್ತಿ ನಿಧಿ ಸಂಗ್ರಹ ಹೆಚ್ಚಿಸಿದ್ದು, ಸುಮಾರು 70 ನಾಗರಿಕ ಸಮಾಜದ ಸಂಘಟನೆ (ಸಿಎಸ್ಒ)ಗಳು ಇದರ ಫಲಾನುಭವ ಪಡೆಯಲಿದ್ದಾರೆ.
ಪ್ರಮುಖ ಅಂಶಗಳು:
* 2008ರಿಂದ ಈವರೆಗೆ 33.89 ಕೋಟಿ ಏರಿಕೆ
*2017ನೇ ಆವೃತ್ತಿಯಲ್ಲಿ ಸುಮಾರು 7.55 ಕೋಟಿ ರೂ. ಏರಿಕೆ
* ವೈಯಕ್ತಿಕವಾಗಿ 23, 027 ಮಂದಿಗೆ ನೇರ ಪರಿಣಾಮ, ಒಟ್ಟಾರೆ 1, 11, 827 ಜನರಿಗೆ ಅನುಕೂಲ
* 2018ರಲ್ಲಿ ಈಗಾಗಲೇ 4 ಕೋಟಿ ರೂ.ಹೆಚ್ಚಳ, 70 ಸಿಎಸ್ಒಗಳಿಗೆ ಫಲಾನುಭವ
* 24 ಕಂಪೆನಿಗಳ 43 ತಂಡಗಳು, ಸುಮಾರು 300 ದತ್ತಿಸಂಗ್ರಹಗಾರರು ಮತ್ತು 4 ಸಾವಿರಕ್ಕೂ ಅಧಿಕ ದಾನಿಗಳು2018 ಮತ್ತು ನಿಧಿ ಸಂಗ್ರಹ
ಇದೇ ಮೊದಲ ಬಾರಿ ಈ ಕೂಟದಲ್ಲಿ ನಾಗರಿಕ ಸಮಾಜದ ಸಂಘಟನೆಗಳು ಸುಮಾರು 33ರಷ್ಟು ಹೆಸರು ನೋಂದಾಯಿಸಿಕೊಂಡಿದ್ದು, ದತ್ತಿ ನಿಧಿ ಸಂಗ್ರಹಕ್ಕೆ ಈ ವರ್ಷ ಬೆಂಬಲ ಸೂಚಿಸಿವೆ.
ಕಾರ್ಪೊರೇಟ್ ಕಂಪೆನಿಗಳು, ಓಟಗಾರರು ಮತ್ತು ಫಸ್ಟ್ ಅಮೆರಿಕ, ವೆಸ್ಟರ್ನ್ ಡಿಜಿಟಲ್, ಟಿಇ ಕನ್ನೆಕ್ಟಿವಿಟಿ ಯಂತಹ ಕಂಪೆನಿಗಳ ನಿರಂತರ ಓಟಗಾರರ ಕೊಡುಗೆ ಈ ಕೂಟದ ಬಲವಾಗಿದೆ.
ದತ್ತಿ ನಿಧಿ ಸಂಗ್ರಹ ಕುರಿತು ಪ್ರಕಟಿಸಿದ ಇಂಡಿಯಾ ಕೇರ್ಸ್ ಮುಖ್ಯಸ್ಥ ಮರ್ರೆ ಕಲ್ಶಾ, - 11ನೇ ಆವೃತ್ತಿಯ ಟಿಸಿಎಸ್ವಿಶ್ವ 10ಕೆ ಓಟ ಈವರೆಗೆ ಸುಮಾರು 4 ಕೋಟಿ ರೂಪಾಯಿವರೆಗೆ ದತ್ತಿ ನಿಧಿ ಏರಿಸಿದ್ದು, ಮುಂದಿನ ತಿಂಗಳುಗಳಲ್ಲಿ ಹಲವರ ಜೀವನ ಉತ್ತಮಗೊಳಿಸಲು ಇದು ಸಹಕಾರಿಯಾಗಲಿದೆ.