
ವಿಶ್ವಕಪ್ ಮೊದಲ ಪಂದ್ಯದಲ್ಲೇ ಅರ್ಶ್ದೀಪ್ ಮಿಂಚು
ಅರ್ಶ್ದೀಪ್ ಸಿಂಗ್ ತಮ್ಮ ಮೊದಲ ಎರಡು ಓವರ್ ಗಳಲ್ಲಿ ಪಾಕಿಸ್ತಾದ ಆರಂಭಿಕರಾದ ಬಾಬರ್ ಅಜಂ, ಮೊಹಮ್ಮದ್ ರಿಜ್ವಾನ್ರನ್ನು ಔಟ್ ಮಾಡುವ ಮೂಲಕ ಆಘಾತ ನೀಡಿದರೆ. ನಂತರ ತಮ್ಮ ಮೂರನೇ ಓವರ್ ನಲ್ಲಿ ಪಾಕಿಸ್ತಾನದ ಆಲ್ರೌಂಡರ್ ಆಸಿಫ್ ಅಲಿಯನ್ನು ಬೌನ್ಸರ್ ಮೂಲಕ ಔಟ್ ಮಾಡಿದರು.
ಹಿರಿಯ ವೇಗದ ಬೌಲರ್ಗಳಾದ ಮೊಹಮ್ಮದ್ ಶಮಿ ಮತ್ತು ಭುವನೇಶ್ವರ್ ಕುಮಾರ್ ತಲಾ ಒಂದು ವಿಕೆಟ್ ಪಡೆಯುವ ಮೂಲಕ ಭಾರತವು ಈ ನಿರ್ಣಾಯಕ ಟಿ20 ವಿಶ್ವಕಪ್ ಮುಖಾಮುಖಿಯಲ್ಲಿ ಪಾಕಿಸ್ತಾನವನ್ನು 159 ರನ್ಗಳಿಗೆ ನಿರ್ಬಂಧಿಸಿತು.
IND vs PAK: ಪಾಕ್ ವಿರುದ್ಧ ಗೆದ್ದ ಹೊರತಾಗಿ ವಿಶಿಷ್ಟ ದಾಖಲೆ ಬರೆದ ಕೊಹ್ಲಿ-ಪಾಂಡ್ಯ ಜೋಡಿ

ಆಸ್ಟ್ರೇಲಿಯಾ ಪಿಚ್ಗಳಲ್ಲಿ ಉತ್ತಮ ಪ್ರದರ್ಶನ
ಆಸ್ಟ್ರೇಲಿಯಾದ ಪರಿಸ್ಥಿತಿಗಳಿಗೆ ಭಾರತೀಯ ಬೌಲರ್ಗಳು ಹೇಗೆ ಹೊಂದಿಕೊಳ್ಳುತ್ತಾರೆ ಎಂಬುದರ ಕುರಿತು ಭಾರತದ 1983 ರ ವಿಶ್ವಕಪ್ ವಿಜೇತ ತಾರೆ ಮದನ್ ಲಾಲ್ ವಿವರಣೆ ನೀಡಿದ್ದಾರೆ.
"ನಮ್ಮ ಬೌಲಿಂಗ್ ಘಟಕವು ಯಾವಾಗಲೂ ತಮ್ಮ ಸ್ಟಾಂಡರ್ಡ್ ಅನ್ನು ಹೆಚ್ಚಿಸಿದೆ. ವಿಭಿನ್ನ ಪರಿಸ್ಥಿತಿಗಳಲ್ಲಿ ಬೌಲಿಂಗ್ ಮಾಡುವಾಗ ಭಾರತ ಬೌಲರ್ ಗಳು ಅಸಾಧಾರಣರಾಗಿದ್ದಾರೆ. ಭಾರತೀಯ ವಿಕೆಟ್ಗಳಲ್ಲಿ ಬೌಲಿಂಗ್ ಮತ್ತು ಆಸ್ಟ್ರೇಲಿಯಾ ಬೌಲಿಂಗ್ ಸಂಪೂರ್ಣವಾಗಿ ವಿಭಿನ್ನವಾಗಿದೆ. ಆದರೂ ಅಲ್ಲಿನ ಪರಿಸ್ಥಿತಿಗೆ ಹೊಂದಿಕೊಂಡು ಅತ್ಯುತ್ತಮ ಪ್ರದರ್ಶನ ನೀಡುತ್ತಿದ್ದಾರೆ" ಎಂದು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

ಮೊಹಮ್ಮದ್ ಶಮಿ ಉತ್ತಮ ಬೌಲಿಂಗ್ ಪ್ರದರ್ಶನ
ಭಾರತ ತಂಡದ ವೇಗಿ ಜಸ್ಪ್ರೀತ್ ಬುಮ್ರಾ ಬದಲಿಗೆ ತಂಡದಲ್ಲಿ ಸ್ಥಾನ ಪಡೆದಿರುವ ಶಮಿ, ಒಂದು ವರ್ಷದ ಬಳಿಕ ಮೊದಲ ಟಿ20 ಅಂತಾರಾಷ್ಟ್ರೀಯ ಪಂದ್ಯವನ್ನು ಆಡಿದ್ದರು. ಅವರು ಕೊನೆಯ ಬಾರಿಗೆ ಟಿ20 ವಿಶ್ವಕಪ್ನ ಹಿಂದಿನ ಆವೃತ್ತಿಯಲ್ಲಿ ಭಾರತದ ಪರ ಆಡಿದ್ದರು.
ಪವರ್ಪ್ಲೇಯಲ್ಲಿ ಪಾಕಿಸ್ತಾನದ ಇಬ್ಬರು ಬ್ಯಾಟರ್ ಔಟಾದ ನಂತರ, ಇಫ್ತಿಕರ್ ಅಹ್ಮದ್ ಮತ್ತು ಶಾನ್ ಮಸೂದ್ 76 ರನ್ಗಳ ಜೊತೆಯಾಟ ಆಡಿದರು. ಇಫ್ತಿಕರ್ ಅವರು ನಾಲ್ಕು ಸಿಕ್ಸರ್ಗಳನ್ನು ಸಿಡಿಸಿದಾಗ ಭಾರತೀಯ ಸ್ಪಿನ್ನರ್ಗಳಿಗೆ ಬೆದರಿಕೆ ಹಾಕಿದರು, ಮೂರು ಸಿಕ್ಸರ್ ಅಕ್ಷರ್ ಪಟೇಲ್ ಓವರ್ನಲ್ಲಿ ಬಂದವು. ಆ ದೊಡ್ಡ ಹಿಟ್ಗಳೊಂದಿಗೆ ಹೆಚ್ಚಿನ ರನ್ ಗಳಿಸಲು ನೋಡುತ್ತಿದ್ದ ಇಫ್ತಿಕರ್ ಅಹ್ಮದ್ರನ್ನು ಶಮಿ ಎಲ್ಬಿಡಬ್ಲ್ಯೂ ಬಲೆಗೆ ಕೆಡವಿದರು.

ಬೌಲರ್ ಪುನರಾಗಮನ ಮಾಡುವುದು ಕಷ್ಟ
ನಾಲ್ಕು ಓವರ್ಗಳಲ್ಲಿ ಶಮಿ 25ಕ್ಕೆ 1 ವಿಕೆಟ್ ಪಡೆದಿದ್ದರೂ, ಶಮಿ ಇನ್ನೂ ತಮ್ಮ ವೇಗಕ್ಕೆ ಮರಳಿಲ್ಲ ಎಂದು ಮದನ್ ಲಾಲ್ ಹೇಳಿದ್ದಾರೆ. ಬೌಲರ್ಗೆ ಪುನರಾಗಮನ ಮಾಡುವುದು ಎಷ್ಟು ಕಷ್ಟ ಎಂದು ಮದನ್ ಲಾಲ್ ವಿವರಿಸಿದ್ದಾರೆ.
"ಮೊಹಮ್ಮದ್ ಶಮಿ ಸ್ವಲ್ಪ ನಿಧಾನಗತಿಯಲ್ಲಿದ್ದರು ಎಂದು ನಾನು ಭಾವಿಸುತ್ತೇನೆ. ಇಫ್ತಿಕರ್ ಅಹ್ಮದ್ ವಿಕೆಟ್ ಪಡೆಯಲು ಉತ್ತಮ ಎಸೆತವನ್ನು ಬೌಲ್ ಮಾಡಿದರು ಮತ್ತು ಅದು ನಿರ್ಣಾಯಕ ವಿಕೆಟ್ ಆಗಿತ್ತು. ನೀವು ಬಹಳ ಸಮಯದ ನಂತರ ಆಟವನ್ನು ಆಡುತ್ತಿದ್ದರೆ, ನಂತರ ಪ್ರವೇಶಿಸಲು ಸಮಯ ತೆಗೆದುಕೊಳ್ಳುತ್ತದೆ." ಎಂದು ಅವರು ಹೇಳಿದರು. ಭಾರತವು ಟಿ20 ವಿಶ್ವಕಪ್ನ ಗ್ರೂಪ್ 2 ಸೂಪರ್ 12 ಹಂತದ ತನ್ನ ಮುಂದಿನ ಪಂದ್ಯವನ್ನು ನೆದರ್ಲ್ಯಾಂಡ್ಸ್ ವಿರುದ್ಧ ಅಕ್ಟೋಬರ್ 27 ರಂದು ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಆಡಲಿದೆ.


Click it and Unblock the Notifications












