ಯಾರೂ ನನ್ನನ್ನು ಬೆಂಬಲಿಸಲಿಲ್ಲ
"ಮೊದಲ ಮೂರು ವರ್ಷಗಳಲ್ಲಿ ಆರ್ಸಿಬಿ ಫ್ರಾಂಚೈಸಿ ನನಗೆ ಏನು ಅವಕಾಶಗಳನ್ನು ನೀಡಿದೆ ಮತ್ತು ಅದು ಅತ್ಯಂತ ವಿಶೇಷವಾದ ವಿಷಯವಾಗಿದೆ. ಏಕೆಂದರೆ ನಾನು ಹೇಳಿದಂತೆ ಅನೇಕ ತಂಡಗಳಿಗೆ ಅವಕಾಶವಿತ್ತು, ಆದರೆ ಅವರು ನನ್ನನ್ನು ಬೆಂಬಲಿಸಲಿಲ್ಲ, ಅವರು ನನ್ನನ್ನು ನಂಬಲಿಲ್ಲ," ಎಂದು ಸ್ಟಾರ್ ಸ್ಪೋರ್ಟ್ಸ್ನ ಆರ್ಸಿಬಿಯ ಫ್ರಾಂಚೈಸಿ ಶೋನಲ್ಲಿ ವಿರಾಟ್ ಕೊಹ್ಲಿ ಮನಬಿಚ್ಚಿ ಮಾತನಾಡಿದರು.
2008ರಲ್ಲಿ ಡೆಲ್ಲಿ ಡೇರ್ಡೆವಿಲ್ಸ್ (ಈಗಿನ ಡೆಲ್ಲಿ ಕ್ಯಾಪಿಟಲ್ಸ್)ನಿಂದ ಭಾರತದ ಈ U19 ತಾರೆಯನ್ನು ಆಯ್ಕೆ ಮಾಡುವ ಮೊದಲ ಅವಕಾಶ ಹೊಂದಿತ್ತು. ಆದರೆ ಅವರ ಆಯ್ಕೆ ಆಗಿದ್ದು, ಎಡಗೈ ವೇಗಿ ಪ್ರದೀಪ್ ಸಾಂಗ್ವಾನ್. ಕೆಲವೇ ತಿಂಗಳುಗಳ ಹಿಂದೆ ದಕ್ಷಿಣ ಆಫ್ರಿಕಾವನ್ನು ಸೋಲಿಸಿ ಎರಡನೇ ಬಾರಿಗೆ U19 ವಿಶ್ವಕಪ್ ಎತ್ತಿಹಿಡಿಯಲು ಕಾರಣರಾದ ಸ್ಥಳೀಯ ಹುಡುಗ ಮತ್ತು ತಂಡದ ನಾಯಕ ಕೊಹ್ಲಿ ಡೆಲ್ಲಿ ಡೇರ್ಡೆವಿಲ್ಸ್ ಆಯ್ಕೆ ಆಗಿರಲಿಲ್ಲ.
ಎಂದೆಂದಿಗೂ ಆರ್ಸಿಬಿ ಆಟಗಾರನಾಗಿ ಉಳಿಯುತ್ತೇನೆ
ನಂತರ ಯುವ ಆಟಗಾರನಾಗಿದ್ದ ವಿರಾಟ್ ಕೊಹ್ಲಿಯನ್ನು ಆರ್ಸಿಬಿ ಆಯ್ಕೆ ಮಾಡಿತು ಮತ್ತು ಅಂದಿನಿಂದ ಬಲಗೈ ಬ್ಯಾಟ್ಸ್ಮನ್ ದಾಖಲೆಯ 217 ಐಪಿಎಲ್ ಪಂದ್ಯಗಳಲ್ಲಿ ಒಂದೇ ಫ್ರಾಂಚೈಸಿಯನ್ನು ಪ್ರತಿನಿಧಿಸಿದ್ದಾರೆ, ಐಪಿಎಲ್ನಲ್ಲಿ 6469 ರನ್ ಗಳಿಸಿದ್ದು, ಇದು ಒಂದೇ ತಂಡದ ಪರವಾಗಿ ಯಾವುದೇ ಆಟಗಾರ ಮಾಡದ ಸಾಧನೆ ಮಾಡಿದ್ದಾರೆ.
ಕೊಹ್ಲಿಯನ್ನು 2013ರಲ್ಲಿ ಆರ್ಸಿಬಿಯ ಪೂರ್ಣಾವಧಿಯ ನಾಯಕ ಎಂದು ನೇಮಿಸಲಾಯಿತು ಮತ್ತು ಐಪಿಎಲ್ 2021ರವರೆಗೆ ತಂಡವನ್ನು ಮುನ್ನಡೆಸಿದರು. ಕೊಹ್ಲಿ 140 ಪಂದ್ಯಗಳಲ್ಲಿ ಆರ್ಸಿಬಿಯನ್ನು ಮುನ್ನಡೆಸಿದ್ದು, ಅದರಲ್ಲಿ 66 ಗೆಲುವು ಮತ್ತು 70 ಸೋಲು ಕಂಡಿದ್ದಾರೆ. IPL 2022ರ ಮೆಗಾ ಹರಾಜಿಗೂ ಮೊದಲು ಮತ್ತು RCBಯಿಂದ ಉಳಿಸಿಕೊಳ್ಳುವ ಮುನ್ನ, ವಿರಾಟ್ ಕೊಹ್ಲಿ ತಾನು ಎಂದೆಂದಿಗೂ ಆರ್ಸಿಬಿ ಆಟಗಾರನಾಗಿ ಉಳಿಯುತ್ತೇನೆ ಎಂದು ಘೋಷಿಸಿದರು.
ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ
"ತುಂಬಾ ಪ್ರಾಮಾಣಿಕವಾಗಿ ಹೇಳಬೇಕೆಂದರೆ ನಾನು ನಾನು ನನ್ನ ನಿರ್ಧಾರದಿಂದ ಹಿಂದೆ ಸರಿಯುವುದಿಲ್ಲ ಎಂಬ ಬಗ್ಗೆ ಯೋಚಿಸಿದೆ. ಮೆಗಾ ಹರಾಜಿಗೆ ನನ್ನ ಹೆಸರು ಹಾಕಲು ನನ್ನನ್ನು ಹಲವು ಬಾರಿ ಸಂಪರ್ಕಿಸಲಾಗಿತ್ತು. ನಂತರ ನಾನು ಯೋಚಿಸಿದ್ದು, ಪ್ರತಿಯೊಬ್ಬರಿಗೂ ಅವರು ಬದುಕುವ X ಸಂಖ್ಯೆಯ ವರ್ಷ ಬದುಕುತ್ತಾರೆ ಮತ್ತು ನಂತರ ಸಾಯುತ್ತಾರೆ ಆದರೆ ಜೀವನ ಮುಂದುವರಿಯುತ್ತದೆ ಎಂದು''.
"ಟ್ರೋಫಿಗಳನ್ನು ಗೆದ್ದ ಅನೇಕ ಮಹಾನ್ ವ್ಯಕ್ತಿಗಳು ಇರುತ್ತಿದ್ದರು. 'ಓಹ್ ಅವನು ಐಪಿಎಲ್ ಚಾಂಪಿಯನ್ ಅಥವಾ ಅವನು ವಿಶ್ವಕಪ್ ಚಾಂಪಿಯನ್' ಎಂದು ಡ್ರೆಸ್ಸಿಂಗ್ ರೂಂನಲ್ಲಿ ಯಾರೂ ನಿಮ್ಮನ್ನು ಹಾಗೆ ಸಂಬೋಧಿಸುವುದಿಲ್ಲ. ನೀವು ಒಳ್ಳೆಯವರಾಗಿದ್ದರೆ, ಜನ ನಿಮ್ಮನ್ನು ಇಷ್ಟಪಡುತ್ತಾರೆ. ನೀವು ಕೆಟ್ಟವರಾಗಿದ್ದರೆ, ಅವರು ನಿಮ್ಮಿಂದ ದೂರವಿರುತ್ತಾರೆ ಮತ್ತು ಅಂತಿಮವಾಗಿ ಅದುವೇ ಜೀವನ,'' ಎಂದು ವಿರಾಟ್ ಕೊಹ್ಲಿ ಹೇಳಿದ್ದು, ಆರ್ಸಿಬಿ ಫ್ರಾಂಚೈಸಿಯೊಂದಿಗೆ ಆಳವಾದ ಬಾಂಧವ್ಯವನ್ನು ಹೊಂದಿರುವುದಾಗಿ ತಿಳಿಸಿದರು.
ಟ್ರೋಫಿ ಗೆಲ್ಲದ ಬಗ್ಗೆ ಯಾವುದೇ ವಿಷಾದವಿಲ್ಲ
"ನಾನು ನನ್ನ ಜೀವನವನ್ನು ಹೇಗೆ ಅನುಸರಿಸುತ್ತೇನೆ ಎಂಬುದಕ್ಕೆ ಆರ್ಸಿಬಿಯೊಂದಿಗಿನ ನಿಷ್ಠೆಯು ನನಗೆ ತುಂಬಾ ದೊಡ್ಡದಾಗಿದೆ. ಡ್ರೆಸ್ಸಿಂಗ್ ರೂಂನಲ್ಲಿರುವ ಐದು ಜನರು ಓಹ್ ಅಂತಿಮವಾಗಿ ನೀವು xyz ಪ್ರಾಂಚೈಸಿ ಜೊತೆ ಸೇರಿ ಐಪಿಎಲ್ ಅನ್ನು ಗೆಲ್ಲುತ್ತೀರಿ ಎಂದು ಹೇಳುತ್ತಾರೆ. ಇದನ್ನು ಕೇಳಿ ನೀವು ಐದು ನಿಮಿಷಗಳ ಕಾಲ ಚೆನ್ನಾಗಿರುತ್ತೀರಿ, ಆದರೆ ಆರನೇ ನಿಮಿಷದಲ್ಲಿ ನೀವು ಜೀವನದ ಇತರ ಕೆಲವು ಸಮಸ್ಯೆಗಳಿಂದ ದುಃಖಿತರಾಗಬಹುದು. ಹಾಗಾಗಿ ಇದು ನನಗೆ ಪ್ರಪಂಚದ ಅಂತ್ಯವಲ್ಲ,"ವೆಂದರು.
ಐಪಿಎಲ್ನಲ್ಲಿ 15 ವರ್ಷಗಳ ಕಾಲ ಆರ್ಸಿಬಿಯನ್ನು ಪ್ರತಿನಿಧಿಸಿದ್ದರೂ, ಟ್ರೋಫಿ ಮಾತ್ರ ವಿರಾಟ್ ಕೊಹ್ಲಿಯ ಕೈಯಿಂದ ದೂರ ಉಳಿದಿದೆ. ಆದರೆ ಶ್ರೇಷ್ಠ ಕ್ರಿಕೆಟಿಗನಿಗೆ ಅದರ ಬಗ್ಗೆ ಯಾವುದೇ ವಿಷಾದವಿರುವುದಿಲ್ಲ. ಪ್ರಾಮಾಣಿಕವಾಗಿ ಹೇಳುತ್ತೇನೆ, ನಾನು ಮತ್ತು ಅನುಷ್ಕಾ ಹಲವು ವಿಷಯಗಳ ಕುರಿತು ಚರ್ಚಿಸುವ ವೇಳೆ ಮೂರನೇ ವ್ಯಕ್ತಿಯ ಬಗ್ಗೆ ನಾನು ತಲೆಕೆಡಿಸಿಕೊಳ್ಳುವುದಿಲ್ಲ. ನನಗೆ ಬೇರೆ ಯಾವುದೂ ಇಲ್ಲ ಅಥವಾ ಯಾರ ಅಭಿಪ್ರಾಯವೂ ಮುಖ್ಯವಲ್ಲ ಎಂದು ಅವರು ಹೇಳಿದರು.