ಬೆಂಗಳೂರು, ನವೆಂಬರ್ 14: ಆಲ್ ಇಂಡಿಯಾ ಟೆನಿಸ್ ಅಸೋಸಿಯೇಷನ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಪ್ರಜ್ಞೇಶ್, ಸೆಬಾಸ್ಟಿಯನ್ ಫ್ಯಾನ್ಸೆಲೊ ಸೋಲಿಸಿ ಮುನ್ನಡೆ ಸಾಧಿಸಿದರು.
ಬೌಲಿಂಗ್ ವೇಳೆ ರಕ್ತವಾಂತಿ: ಕ್ರಿಕೆಟ್ಗೆ ವಿದಾಯ ಹೇಳಿದ ಜಾನ್ ಹೇಸ್ಟಿಂಗ್ಸ್
ಬುಧವಾರ (ನವೆಂಬರ್ 14) ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಗುಣೇಶ್ವರನ್ ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ಸೆಟ್ ಸೋತರೂ ಕೂಡ ಅಂತಿಮವಾಗಿ 4-6, 6-4, 7-5ರ ಅಂತರದಿಂದ ಜರ್ಮನ್ ಆಟಗಾರ ಸೆಬಾಸ್ಟಿಯನ್ ಫ್ಯಾನ್ಸೆಲೊ ಅವರನ್ನು ಕೆಡವಿ ಮುನ್ನಡೆ ಗಿಟ್ಟಿಸಿಕೊಂಡರು.
What a sigh of relief! #PrajneshGunneswaran comes back from a set and 2-5 down in the third to claw back into the match. Sees off Sebastian Fanselow 4-6 6-4 7-5
— anjali banerjee (@anjali_banerjee) November 14, 2018
What a come from behind victory for the 4th seed. Commendable ! #BlrOpen18 #BengaluruOpen2018 pic.twitter.com/ggtSFnUAaL
ಇದಕ್ಕೂ ಮುನ್ನ ಮಂಗಳವಾರ (ನವೆಂಬರ್ 13) ನಡೆದ ಪಂದ್ಯದಲ್ಲಿ ವಿಶ್ವ ನಂ.144ನೇ ಆಟಗಾರ ಪ್ರಜ್ಞೇಶ್, ವಿಶ್ವ ನಂ. 263ನೇ ಆಟಗಾರ ರಷ್ಯಾದ ಇವಾನ್ ನೆಡೆಲ್ಕೊ ಅವರನ್ನು 6-2, 6-2ರ ನೇರ ಸೆಟ್ ನಿಂದ ಮಣಿಸಿ ಮುನ್ನಡೆ ಸಾಧಿಸಿದ್ದರು.
ಕಾಶ್ಮೀರವಂತೆ, ಕಾಶ್ಮೀರ, ಮೊದ್ಲು ಪಾಕಿಸ್ತಾನ ಉಳಿಸಿಕೊಳ್ಳಿ: ಶಹೀದ್ ಅಫ್ರಿದಿ ಕಿವಿಮಾತು
ಭಾರತದ ಮತ್ತೊಬ್ಬ ಆಟಗಾರ ಶಶಿಕುಮಾರ್ ಮುಕುಂದ್ ಕೂಡ ದ್ವಿತೀಯ ಸುತ್ತಿನ ಸ್ಪರ್ಧೆಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮುಕುಂದ್ ಅವರು ಅಮೆರಿಕಾ ಆಟಗಾರ ಕಾಲಿನ್ ಆಲ್ಟಮಿರಾನೋ ಅವರನ್ನು 7-6(6), 6-3ರ ಅಂತರದಿಂದ ಹಿಮ್ಮೆಟ್ಟಿಸಿದರು.
ಮತ್ತೊಂದು ಪಂದ್ಯದಲ್ಲಿ ಸಾಕೇತ್ ಮೈನೇನಿ ಅವರು ಭಾರತದವರೇ ಆದ 18ರ ಹರೆಯದ ಆದಿಲ್ ಕಲ್ಯಾಣ್ಪುರ್ ಅವರನ್ನು 6-3, 7-6(3) ಅಂತರದಿಂದ ಕೆಡವಿ ಮುನ್ನಡೆ ಸಾಧಿಸಿದರು. ಚಾಂಪಿಯನ್ ಸುಮಿತ್ ನಗಾಲ್ ಅವರೂ ಈಗಾಗಲೇ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.