ಶಿವಶಕ್ತಿ ನಾರಾಯಣನ್ಗೂ ಇದೇ ಅನುಭವ
ಫುಟ್ಬಾಲ್ ತಾರೆ ಸುನಿಲ್ ಚೆಟ್ರಿಗೆ ಮಾತ್ರವಲ್ಲದೆ ಬೆಂಗಳೂರು ಎಫ್ಸಿಯ ಮತ್ತೋರ್ವ ಪ್ರಮುಖ ಆಟಗಾರ ಶಿವಶಕ್ತಿ ನಾರಾಯಣನ್ ಅವರಿಗೂ ಕೂಡ ಇದೇ ಅನುಭವವಾಗಿದೆ. ಪ್ರಶಸ್ತಿ ಸ್ವೀಕರಿಸುವ ವೇಳೆ ಫೋಟೋ ತೆಗೆಸಿಕೊಳ್ಳಲು ಪಶ್ಚಿಮ ಬಂಗಾಳ ಕ್ರೀಡಾ ಮತ್ತು ಯುವಜನ ಸಚಿವ ಅರೋಪ್ ಬಿಸ್ವಾಸ್ ಫುಟ್ಬಾಲ್ ಆಟಗಾರ ಶಿವಶಕ್ತಿಯವರನ್ನ ಪಕ್ಕಕ್ಕೆ ತಳ್ಳಿದ್ದಾರೆ.
ವಿಡಿಯೋ ಸದ್ಯ ವೈರಲ್ ಆಗಿದ್ದು, ಕ್ರೀಡಾಪಟುಗಳಿಗೆ ಸರಿಯಾಗಿ ಗೌರವ ನೀಡಲು ಬಾರದ ಅಧಿಕಾರಿಗಳು ಮತ್ತು ರಾಜಕಾರಣಿಗಳನ್ನು ತರಾಟೆಗೆ ತೆಗೆದುಕೊಂಡಿದ್ದಾರೆ ಇದು ನಾಚಿಕೆಗೇಡಿನ ಕೆಲಸ ಎಂದು ತಮ್ಮ ಆಕ್ರೋಶ ಹೊರಹಾಕಿದ್ದಾರೆ.
ಶಮಿ ಸ್ಥಾನದಲ್ಲಿ ಉಮೇಶ್ ಯಾದವ್ ಆಯ್ಕೆ: ಟೀಂ ಮ್ಯಾನೇಜ್ಮೆಂಟ್ ನಿರ್ಧಾರದ ಕುರಿತು ಆಕಾಶ್ ಚೋಪ್ರಾ ಪ್ರಶ್ನೆ
ಪ್ರಶಸ್ತಿ ತಾವೇ ಗೆದ್ದಿದ್ದೇವೆ ಎನ್ನುವಂತೆ ಫೋಸ್
ಮತ್ತೆ ಕೆಲವರು ಟ್ವಿಟರ್ ನಲ್ಲಿ ಈ ಬಗ್ಗೆ ಪ್ರತಿಕ್ರಿಯೆ ನೀಡಿ ಡುರಾಂಡ್ ಕಪ್ ಗೆದ್ದಿದ್ದಕ್ಕಾಗಿ ಇಮಗೆ ಅಭಿನಂದನೆಗಳು ರಾಜ್ಯಪಾಲ ಲಾ ಗಣೇಶನ್ ಅವರೇ ಎಂದು ವ್ಯಂಗ್ಯವಾಗಿ ತರಾಟೆಗೆ ತೆಗೆದುಕೊಂಡಿದ್ದಾರೆ.
ತಾವೇ ಕಪ್ ಗೆದ್ದಿದ್ದೇವೆ ಎನ್ನುವ ಮಟ್ಟಿಗೆ ಫೋಟೊಗೆ ಫೋಸ್ ಕೊಡುವ ಈ ರಾಜಕಾರಣಿಗಳಿಗೆ ಸ್ವಲ್ಪವಾದರೂ ಮರ್ಯಾದೆ ಇದೆಯಾ ಎಂದು ಟ್ವೀಟರ್ ಬಳಕೆದಾರರು ಹಿಗ್ಗಾ ಮುಗ್ಗಾ ಜಾಡಿಸಿದ್ದಾರೆ.
ಫುಟ್ಬಾಲ್ಗೆ ಸುನಿಲ್ ಚೆಟ್ರಿ ಕೊಡುಗೆ ಅಪಾರ
ಮೊದಲೇ ಭಾರತದಲ್ಲಿ ಕ್ರಿಕೆಟ್ ಜನಪ್ರಿಯತೆಯ ಅಲೆಯಲ್ಲಿ ಇತರೆ ಕ್ರೀಡೆಗಳಿಗೆ ಸೂಕ್ತವಾದ ಪ್ರೋತ್ಸಾಹ ದೊರೆಯುತ್ತಿಲ್ಲ ಎನ್ನುವ ಅಪವಾದವಿದೆ. ಅಂತಹುದರಲ್ಲಿ ಭಾರತದಲ್ಲಿ ಫುಟ್ಬಾಲ್ ಜನಪ್ರಿಯಗೊಳಿಸಲು, ಅಂತಾರಾಷ್ಟ್ರೀಯ ಮಟ್ಟದಲ್ಲಿ ಫುಟ್ಬಾಲ್ ಕ್ರೀಡೆಯಲ್ಲಿ ಭಾರತ ಗುರುತಿಸಿಕೊಳ್ಳುವಂತೆ ಮಾಡುವಲ್ಲಿ ಸುನಿಲ್ ಚೆಟ್ರಿ ಕೊಡುಗೆ ಅಪಾರವಾಗಿದೆ. ಅಂತಹ ಸಂದರ್ಭದಲ್ಲಿ ರಾಜಕಾರಣಿಗಳು, ಅಧಿಕಾರಿಗಳು ಇತರೆ ಕ್ರೀಡಾಪಟುಗಳನ್ನು ಹೀಗೆ ನಡೆಸಿಕೊಳ್ಳುವುದು ಎಷ್ಟರ ಮಟ್ಟಿಗೆ ಸರಿ ಎಂದು ಕೇಳುತ್ತಿದ್ದಾರೆ.
ಫುಟ್ಬಾಲ್ ದಂತಕಥೆಗೆ ಕೊಡುವ ಗೌರವ ಇದೇನಾ, ಕ್ಯಾಮೆರಾಗೆ ನೀವು ಪೋಸ್ ಕೊಡಲು ಅಂತಹ ಆಟಗಾರನ ಜೊತೆ ನಡೆದುಕೊಂಡ ರೀತಿ ಸರಿಯಲ್ಲ ಎಂದು ಹೇಳಿದ್ದಾರೆ.
ಚೊಚ್ಚಲ ಬಾರಿಗೆ ಚಾಂಪಿಯನ್ ಆದ ಬೆಂಗಳೂರು
ಕೋಲ್ಕತ್ತಾದ ಸಾಲ್ಟ್ ಲೇಕ್ ಸ್ಟೇಡಿಯಂನಲ್ಲಿ ಭಾನುವಾರ ನಡೆದ ಫೈನಲ್ ಪಂದ್ಯದಲ್ಲಿ ಬೆಂಗಳೂರು ಎಫ್ಸಿ 2-1 ಗೋಲುಗಳಿಂದ ಮುಂಬೈ ಸಿಟಿ ಎಫ್ಸಿಯನ್ನು ಸೋಲಿಸುವ ಮೂಲಕ ಇದೇ ಮೊದಲ ಬಾರಿಗೆ ಡುರಾಂಡ್ಕಪ್ ಜಯಿಸಿತು.
ಬೆಂಗಳೂರು ಎಫ್ಸಿ ಪರ ಶಿವಶಕ್ತಿ (10ನೇ ನಿಮಿಷ) ಮತ್ತು ಬ್ರೆಜಿಲ್ನ ಅಲನ್ ಕೋಸ್ಟಾ (61ನೇ ನಿ.) ಗೋಲು ಗಳಿಸಿದರೆ, ಮುಂಬೈ ಪರ ಅಪುಯಾ ಏಕೈಕ ಗೋಲು ಗಳಿಸಿದರು.