
ಪೂಜಾರ ಸತತ ವೈಫಲ್ಯ
ಲಾರ್ಡ್ಸ್ ಅಂಗಳದಲ್ಲಿ ನಡೆದ ಎರಡನೇ ಟೆಸ್ಟ್ ಪಂದ್ಯದ ಮೊದಲ ಇನ್ನುಂಗ್ಸ್ನಲ್ಲಿ ಪೂಜಾರ ವೈಫಲ್ಯವನ್ನು ಅನುಭವಿಸುವ ಮುನ್ನ ಇಂಗ್ಲೆಂಡ್ ವಿರುದ್ಧದ ನಾಟಿಂಗ್ಹ್ಯಾಮ್ ಟೆಸ್ಟ್ ಪಂದ್ಯದಲ್ಲಿಯೂ ವಿಫಲರಾಗಿದ್ದರು. ಇನ್ನು ಕಳೆದ ಜೂನ್ನಲ್ಲಿ ನಡೆದ ವಿಶ್ವ ಟೆಸ್ಟ್ ಚಾಂಪಿಯನ್ಶಿಪ್ನ ಫೈನಲ್ ಪಂದ್ಯದಲ್ಲಿಯೂ ಪೂಜಾರ ಕೇವಲ 4 ರನ್ ಹಾಗೂ 12 ರನ್ಗಳಿಸಲಷ್ಟೇ ಶಕ್ತವಾಗಿದ್ದರು. ಪಾದದ ಚಲನೆಯಲ್ಲಿ ಸತತವಾಗಿ ಎಡವುತ್ತಿರುವ ಪೂಜಾರ ನಿರಂತರವಾಗಿ ಎಡ್ಜ್ ಆಗುವ ಮೂಲಕ ವಿಕೆಟ್ ಕಳೆದುಕೊಳ್ಳುತ್ತಿದ್ದಾರೆ. ಹೀಗಾಗಿ ಪೂಜಾರ ಫಾರ್ಮ್ ಬಗ್ಗೆ ಸಾಕಷ್ಟು ಟೀಕೆಗಳು ವ್ಯಕ್ತವಾಗುತ್ತಿದೆ.

ನಾಯಕ, ಕೋಚ್ ಮೇಲೆ ಅವಲಂಬಿತ
"ಪೂಜಾರ ಬ್ಯಾಟಿಂಗ್ ನಡೆಸಲು ಕಷ್ಟಪಡುತ್ತಿದ್ದಾರೆ. ಇಂಗ್ಲೆಂಡ್ ಪರಿಸ್ಥಿತಿ ಕೂಡ ತುಂಬಾ ಕಠಿಣವಾಗಿದೆ. ಟೀಮ್ ಇಂಡಿಯಾ ಬಯಸಿದರೆ ಈ ಅವಕಾಶವನ್ನು ಸೂರ್ಯಕುಮಾರ್ ಯಾದವ್ಗೆ ನೀಡಬಹುದು. ಆದರೆ ಇದೆಲ್ಲವೂ ಕೂಡ ನಾಯಕ ವಿರಾಟ್ ಕೊಹ್ಲಿ ಹಾಗೂ ಕೋಚ್ ಹೇಗೆ ಯೋಚಿಸುತ್ತಾರೆ ಎಂಬುದರ ಮೇಲೆ ಅವಲಂಬಿತವಾಗಿದೆ. ಈವರೆಗೆ ಮೂರು ಇನ್ನಿಂಗ್ಸ್ಗಳನ್ನು ಆಡಲಾಗಿದೆ. ನನ್ನ ಪ್ರಕಾರ ಯುವ ಆಟಗಾರನನ್ನು ಇಂತಾ ಕಠಿಣ ಪರಿಸ್ಥಿತಿಯಲ್ಲಿ ಆಡಿಸುವುದು ಕಷ್ಟ. ಆತನ ಪಾಲಿಗೆ ಇದು ನಿಜಕ್ಕೂ ಅಗ್ನಿ ಪರೀಕ್ಷೆಯಾಗಿರಲಿದೆ. ಮತ್ತೊಂದೆಡೆ ಪೂಜಾರ ತುಂಬಾ ನಂಬಿಕಸ್ತ ಬ್ಯಾಟ್ಸ್ಮನ್ ಆಗಿದ್ದಾರೆ. ಇಂತಾ ಪರಿಸ್ಥಿತಿಯಲ್ಲಿ ಅವರು ಇದಕ್ಕೂ ಮೊದಲು ಉತ್ತಮ ಪ್ರದರ್ಶನ ನೀಡಿದ್ದಾರೆ. ಈವರೆಗಿನ ಆಟದಲ್ಲಿ ಅವರು ವಿಫಲವಾಗಿರಬಹುದು. ಆದರೆ ಆತನಿಗೆ ಮತ್ತೊಂದು ಟೆಸ್ಟ್ನಲ್ಲಿ ಅವಕಾಶ ನೀಡುವುದು ಸೂಕ್ತ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.

ಪೂಜಾರ, ರಹಾನೆ ಇಬ್ಬರೂ ಉತ್ತಮ ದರ್ಜೆಯ ಆಟಗಾರರು
ಇನ್ನು ಇದೇ ಸಂದರ್ಭದಲ್ಲಿ ಟೀಮ್ ಇಂಡಿಯಾದ ಉಪನಾಯಕ ಅಜಿಂಕ್ಯ ರಹಾನೆ ಕೂಡ ರನ್ಗಳಿಸಲು ವಿಫಲವಾಗಿದ್ದಾರೆ. ಈ ಇಬ್ಬರು ಕೂಡ ಹಲವಾರು ಇನ್ನಿಂಗ್ಸ್ಗಳಲ್ಲಿ ಉತ್ತಮ ರನ್ಗಳಿಸಲು ವಿಫಲವಾಗುತ್ತಾ ಬಂದಿದ್ದಾರೆ. ಈ ಹಿನ್ನೆಲೆಯಲ್ಲಿ ಇಬ್ಬರು ಆಟಗಾರರ ಬಗ್ಗೆಯೂ ಸಲ್ಮಾನ್ ಬಟ್ ಪ್ರತಿಕ್ರಿಯಿಸಿದ್ದಾರೆ. "ಪೂಜಾರ ಹಾಗೂ ರಹಾನೆ ಇನ್ನರು ಕೂಡ ಭಾರತ ತಂಡದ ಅಗ್ರ ಬ್ಯಾಟ್ಸ್ಮನ್ಗಳು. ಬೇಸರದ ಸಂಗತಿಯೆಂದರೆ ಇಬ್ಬರು ಕೂಡ ಉತ್ತಮ ಫಾರ್ಮ್ನಲ್ಲಿಲ್ಲ. ಇದು ಕೇವಲ ಸರಣಿಯ ಎರಡನೇ ಪಂದ್ಯವಾಗಿರುವುದರಿಂದ ಸರಣಿಯ ಮಧ್ಯದಲ್ಲಿ ಆಟಗಾರರನ್ನು ಕೈಬಿಟ್ಟರೆ ಈ ಆಟಗಾರರ ಮೇಲೆ ಹಾಗೂ ಆಡುವ ಬಳಗದಲ್ಲಿ ಸೇರ್ಪಡೆಯಾಗುವ ಆಟಗಾರರ ಮೇಲೆ ಒತ್ತಡ ಹೆಚ್ಚಾಗುತ್ತದೆ. ಇಂಗ್ಲೀಷ್ ಪರಿಸ್ಥಿತಿಯಲ್ಲಿ ಹೊಸ ಆಟಗಾರ ಕಣಕ್ಕಿಳಿದು ಬ್ಯಾಟಿಂಗ್ ನಡೆಸುವುದು ಸುಲಭದ ಮಾತಲ್ಲ. ಅವರು ಈಗ ಮೂರು ಇನ್ನಿಂಗ್ಸ್ ಆಡಿದ್ದಾರೆ. ನನ್ನ ಪ್ರಕಾರ ಅವರ ಬದಲಿಗೆ ಬೇರೆಯವರನ್ನು ಸೇರ್ಪಡೆಗೊಳಿಸುವುದು ತುಂಬಾ ಆತುರದ ನಿರ್ಧಾರವಾಗುತ್ತದೆ" ಎಂದು ಸಲ್ಮಾನ್ ಬಟ್ ಹೇಳಿದ್ದಾರೆ.


Click it and Unblock the Notifications












