ದಿನೇಶ್ ಕಾರ್ತಿಕ್
ದಿನೇಶ್ ಕಾರ್ತಿಕ್ 37ನೇ ವಯಸ್ಸಿನಲ್ಲಿ ಫಿನಿಶರ್ ಪಾತ್ರದಲ್ಲಿ ಭಾರತ ತಂಡಕ್ಕೆ ಮರಳಿರುವ ಆಟಗಾರ. ಅದ್ಭುತ ಪ್ರದರ್ಶನ ನೀಡಬಲ್ಲ ಕಾರ್ತಿಕ್ ಕೊನೆಯ ಎರಡು ಓವರ್ಗಳಲ್ಲಿ ದೊಡ್ಡ ಮೊತ್ತವನ್ನು ಗಳಿಸುವ ಮೂಲಕ ಪಂದ್ಯದಲ್ಲಿ ಪ್ರಭಾವ ಬೀರಲು ಸಮರ್ಥರಾಗಿದ್ದಾರೆ. ಇತ್ತೀಚಿನ ದಿನಗಳಲ್ಲಿ ತಮ್ಮ ಫಿನಿಶಿಂಗ್ ಪರಾಕ್ರಮವನ್ನು ಮುಂದುವರೆಸಿರುವ ಕಾರ್ತಿಕ್ ಅವರನ್ನು ಭಾರತವು ಕಡಿಮೆ ಬಳಸಿಕೊಂಡಿತು.
ಕಾರ್ತಿಕ್ಗಿಂತ ಮೊದಲು ರಿಷಬ್ ಪಂತ್ ಮತ್ತು ದೀಪಕ್ ಹೂಡಾ ಅವರನ್ನು ಭಾರತ ಪರಿಗಣಿಸಿದೆ. ಕಾರ್ತಿಕ್ ಗ್ರೂಪ್ ಹಂತದಲ್ಲಿ ಪಾಕಿಸ್ತಾನ ವಿರುದ್ಧ ಆಡಿದ್ದರು. ಪಂದ್ಯವನ್ನು ಭಾರತ ಗೆದ್ದುಕೊಂಡಿತು. ಆದರೆ ಭಾರತ ಸೂಪರ್ ಫೋರ್ನಲ್ಲಿ ಪಾಕಿಸ್ತಾನ ಮತ್ತು ಶ್ರೀಲಂಕಾವನ್ನು ಆಡಿದಾಗ, ಕಾರ್ತಿಕ್ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆದಿರಲಿಲ್ಲ. ಈ ಎರಡೂ ಪಂದ್ಯಗಳಲ್ಲಿ ಭಾರತ ಸೋತಿತು. ಕಾರ್ತಿಕ್ ಒತ್ತಡದಲ್ಲಿ ಬ್ಯಾಟಿಂಗ್ ಮತ್ತು ರನ್ ಗಳಿಸಲು ಸಮರ್ಥರಾಗಿದ್ದರೂ ಸಹ, ಅವರನ್ನ ಪ್ರಮುಖ ಪಂದ್ಯಗಳಲ್ಲಿ ಭಾರತ ಕಡೆಗಣಿಸಿ ಎಡವಟ್ಟು ಮಾಡಿದೆ.
24,000 ರನ್ ಪೂರೈಸಿದ ವಿರಾಟ್ ಕೊಹ್ಲಿ: ಈ ಸಾಧನೆ ಮಾಡಿದ ವಿಶ್ವದ 7ನೇ ಬ್ಯಾಟರ್
ಅಕ್ಷರ್ ಪಟೇಲ್
ಅಕ್ಷರ್ ಪಟೇಲ್ ಭಾರತದ ಪ್ರಮುಖ ಸ್ಪಿನ್ ಆಲ್ ರೌಂಡರ್. ರವೀಂದ್ರ ಜಡೇಜಾ ಗಾಯಗೊಂಡಾಗ, ಭಾರತವು ಅಕ್ಷರ್ ಪಟೇಲ್ರನ್ನು ಪರಿಗಣಿಸಬೇಕಿತ್ತು. ಆದರೆ ಭಾರತವು ಅಕ್ಷರ್ ಅವರನ್ನು ತಿರಸ್ಕರಿಸಿತು ಮತ್ತು ತಂಡವು ದೀಪಕ್ ಹೂಡಾ ಅವರನ್ನು ಪರಿಗಣಿಸಿತು. ಹೂಡಾ ಬೌಲಿಂಗ್ ಮಾಡದೆ ಕೇವಲ ಬ್ಯಾಟ್ಸ್ ಮನ್ ಆಗಿ ಮಾತ್ರ ಭಾರತ ಆಡಿದೆ. ಇದರಿಂದ ಹಿನ್ನಡೆಯಾಯಿತು.
ಎಡಗೈ ಬ್ಯಾಟ್ಸ್ಮನ್ಗಳು ಭಾರತ ಆಡುವ ಹನ್ನೊಂದರಲ್ಲಿ ಸ್ಥಾನ ಪಡೆಯುವಲ್ಲಿ ವಿಫಲರಾದರು. ಆದ್ದರಿಂದ ಭಾರತ ಅಕ್ಷರ್ ಪಟೇಲ್ರನ್ನ ಆಡಿಸಬೇಕಿತ್ತು. ಅಕ್ಷರ್ ಪಟೇಲ್ ಎಡಗೈ ಸ್ಪಿನ್ನರ್ ಆಗಿಯೂ ತಂಡಕ್ಕೆ ಉಪಯುಕ್ತವಾಗಿದ್ದರು. ಆದರೆ ಭಾರತ ಅವರನ್ನು ಕಡೆಗಣಿಸುವ ನಿಲುವನ್ನು ಅನುಸರಿಸಿದೆ. ಇದರಿಂದ ತಂಡಕ್ಕೆ ಹಿನ್ನಡೆಯಾಯಿತು.
Asia Cup 2022: ನಾಯಕತ್ವವಲ್ಲ, ಇದು ಭಾರತ ತಂಡದ ದೊಡ್ಡ ಸಮಸ್ಯೆಯಾಗಿದೆ; ಆಕಾಶ್ ಚೋಪ್ರಾ
ದೀಪಕ್ ಚಹರ್
ದುಬೈನ ಪಿಚ್ನಲ್ಲಿ ಭಾರತಕ್ಕೆ ವೇಗಿಗಳ ಅಗತ್ಯವಿತ್ತು. ಜಸ್ಪ್ರೀತ್ ಬುಮ್ರಾ ಮತ್ತು ಹರ್ಷಲ್ ಪಟೇಲ್ ಗಾಯದ ಕಾರಣದಿಂದ ಹೊರಗುಳಿದಿದ್ದು, ಭಾರತೀಯ ಲೈನ್ ಅಪ್ ಯಾವುದೇ ಉತ್ತಮ ವೇಗಿಗಳಿಲ್ಲ. ಭುವನೇಶ್ವರ್ ಕುಮಾರ್ ಜತೆ ಅನನುಭವಿ ವೇಗಿಗಳಿದ್ದರು. ಭುವಿ ಅವರೊಂದಿಗೆ ಅರ್ಷದೀಪ್ ಸಿಂಗ್ ಮತ್ತು ಅವೇಶ್ ಖಾನ್ ಇದ್ದರು.
ಇದರಲ್ಲಿ ಅವೇಶ್ ಖಾನ್ ಅವರ ಕಳಪೆ ಫಾರ್ಮ್ನಿಂದಾಗಿ ಆಡುವ 11 ರಿಂದ ಕೈಬಿಡಲಾಯಿತು. ಹಾರ್ದಿಕ್ ಪಾಂಡ್ಯ ಅವರನ್ನು ಮೂರನೇ ವೇಗಿ ಎಂದು ಭಾರತ ಪರಿಗಣಿಸಿದೆ. ದೀಪಕ್ ಚಹರ್ ಅವರಂತಹ ಉತ್ತಮ ವೇಗಿ ಜೊತೆಗಿದ್ದರೂ ಭಾರತ ಪರಿಗಣಿಸಲಿಲ್ಲ. ಪವರ್ಪ್ಲೇ ಓವರ್ಗಳಲ್ಲಿ ವಿಕೆಟ್ ಪಡೆಯುವ ಸಾಮರ್ಥ್ಯ ಹೊಂದಿರುವ ಚಹಾರ್ ಅವರನ್ನು ಭಾರತ ಪರಿಗಣಿಸದೇ ಇದ್ದಿದ್ದು ದೊಡ್ಡ ಹಿನ್ನಡೆ ಎಂದೇ ಹೇಳಬಹುದು.