ಜೀವಮಾನದಲ್ಲಿ ನಂಬಬೇಡಿ
'ಜೀವನದಲ್ಲಿ ನೀವು ಯಾರನ್ನು ನಂಬಬೇಕು ಮತ್ತು ನಂಬಬಾರದು ನೀವು ಆಯ್ಕೆ ಮಾಡಿಕೊಳ್ಳಬಹುದು. ಆದರೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಡೆತ್ ಬೌಲಿಂಗ್ ಅನ್ನು ಮಾತ್ರ ನೀವು ಜೀವಮಾನದಲ್ಲಿ ನಂಬಲೇ ಬಾರದು' ಎಂದು ಸೆಹ್ವಾಗ್ ಹೇಳಿದ್ದಾರೆ.
ಆರ್ಸಿಬಿಯ ಈ ತಪ್ಪುಗಳನ್ನ ಒಪ್ಪಿಕೊಂಡ ಎಬಿ ಡಿವಿಲಿಯರ್ಸ್!
ಗೆಲ್ಲುವಂತಹ ಪಂದ್ಯ
'ಸುಲಭವಾಗಿ ಗೆದ್ದುಬಿಡುವಂತಹ ಪಂದ್ಯವನ್ನು ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ಬೌಲರ್ಗಳು ಕೊನೆಯಲ್ಲಿ ಸೂಪರ್ ಓವರ್ಗೆ ತಂದಿಟ್ಟರು' ಎಂದು ವೀರೇಂದ್ರ ಸೆಹ್ವಾಗ್ ಡೆತ್ ಬೌಲಿಂಗ್ ದೌರ್ಬಲ್ಯವನ್ನು ಟೀಕಿಸಿದ್ದಾರೆ.
ಆರ್ಸಿಬಿ ಬಯಸಿದ್ದ ಆಟಗಾರ ಪಡಿಕ್ಕಲ್
ಕರ್ನಾಟಕದ ಸ್ಫೋಟಕ ಬ್ಯಾಟ್ಸ್ಮನ್ ದೇವದತ್ ಪಡಿಕ್ಕಲ್ ಆರ್ಸಿಬಿ ತಂಡದ ಆರಂಭಿಕನಾಗಿ ನೀಡುತ್ತಿರುವ ಪ್ರದರ್ಶನವನ್ನು ಸೆಹ್ವಾಗ್ ಪ್ರಶಂಸಿಸಿದ್ದಾರೆ. ಆರ್ಸಿಬಿ ತಂಡವು ಎರಡು ವರ್ಷಗಳಿಂದ ಎದುರು ನೋಡುತ್ತಿದ್ದಂತಹ ಬ್ಯಾಟ್ಸ್ಮನ್ ಸಿಕ್ಕಿದ್ದಾರೆ ಎಂದಿದ್ದಾರೆ.
ಕನ್ನಡಿಗರ ಹೃದಯ ಗೆದ್ದ ಆರ್ಸಿಬಿ ಬೌಲರ್ ಚಾಹಲ್
ಎಬಿಡಿ ಗುರಿಯೇ ಅದು
ಎಬಿ ಡಿವಿಲಿಯರ್ಸ್ ಬ್ಯಾಟಿಂಗ್ ಮಾಡುವಾಗ ಒಂದೇ ಒಂದು ಗುರಿಯನ್ನು ಹೊಂದಿರುತ್ತಾರೆ. ಅದು ಸ್ಟೇಡಿಯಂನ ಹೊರಗೆ ಚೆಂಡನ್ನು ಸಿಡಿಸುವುದಾಗಿದೆ ಎಂದು ಸೆಹ್ವಾಗ್ ಬಣ್ಣಿಸಿದ್ದಾರೆ. ಆರ್ಸಿಬಿಯನ್ನು ಸೋಲಿನ ದವಡೆಯಿಂದ ಕಾಪಾಡಿದ ಯುವ ಬೌಲರ್ಗಳಾದ ನವದೀಪ್ ಸೈನಿ ಮತ್ತು ವಾಷಿಂಗ್ಟನ್ ಸುಂದರ್ ಅವರನ್ನು ಕೂಡ ಹೊಗಳಿದ್ದಾರೆ.