ಪಾಕಿಸ್ತಾನ್ ಸೂಪರ್ ಲೀಗ್ ಫ್ರಾಂಚೈಸಿ ಬಗ್ಗೆ ರಶೀದ್ ಖಾನ್
ಅಫ್ಘಾನಿಸ್ತಾನ ಮೂಲದ ಯುವ ಸ್ಪಿನ್ನರ್ ರಶೀದ್ ಖಾನ್ ಪಾಕಿಸ್ತಾನ್ ಸೂಪರ್ ಲೀಗ್ನ ಫ್ರಾಂಚೈಸಿಯ ಬಗ್ಗೆ ಇಂತಾ ಮಾತಿಗಳನ್ನು ಆಡಿದ್ದಾರೆ. ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ರಶೀದ್ ಖಾನ್ ಲಾಹೋರ್ ಖಲಂದರ್ ತಂಡದ ಭಾಗವಾಗಿದ್ದಾರೆ. ಈ ತಂಡ ತನ್ನನ್ನು ಕಡಿಮೆ ಡ್ರಾಫ್ಟ್ ವಿಭಾಗದಲ್ಲಿ ಸೇರಿಸಿಕೊಂಡರೂ ತಾನು ಈ ತಂಡದ ಪರವಾಗಿ ಆಡಲು ಸಿದ್ಧನಿದ್ಧೇನೆ ಎಂದು ರಶೀದ್ ಖಾನ್ ತಂಡದ ಕಿರಿಯಾಗಿ ವಿಶೇಷ ಅಭಿಮಾನದ ಮಾತುಗಳನ್ನಾಡಿದ್ದಾರೆ.
ಪಾಕಿಸ್ತಾನ್ ಸೂಪರ್ ಲೀಗ್ನಲ್ಲಿ ಆಟಗಾರರ ಹರಾಜು ಪ್ರಕ್ರಿಯೆ
ವಿಶ್ವದ ಜನಪ್ರಿಯ ಕ್ರಿಕೆಟ್ ಲೀಗ್ಗಳಲ್ಲಿ ಒಂದಾಗಿರುವ ಪಾಕಿಸ್ತಾನ ಸೂಪರ್ ಲೀಗ್ನಲ್ಲಿ ಆಟಗಾರರನ್ನು ಹರಾಜು ಪ್ರಕ್ರಿಯೆ ಮೂಲಕ ತಂಡಕ್ಕೆ ಸೇರ್ಪಡೆಗೊಳಿಸಲಾಗುವುದಿಲ್ಲ ಎಂಬ ಸಂಗತಿ ಬಹುತೇಕರಿಗೆ ತಿಳಿದಿಲ್ಲ. ಪ್ರತಿ ವರ್ಷವೂ ಆಯೋಜಕರು ಪ್ಲೇಯರ್ಸ್ ಡ್ರಾಫ್ಟ್ಅನ್ನು ಸಿದ್ಧಪಡಿಸಿ ಬೇರೆ ಬೇರೆ ವಿಭಾಗದಲ್ಲಿ ಆಟಗಾರರೊಂದಿಗೆ ಒಪ್ಪಂದವನ್ನು ಮಾಡಿಕೊಳ್ಳುತ್ತದೆ. ಪ್ಲಾಟಿನಮ್ ಕೆಟಗರಿ ನಂಬರ್ 1 ವಿಭಾಗವಾಗಿದ್ದರೆ ನಂತರ ಡೈಮಂಡ್, ಗೋಲ್ಡ್, ಸಿಲ್ವರ್, ಎಮರ್ಜಿಂಗ್ ಹಾಗೂ ಸಪ್ಲಿಮೆಂಟರಿ ಈ ವಿಭಾಗಗಳಲ್ಲಿ ಆಟಗಾರರನ್ನು ವಿಂಗಡಿಸಲಾಗುತ್ತದೆ. ಪ್ಲಾಟಿನಮ್ ಕೆಟಗರಿಯಲ್ಲಿ ಬಾಬರ್ ಅಜಂ, ರಶೀದ್ ಖಾನ್ ಅವರಂತಾ ಸ್ಟಾರ್ ಆಟಗಾರರು ಇದ್ದಾರೆ. ಈ ವಿಭಾಗದಲ್ಲಿರುವ ಆಟಗಾರರು ಸುಮಾರು ಒಂದು ಕೋಟಿ ಸಂಭಾವನೆಯನ್ನು ಪಡೆಯುತ್ತಾರೆ ಎಂದು ವರದಿಗಳು ಹೇಳುತ್ತದೆ.
ಲಾಹೋರ್ ಖಲಂದರ್ ಪ್ರಾಂಚೈಸಿ ಬಗ್ಗೆ ಹೇಳಿದ್ದಿಷ್ಟು!
ರಶೀದ್ ಖಾನ್ ಈ ಬಾರಿಯ ಪಾಕಿಸ್ತಾನ್ ಸೂಪರ್ ಲೀಗ್ ಪೂರ್ಣಗೊಳ್ಳುವ ಮುನ್ನವೇ ಪಿಎಸ್ಎಲ್ ತೊರೆದಿದ್ದಾರೆ. ಇದಕ್ಕೆ ಕಾರಣ ಅಫ್ಘಾನಿಸ್ತಾನ ರಾಷ್ಟ್ರೀಯ ತಂಡದ ಕರ್ತವ್ಯಕ್ಕೆ ರಶೀದ್ ಖಾನ್ ಹಾಜರಾಗಬೇಕಿದೆ. ಈ ಸಂದರ್ಭದಲ್ಲಿ ರಶೀದ್ ಖಾನ್ ಸಂಭಾವನೆ ಬಗ್ಗೆ ಮಾತನಾಡಿದ್ದಾರೆ. "ಡ್ರಾಫ್ಟ್ ವಿಭಾಗ ನನಗೆ ಯಾವುದೇ ಸಮಸ್ಯೆಯಾಗುವುದಿಲ್ಲ. ಲಾಹೋರ್ ಖಲಂದರ್ ಫ್ರಾಂಚೈಸಿ ನನ್ನನ್ನು ಕನಿಷ್ಟ ಡ್ರಾಫ್ಟ್ ವಿಭಾಗದಲ್ಲಿ ಹೆಸರಿಸಿದರೂ ನಾನು ಈ ತಂಡದ ಪರವಾಗಿ ಆಡಲು ಸಿದ್ಧನಿದ್ದೇನೆ" ಎಂದು ರಶೀದ್ ಖಾನ್ ಹೇಳಿಕೆ ನೀಡಿದ್ದಾರೆ.
ಪಿಎಸ್ಎಲ್ ಅರ್ಧಕ್ಕೆ ತೊರೆಯುವುದೇಕೆ ರಶೀದ್ ಖಾನ್?
ಪಾಕಿಸ್ತಾನದ ವೇಗದ ಬೌಲರ್ ಶಾಹೀನ್ ಶಾ ಅಫ್ರಿದಿ ನೇತೃತ್ವದ ಲಾಹೋರ್ ಖಲಂದರ್ ತಂಡದ ಪ್ರಮುಖ ಸದಸ್ಯನಾಗಿರುವ ರಶೀದ್ ಖಾನ್ ಟೂರ್ನಿ ಸಂಪೂರ್ಣಗೊಳ್ಳುವ ಮುನ್ನವೇ ತೊರೆದಿದ್ದಾರೆ. ಫ್ರಾಂಚೈಸಿ ಪ್ಲೇಆಫ್ ಹಂತಕ್ಕೆ ಪ್ರವೇಶ ಪಡೆದಿದ್ದರೂ ರಾಷ್ಟ್ರೀಯ ತಂಡದ ಕರ್ತವ್ಯದ ಹಿನ್ನೆಲೆಯಲ್ಲಿ ರಶೀದ್ ಖಾನ್ ಟೂರ್ನಿಯಿಮದ ಈಗಾಗಲೇ ಹೊರನಡೆದಿದ್ದಾರೆ. ಬಾಂಗ್ಲಾದೇಶ ತಂಡದ ವಿರುದ್ಧ ಅಪ್ಘಾನಿಸ್ತಾನ ತಂಡ ಐಸಿಸಿ ವಿಶ್ವಕಪ್ ಸೂಪರ್ ಲೀಗ್ ಸರಣಿಯಲ್ಲಿ ಬಾಂಗ್ಲಾದೇಶದ ವಿರುದ್ಧ ಆಡುತ್ತಿದೆ. ಕಳೆದ ವಿಶ್ವಕಪ್ನಲ್ಲಿ ಅಫ್ಘಾನಿಸ್ತಾನ ತಂಡ ಒಂದೇ ಪಂದ್ಯವನ್ನು ಗೆಲ್ಲಲು ಕೂಡ ವಿಫಲವಾಗಿತ್ತು. ಮುಂದಿನ ವರ್ಷ ಭಾರತದಲ್ಲಿ ನಡೆಯಲಿರುವ ವಿಶ್ವಕಪ್ನಲ್ಲಿ ನೇರವಾಗಿ ಅರ್ಹತೆಯನ್ನು ಪಡೆಯಬೇಕಿದ್ದರೆ ಈ ಸರಣಿಯಲ್ಲಿ ಗೆಲುವು ತಂಡಕ್ಕೆ ಅಗತ್ಯವಾಗಿದೆ. ಹಿಗಾಗಿ ಈ ಸರಣಿಯ ಮೇಲೆ ಕುತೂಹಲ ಹೆಚ್ಚಾಗಿದೆ.