ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ 7ನೇ ಬಾರಿಗೆ ಪಂದ್ಯಶ್ರೇಷ್ಠ
ಟಿ20 ಕ್ರಿಕೆಟ್ನ ಇತಿಹಾಸದಲ್ಲಿ 7ನೇ ಬಾರಿಗೆ ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಭಾರತ ತಂಡದ ಪರ ಪಂದ್ಯಶ್ರೇಷ್ಠ ಆಟಗಾರನಾಗಿ ಆಯ್ಕೆಯಾದರು. ಈ ಗೌರವದೊಂದಿಗೆ ಸೂರ್ಯಕುಮಾರ್ ಅವರು ಒಂದೇ ಕ್ಯಾಲೆಂಡರ್ ವರ್ಷದಲ್ಲಿ ಒಟ್ಟು 6 ಪಂದ್ಯಶ್ರೇಷ್ಠ ಆಟಗಾರ ಪ್ರಶಸ್ತಿಗಳನ್ನು ಪಡೆದಿರುವ ಮಾಜಿ ನಾಯಕ ವಿರಾಟ್ ಕೊಹ್ಲಿಯನ್ನು ಹಿಂದಿಕ್ಕಿದರು.
ಅಂತಾರಾಷ್ಟ್ರೀಯ ಕ್ರಿಕೆಟ್ನಲ್ಲಿ ಜಿಂಬಾಬ್ವೆಯ ಸಿಕಂದರ್ ರಝಾ ಮಾತ್ರ ಕ್ಯಾಲೆಂಡರ್ ವರ್ಷದಲ್ಲಿ ಸೂರ್ಯಕುಮಾರ್ ಯಾದವ್ ಅವರಷ್ಟೇ 7 ಪಂದ್ಯಶ್ರೇಷ್ಠ ಗೌರವವನ್ನು ಹೊಂದಿದ್ದಾರೆ. ಇನ್ನು ಮಂಗಳವಾರ ನಡೆಯಲಿರುವ ನ್ಯೂಜಿಲೆಂಡ್ ವಿರುದ್ಧದ ಮೂರನೇ ಹಾಗೂ ಅಂತಿಮ ಟಿ20 ಪಂದ್ಯದಲ್ಲಿ ರಝಾ ಅವರ ದಾಖಲೆಯನ್ನು ಮುರಿಯುವ ಅವಕಾಶ ಸೂರ್ಯಕುಮಾರ್ ಯಾದವ್ಗಿದೆ.
12ನೇ ಅಥವಾ 13ನೇ ಓವರ್ನಲ್ಲಿ ಆಕ್ರಮಣಕಾರಿ ಬ್ಯಾಟಿಂಗ್
"ನಾನು ಬ್ಯಾಟಿಂಗ್ಗೆ ಹೋದಾಗ ಯೋಜನೆ ಸ್ಪಷ್ಟವಾಗಿರುತ್ತದೆ. 12ನೇ ಅಥವಾ 13ನೇ ಓವರ್ನಲ್ಲಿ ನಾವು ಆಕ್ರಮಣಕಾರಿ ಬ್ಯಾಟಿಂಗ್ ಮಾಡುವ ಮೂಲಕ 170-175 ರನ್ ಗಳಿಸುವ ಬಗ್ಗೆ ಯೋಚಿಸಿದ್ದೇವೆ," ಎಂದು ಸೂರ್ಯಕುಮಾರ್ ಯಾದವ್ ಹೇಳಿದರು.
"ನ್ಯೂಜಿಲೆಂಡ್ಗೆ ಬಂದಿರುವುದು ಉತ್ತಮ ಅನುಭವವಾಗಿದೆ ಮತ್ತು ಸರಣಿಯಲ್ಲಿ 1-0 ಮುನ್ನಡೆ ಪಡೆದಿರುವುದು ಅತ್ಯುತ್ತಮವಾಗಿದೆ. ನನ್ನ ಆಟ ಯೋಜನೆಯನ್ನು ಹೊಂದಿತ್ತು ಮತ್ತು ಅದು ಚೆನ್ನಾಗಿ ಕೆಲಸ ಮಾಡಿದೆ. ಇಲ್ಲಿ ಅದ್ಭುತ ಪ್ರೇಕ್ಷಕರಿದ್ದಾರೆ," ಎಂದು ಸೂರ್ಯಕುಮಾರ್ ಯಾದವ್ ಪಂದ್ಯದ ನಂತರ ಮಾತನಾಡಿದರು.
ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸುವ ಬಯಕೆ ವ್ಯಕ್ತಪಡಿಸಿದ ಸೂರ್ಯ
ನಂ.1 ಟಿ20 ಬ್ಯಾಟ್ಸ್ಮನ್ ಸೂರ್ಯಕುಮಾರ್ ಯಾದವ್ ಭಾನುವಾರ (ನವೆಂಬರ್ 20) ಪಂದ್ಯ ಮುಗಿದ ಬಳಿಕ ಮಾತನಾಡಿ, ಭಾರತವನ್ನು ಟೆಸ್ಟ್ ಪಂದ್ಯಗಳಲ್ಲಿ ಪ್ರತಿನಿಧಿಸುವ ಬಯಕೆಯನ್ನು ವ್ಯಕ್ತಪಡಿಸಿದ್ದಾರೆ. ಶೀಘ್ರದಲ್ಲೇ ರೆಡ್-ಬಾಲ್ ಕ್ರಿಕೆಟ್ಗೆ ಆಯ್ಕೆಯಾಗುವ ನಿರೀಕ್ಷೆ ಇದೆ ಎಂದು ಹೇಳಿದರು.
ನಾವು ಭಾರತದಲ್ಲಿ ಕೆಂಪು ಚೆಂಡಿನೊಂದಿಗೆ ಕ್ರಿಕೆಟ್ ಪ್ರಾರಂಭಿಸುತ್ತೇವೆ. ನಾನೂ ಸಹ ಕೆಂಪು ಚೆಂಡಿನ ಆಟವನ್ನು ಆನಂದಿಸುತ್ತೇನೆ. ನಾನು ಮುಂಬೈ ಪರ ಪ್ರಥಮ ದರ್ಜೆ ಕ್ರಿಕೆಟ್ ಅನ್ನು ರೆಡ್-ಬಾಲ್ ಮಾದರಿಯಲ್ಲಿ ಆಡಿದ್ದೇನೆ. ನನಗೆ ಆ ಸ್ವರೂಪದ ಬಗ್ಗೆ ಕಲ್ಪನೆ ಇದೆ ಮತ್ತು ಟೆಸ್ಟ್ ಕ್ಯಾಪ್ ಶೀಘ್ರದಲ್ಲೇ ಪಡೆಯಲಿದ್ದೇನೆ ಎಂದು ಭರವಸೆ ವ್ಯಕ್ತಪಡಿಸಿದರು.