|
ಸಾಮಾಜಿಕ ಜಾಲ ತಾಣಗಳಲ್ಲಿ ಆರ್ ಸಿಬಿ
ಆರ್ ಸಿಬಿ ಸೋಲಲಿ, ಗೆಲ್ಲಲಿ ಅಭಿಮಾನಿಗಳು ತಂಡವನ್ನು ಕೈ ಬಿಟ್ಟಿಲ್ಲ, ಮೊಹಮ್ಮದ್ ಸಿರಾಜ್, ಯಜುವೇಂದ್ರ ಚಾಹಲ್ ಬೌಲಿಂಗ್ ಬಗ್ಗೆ ಹೊಗಳಿದ್ದಾರೆ. ಮುಂದಿನ ಸಲ ಕಪ್ ಗೆಲ್ಲುವ ಭರವಸೆ ಇಟ್ಟುಕೊಳ್ಳಿ ಎಂದು ಕೊಹ್ಲಿಗೆ ಹೇಳಿದ್ದಾರೆ. ಈ ನಡುವೆ ಐಪಿಎಲ್ ಗೂ ಮುನ್ನ ಕೊಹ್ಲಿ ಏನಾದರೂ ರಾಹುಲ್ ಗಾಂಧಿನಾ ಮೀಟ್ ಮಾಡಿದ್ನಾ, ಹೀಗೆ ಸರಣಿ ಸೋಲು ಆರ್ ಸಿಬಿ ತಂಡ ಇಷ್ಟೊಂದು ಕಳಪೆಯಾಗಿರಲಿಲ್ಲ
|
ಈ ಸಲ ಕಪ್ ನಮ್ದೇ ಎನ್ನುವವರಿಗೆ ಶ್ರದ್ಧಾಂಜಲಿ
ಆರ್ ಸಿಬಿ ವಿರುದ್ಧ ಹೈದರಾಬಾದಿಗೆ 5 ರನ್ ಗಳ ಜಯ, ಈ ಸಲ ಕಪ್ ನಮ್ದೇ ಎನ್ನುವವರಿಗೆ ಶ್ರದ್ಧಾಂಜಲಿ ಸಲ್ಲಿಸಿ ಮೌನಾಚರಣೆ ಮಾಡೋಣ ಎನ್ನುವ ಟ್ವೀಟ್ ಗಳು ಬಂದಿವೆ.
|
ಬಾಲಕಿ ಈಗ ಪ್ರೌಢಾವಸ್ಥೆಗೆ ಬಂದರೂ ಆರ್ ಸಿಬಿ ಗೆದ್ದಿಲ್ಲ
ಆರ್ ಸಿಬಿ ಫ್ಯಾನ್ ಆಗುವುದಕ್ಕಿಂತ ದೊಡ್ಡ ಕಷ್ಟದ ಕೆಲಸ ಮತ್ತೊಂದಿಲ್ಲ. 8ನೇ ವಯಸ್ಸಿನಿಂದ ಆರ್ ಸಿಬಿ ಬೆಂಬಲಿಸುತ್ತಾ ಬಂದಿದ್ದೇನೆ. ಈಗ 19 ಆದರೂ ಆರ್ ಸಿಬಿ ಮುಡಿಗೆ ಕಪ್ ಸಿಗಿಸಲು ಆಗುತ್ತಿಲ್ಲ
|
ಆರ್ ಸಿಬಿ ಅಭಿಮಾನಿಗಳ ತಾಳ್ಮೆ
ಆರ್ ಸಿಬಿ ಅಭಿಮಾನಿಗಳ ತಾಳ್ಮೆ ಎಷ್ಟರಮಟ್ಟಿಗೆ ಇದೆ ಎಂಬುದನ್ನು ಮಿ. ಬೀನ್ ಚಿತ್ರಗಳ ಮೂಲಕ ತೋರಿಸಲಾಗಿದೆ.
|
ಆರ್ ಸಿಬಿಗೆ ಹೈದರಾಬಾದ್ ಯಾವತ್ತಿಗೂ ಶತ್ರು
ಆರ್ ಸಿಬಿಗೆ ಹೈದರಾಬಾದ್ ಯಾವತ್ತಿಗೂ ಶತ್ರು, 2015ರಲ್ಲಿ ಗ್ರೂಪ್ ಹಂತದಲ್ಲಿ, 2016ರಲ್ಲಿ ಫೈನಲ್ಸ್ ನಲ್ಲಿ, 2018ರಲ್ಲಿ ಕೂಡಾ ಆರ್ ಸಿಬಿ ಮುಳುಗಿಸಿ ಸೂರ್ಯ ಮೇಲಕ್ಕೇರಿದೆ.
|
ಭುವನೇಶ್ವರ್ ಕುಮಾರ್ ಗೆ ಬಹುಪರಾಕ್
ಭುವನೇಶ್ವರ್ ಕುಮಾರ್ ಗೆ ಬಹುಪರಾಕ್, ಧೋನಿ ಅವರು ಮ್ಯಾಚ್ ಫಿನಿಷರ್ ಇದ್ದಂತೆ, ಭುವಿ ಅವರು ಕೊನೆ ಓವರ್ ಎಸೆಯುವುದರಲ್ಲಿ ಸ್ಪೆಷಲಿಸ್ಟ್.
|
ಕಡಿಮೆ ಮೊತ್ತ ಡಿಫೆಂಡ್ ಹೈದರಾಬಾದ್
ಕಡಿಮೆ ಮೊತ್ತ ಡಿಫೆಂಡ್ ಮಾಡುವಲ್ಲಿ ಹೈದರಾಬಾದ್ ಎತ್ತಿದ ಕೈ. ನಾಲ್ಕು ಬಾರಿ ಇದನ್ನು ಸಾಧಿಸಿದೆ. ಈ ಬಾರಿ ಕೇನ್ ವಿಲಿಯಮ್ಸನ್ ಅವರ ನಾಯಕತ್ವಕ್ಕೆ ಜೈ ಎನ್ನಬೇಕು.