|
ಐಪಿಎಲ್ ಫ್ಯಾನ್ಸ್ ಗಳಲ್ಲಿ ವಿನಂತಿ
ಐಪಿಎಲ್ ಫ್ಯಾನ್ಸ್ ಗಳಲ್ಲಿ ವಿನಂತಿ, ವಿರಾಟ್ ಕೊಹ್ಲಿ ಒಬ್ಬ ಲೆಜೆಂಡ್, ಆರ್ ಸಿಬಿ ಸೋಲಿಗೆ ಕೊಹ್ಲಿ ಮಾತ್ರ ಹೊಣೆಯಲ್ಲ. ಫುಟ್ಬಾಲ್ ಜಗತ್ತಿನ ರೊನಾಲ್ಡೊ ಹಾಗೂ ಮೆಸ್ಸಿ ಕೂಡಾ ಇನ್ನೂ ವಿಶ್ವಕಪ್ ಗೆದ್ದಿಲ್ಲ. ತಾಳ್ಮೆ ಇರಲಿ, ಕೊಹ್ಲಿ ಟೀಂ ಇಂಡಿಯಾದ ನಾಯಕ ಎಂಬುದನ್ನು ಮರೆಯದಿರಿ.
|
ಕೊಹ್ಲಿ ವಿಕೆಟ್ ಕಿತ್ತ ಜಡೇಜ ಪ್ರತಿಕ್ರಿಯೆ
ವಿರಾಟ್ ಕೊಹ್ಲಿ ಅವರನ್ನು ಕ್ಲೀನ್ ಬೋಲ್ಡ್ ಮಾಡಿ ವಿಕೆಟ್ ಕಿತ್ತ ಬಳಿಕ ಚೆನ್ನೈ ತಂಡದ ಸ್ಪಿನ್ನರ್ ರವೀಂದ್ರ ಜಡೇಜ ಅವರು ನೀಡಿದ ಪ್ರತಿಕ್ರಿಯೆ ಬಗ್ಗೆ ಸಾಕಷ್ಟು ಚರ್ಚೆಗಳಾಗುತ್ತಿವೆ. ಜಡೇಜ ಅವರು ಯಾಕೆ ವಿಕೆಟ್ ಕಿತ್ತ ಬಳಿಕ ಸಂಭ್ರಮಿಸಲಿಲ್ಲ ಎಂಬ ಪ್ರಶ್ನೆ ಎದ್ದಿದೆ. ಅದಕ್ಕೆ ಉತ್ತರ ಇಲ್ಲಿದೆ. ಈಗ ಭಾರತ ತಂಡದ ನಾಯಕ ಧೋನಿಯಲ್ಲ, ಕೊಹ್ಲಿ ಎಂದು ಜಡೇಜಗೆ ಅರಿವಾಗಿದೆ.
|
ಮೈದಾನದಲ್ಲಿ ಮೋದಿ ಮೋದಿ ಮೋದಿ
ಪಂದ್ಯದ ವೇಳೆ ಮೋದಿ, ಮೋದಿ ಮೋದಿ ಎಂದು ಕೂಗುತ್ತಿದ್ದಾರೆ. ಆರ್ ಸಿಬಿ ಸೋಲಿಗೆ ಸಿದ್ದರಾಮಯ್ಯ ಸರ್ಕಾರವೆ ಕಾರಣ. ಬಿಜೆಪಿ ಅಧಿಕಾರಕ್ಕೆ ಬಂದರೆ ಆರ್ ಸಿಬಿಗೆ ಗೆಲುವು ಗ್ಯಾರಂಟಿ.
|
ಬಾಹುಬಲಿಯನ್ನು ಕಟ್ಟಪ್ಪ ಕೊಂದ ಹಾಗೆ
ಬಾಹುಬಲಿಯನ್ನು ಕಟ್ಟಪ್ಪ ಕೊಂದ ಹಾಗೆ, ಪ್ರತಿ ವರ್ಷ ಆರ್ ಸಿಬಿ ಫ್ಯಾನ್ಸ್ ಗಳನ್ನು ಆರ್ ಸಿಬಿ ಕೊಲ್ಲುತ್ತಿದೆ. ಚಿತ್ರವೇ ಎಲ್ಲವನ್ನು ಹೇಳುತ್ತಿದೆ
|
ಈ ಬಾರಿ ಆರ್ ಸಿಬಿ ಗೆಲ್ಲಬಹುದೇ?
ಈ ಬಾರಿ ಆರ್ ಸಿಬಿ ಗೆಲ್ಲಬಹುದೇ? ಎಂಬ ಪ್ರಶ್ನೆಗೆ ಉತ್ತರ ಹೀಗಿದೆ.