ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X
For Quick Alerts
ALLOW NOTIFICATIONS  
For Daily Alerts

ಬೆಂಗಳೂರು ಓಪನ್ 2018: ಪ್ರಜ್ಞೇಶ್ ಗುಣೇಶ್ವರನ್ ಕ್ವಾರ್ಟರ್ ಫೈನಲ್‌ಗೆ ಲಗ್ಗೆ

Bengaluru Open 2018: Prajnesh Gunneswaran enters second round

ಬೆಂಗಳೂರು, ನವೆಂಬರ್ 14: ಆಲ್‌ ಇಂಡಿಯಾ ಟೆನಿಸ್ ಅಸೋಸಿಯೇಷನ್ ಶ್ರೇಯಾಂಕದಲ್ಲಿ 4ನೇ ಸ್ಥಾನದಲ್ಲಿರುವ ಪ್ರಜ್ಞೇಶ್ ಗುಣೇಶ್ವರನ್ ಅವರು ಬೆಂಗಳೂರು ಓಪನ್ ಟೆನಿಸ್ ಟೂರ್ನಿಯಲ್ಲಿ ಕ್ವಾರ್ಟರ್ ಫೈನಲ್ ಗೆ ಲಗ್ಗೆಯಿಟ್ಟಿದ್ದಾರೆ. ದ್ವಿತೀಯ ಸುತ್ತಿನಲ್ಲಿ ಪ್ರಜ್ಞೇಶ್, ಸೆಬಾಸ್ಟಿಯನ್ ಫ್ಯಾನ್ಸೆಲೊ ಸೋಲಿಸಿ ಮುನ್ನಡೆ ಸಾಧಿಸಿದರು.

ಬೌಲಿಂಗ್ ವೇಳೆ ರಕ್ತವಾಂತಿ: ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್ ಹೇಸ್ಟಿಂಗ್ಸ್ಬೌಲಿಂಗ್ ವೇಳೆ ರಕ್ತವಾಂತಿ: ಕ್ರಿಕೆಟ್‌ಗೆ ವಿದಾಯ ಹೇಳಿದ ಜಾನ್ ಹೇಸ್ಟಿಂಗ್ಸ್

ಬುಧವಾರ (ನವೆಂಬರ್ 14) ನಡೆದ ಪುರುಷರ ಸಿಂಗಲ್ಸ್ ಪಂದ್ಯದಲ್ಲಿ ಗುಣೇಶ್ವರನ್ ಅದ್ಭುತ ಆಟ ಪ್ರದರ್ಶಿಸಿದರು. ಮೊದಲ ಸೆಟ್ ಸೋತರೂ ಕೂಡ ಅಂತಿಮವಾಗಿ 4-6, 6-4, 7-5ರ ಅಂತರದಿಂದ ಜರ್ಮನ್ ಆಟಗಾರ ಸೆಬಾಸ್ಟಿಯನ್ ಫ್ಯಾನ್ಸೆಲೊ ಅವರನ್ನು ಕೆಡವಿ ಮುನ್ನಡೆ ಗಿಟ್ಟಿಸಿಕೊಂಡರು.

ಇದಕ್ಕೂ ಮುನ್ನ ಮಂಗಳವಾರ (ನವೆಂಬರ್ 13) ನಡೆದ ಪಂದ್ಯದಲ್ಲಿ ವಿಶ್ವ ನಂ.144ನೇ ಆಟಗಾರ ಪ್ರಜ್ಞೇಶ್, ವಿಶ್ವ ನಂ. 263ನೇ ಆಟಗಾರ ರಷ್ಯಾದ ಇವಾನ್ ನೆಡೆಲ್ಕೊ ಅವರನ್ನು 6-2, 6-2ರ ನೇರ ಸೆಟ್ ನಿಂದ ಮಣಿಸಿ ಮುನ್ನಡೆ ಸಾಧಿಸಿದ್ದರು.

ಕಾಶ್ಮೀರವಂತೆ, ಕಾಶ್ಮೀರ, ಮೊದ್ಲು ಪಾಕಿಸ್ತಾನ ಉಳಿಸಿಕೊಳ್ಳಿ: ಶಹೀದ್ ಅಫ್ರಿದಿ ಕಿವಿಮಾತುಕಾಶ್ಮೀರವಂತೆ, ಕಾಶ್ಮೀರ, ಮೊದ್ಲು ಪಾಕಿಸ್ತಾನ ಉಳಿಸಿಕೊಳ್ಳಿ: ಶಹೀದ್ ಅಫ್ರಿದಿ ಕಿವಿಮಾತು

ಭಾರತದ ಮತ್ತೊಬ್ಬ ಆಟಗಾರ ಶಶಿಕುಮಾರ್ ಮುಕುಂದ್ ಕೂಡ ದ್ವಿತೀಯ ಸುತ್ತಿನ ಸ್ಪರ್ಧೆಗೆ ಅವಕಾಶ ಗಿಟ್ಟಿಸಿಕೊಂಡಿದ್ದಾರೆ. ಮುಕುಂದ್ ಅವರು ಅಮೆರಿಕಾ ಆಟಗಾರ ಕಾಲಿನ್ ಆಲ್ಟಮಿರಾನೋ ಅವರನ್ನು 7-6(6), 6-3ರ ಅಂತರದಿಂದ ಹಿಮ್ಮೆಟ್ಟಿಸಿದರು.

ಮತ್ತೊಂದು ಪಂದ್ಯದಲ್ಲಿ ಸಾಕೇತ್ ಮೈನೇನಿ ಅವರು ಭಾರತದವರೇ ಆದ 18ರ ಹರೆಯದ ಆದಿಲ್ ಕಲ್ಯಾಣ್‌ಪುರ್ ಅವರನ್ನು 6-3, 7-6(3) ಅಂತರದಿಂದ ಕೆಡವಿ ಮುನ್ನಡೆ ಸಾಧಿಸಿದರು. ಚಾಂಪಿಯನ್ ಸುಮಿತ್ ನಗಾಲ್ ಅವರೂ ಈಗಾಗಲೇ ದ್ವಿತೀಯ ಸುತ್ತಿಗೆ ಪ್ರವೇಶಿಸಿದ್ದಾರೆ.

Story first published: Wednesday, November 14, 2018, 18:42 [IST]
Other articles published on Nov 14, 2018
POLLS
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Yes No
Settings X