ಬೌಲಿಂಗ್ ಬಲ ಉತ್ತಮ ಬ್ಯಾಟಿಂಗ್ನದ್ದೇ ಚಿಂತೆ
ಅಫ್ಘಾನಿಸ್ತಾನದ ಬೌಲಿಂಗ್ ವಿಶ್ವದರ್ಜೆಯದ್ದಾಗಿದೆ. ಅಬ್ದುಲ್ ರಶೀದ್ ನೇತೃತ್ವದ ಬೌಲಿಂಗ್ ಪಡೆ ಉತ್ತಮ ಬ್ಯಾಟ್ಸ್ಮನ್ಗಳನ್ನೂ ಕಟ್ಟಿಹಾಕುವ ಛಾತಿ ಹೊಂದಿದೆ. ಆದರೆ ಅಪ್ಘಾನ್ ತಂಡಕ್ಕೆ ಬ್ಯಾಟಿಂಗ್ನದ್ದೇ ಚಿಂತೆ. ಈ ಅನೌಪಚಾರಿಕವಾದರೂ ಪ್ರಮುಖ ಪಂದ್ಯದಲ್ಲಿ ಅದು ಬ್ಯಾಟಿಂಗ್ ಬಲ ಉತ್ತಮಪಡಿಸಿಕೊಳ್ಳಲು ಯತ್ನಿಸಲಿದೆ.
ಪ್ರಮುಖ ಆಟಗಾರರಿಗೆ ಬಾಂಗ್ಲಾ ವಿಶ್ರಾಂತಿ
ಇದು ಅನೌಪಚಾರಿಕ ಪಂದ್ಯವಾಗಿದ್ದು, ಮುಂದಿನ ಪಂದ್ಯಗಳಲ್ಲಿ ಪಾಕಿಸ್ತಾನ, ಭಾರತದಂತಹಾ ಪ್ರಮುಖ ತಂಡಗಳನ್ನು ಎದುರಿಸಬೇಕಾಗಿರುವ ಕಾರಣ ಬಾಂಗ್ಲಾದೇಶ ತನ್ನ ಪ್ರಮುಖ ಆಟಗಾರರಿಗೆ ವಿಶ್ರಾಂತಿ ನೀಡಲಿದೆ. ಲಂಕಾ ವಿರುದ್ಧ ಪಂದ್ಯದಲ್ಲಿ ಶತಕ ಭಾರಿಸಿದ್ದ ಮುಶ್ಫಿಕುರ್ ರಹೀಮ್ ಈ ಪಂದ್ಯದಲ್ಲಿ ಆಡುವಂತಿಲ್ಲ ಅಪ್ಘಾನಿಸ್ತಾನ ಸಹ ತನ್ನ ಸ್ಟಾರ್ ಆಟಗಾರ ರಶೀದ್ಗೆ ವಿರಾಮ ನೀಡುವ ಸಾಧ್ಯತೆ ಇದೆ.
ಬಾಂಗ್ಲಾಕ್ಕೆ ಗಾಯಾಳುಗಳ ಸಮಸ್ಯೆ
ಮೊದಲ ಪಂದ್ಯದಲ್ಲಿ ಕೈಬೆರಳು ಮುರಿದುಕೊಂಡಿರುವ ತಮೀಮ್ ಇಕ್ಬಾಲ್ ಸರಣಿಯಿಂದ ಹೊರಗುಳಿದಿದ್ದಾರೆ. ಅವರ ಬದಲಿಗೆ ನಜಾಮ್ ಹುಸೇನ್ ಬಾಂಗ್ಲಾದ ಆಟುವ ಹನ್ನೊಂದರಲ್ಲಿ ಸ್ಥಾನ ದೊರೆಯಲಿದೆ. ಮುಶ್ಫಿಕುರ್ ರಹೀಮ್ ಬದಲಿಗೆ ಮೋಮಿನಲ್ ಹಕೀಮ್ ಅಥವಾ ಆರಿಫುಲ್ ಹಕೀ ಸ್ಥಾನ ಪಡೆಯಲಿದ್ದಾರೆ.
ಮೂಳೆ ಮುರಿದರೂ ಒಂದೇ ಕೈಯಲ್ಲಿ ಬ್ಯಾಟು ಹಿಡಿದು ಆಡಿದ ತಮೀಮ್ ಇಕ್ಬಾಲ್
ಭಾರತದ ವಿರುದ್ಧ ಯಾರಾಡಲಿದ್ದಾರೆ?
ಈ ಪಂದ್ಯದ ಫಲಿತಾಂಶ ಆಧರಿಸಿ ಸೆಮಿಫೈನಲ್ ನಲ್ಲಿ ಯಾವ ತಂಡ ಯಾವ ತಂಡದ ವಿರುದ್ಧ ಆಡಲಿದೆ ಎಂಬುದು ತಿಳಿಯಲಿದೆ. ಈಗ ಭಾರತವು ಮೊದಲ ತಂಡವಾಗಿ ನಾಲ್ಕರ ಘಟ್ಟ ತಲುಪಿದೆ. ಬಾಂಗ್ಲಾ-ಅಪ್ಘಾನಿಸ್ತಾನ ಪಂದ್ಯದಲ್ಲಿ ಸೋತ ತಂಡದ ಎದುರು ಭಾರತ ಸೆಮಿಫೈನಲ್ ಆಡಲಿದೆ.
ಗೆಲ್ಲುವ ಫೇವರೇಟ್ ಯಾರು?
ಎರಡೂ ತಂಡಗಳು ಸಮಬಲ ಹೊಂದಿವೆ ಆದರೆ ಬಾಂಗ್ಲಾ ತನ್ನ ಕೆಲವು ಸ್ಟಾರ್ ಆಟಗಾರರಿಗೆ ವಿಶ್ವಾಂತಿ ನೀಡಲಿದೆ ಹಾಗಾಗಿ ಅಪ್ಘಾನಿಸ್ತಾನಕ್ಕೆ ಗೆಲ್ಲವ ಅವಕಾಶ ಹೆಚ್ಚಿದೆ ಎನ್ನಬಹುದು. ಆದರೆ ಬಾಂಗ್ಲಾದೇಶ ಸಹ ಸಾಧಾರಣ ತಂಡವಲ್ಲ. ಅದರ ಬ್ಯಾಟಿಂಗ್ ಹಾಗೂ ಬೌಲಿಂಗ್ ಸಮತೋಲನೆಯಿಂದ ಕೂಡಿದೆ. ಅಪ್ಘಾನಿಸ್ತಾನ ತಂಡದಲ್ಲಿ ಈ ಸಮತೋಲನೆ ಇಲ್ಲ.