ಆಟಗಾರರ ಪಟ್ಟಿ ಸಲ್ಲಿಸಲು ನವೆಂಬರ್ 15 ಕೊನೆ ದಿನ
10 ಐಪಿಎಲ್ ಫ್ರಾಂಚೈಸಿಗಳು ತಾವು ಉಳಿಸಿಕೊಂಡಿರುವ ಆಟಗಾರರ ಪಟ್ಟಿಯನ್ನು ನವೆಂಬರ್ 15 ರೊಳಗೆ ಸಲ್ಲಿಸುವಂತೆ ಕೇಳಲಾಗಿದೆ ಎಂದು ಫ್ರಾಂಚೈಸಿಯ ಹಿರಿಯ ಅಧಿಕಾರಿಯೊಬ್ಬರು ಭಾನುವಾರ ತಿಳಿಸಿದ್ದಾರೆ.
ಐಪಿಎಲ್ನ ಮುಂದಿನ ಆವೃತ್ತಿಗೆ ಬಿಸಿಸಿಐ ಬಾಲ್ ರೋಲಿಂಗ್ ಅನ್ನು ನಿಗದಿಪಡಿಸಿದೆ ಮತ್ತು ಮಿನಿ ಹರಾಜು ಡಿಸೆಂಬರ್ ಮೂರನೇ ವಾರದಲ್ಲಿ ಬೆಂಗಳೂರಿನಲ್ಲಿ ನಡೆಯಲಿದೆ ಎಂದು ತಿಳಿದುಬಂದಿದೆ.
ಮಂಗಳವಾರದ ಮಂಡಳಿಯ ಎಜಿಎಂ ನಂತರ ಬಿಸಿಸಿಐ ಹರಾಜಿನ ಅಧಿಕೃತ ದಿನಾಂಕವನ್ನು ಬಿಡುಗಡೆ ಮಾಡಲಿದೆ. ಆದರೆ ಡಿಸೆಂಬರ್ 16 ರಂದು ಬೆಂಗಳೂರಿನಲ್ಲಿ ಹರಾಜು ನಡೆಯಲಿದೆ ಹೇಳಲಾಗಿದೆ.
T20 World Cup: ದುರ್ಬಲ ತಂಡಗಳು ಬಲಿಷ್ಠ ತಂಡಗಳಿಗೆ ಶಾಕ್ ನೀಡಿದ ಐದು ಪ್ರಮುಖ ಪಂದ್ಯಗಳು ಇವು
ವೇತನದ ಮಿತಿ 5 ಕೋಟಿ ರುಪಾಯಿ ಹೆಚ್ಚಳ
ವೇತನದ ಮಿತಿಯನ್ನು 90 ಕೋಟಿ ರುಪಾಯಿಗಳಿಂದ 95 ಕೋಟಿ ರುಪಾಯಿಗೆ ಹೆಚ್ಚಿಸಲಾಗಿದೆ. ಮಿನಿ-ಹರಾಜಿನಲ್ಲಿ, ಫ್ರಾಂಚೈಸಿಗಳು ಕಳೆದ ಮೆಗಾ ಹರಾಜಿನ ಸಮಯದಲ್ಲಿ ಅವರು ಖರ್ಚು ಮಾಡಿದ ನಂತರ ಉಳಿದಿರುವ ಬಾಕಿ ಮೊತ್ತದೊಂದಿಗೆ ಆಟಗಾರರನ್ನು ಬಿಡ್ ಮಾಡಬಹುದು ಮತ್ತು ಆಟಗಾರರನ್ನು ಬಿಡುಗಡೆ ಮಾಡಿದ ನಂತರ ಉಳಿಯುವ ಮೊತ್ತವನ್ನು ಹರಾಜಿಗೆ ವಿನಿಯೋಗಿಸಬಹುದು.
ಸಿಎಸ್ಕೆ ಜಡೇಜಾ ಅವರನ್ನು ಬಿಡುಗಡೆ ಮಾಡಲು ನಿರ್ಧರಿಸಿದರೆ ಅವರು ಮಿನಿ ಹರಾಜಿನಲ್ಲಿ ಖರ್ಚು ಮಾಡಲು 19.45 ಕೋಟಿ ರುಪಾಯಿ ಹೊಂದಿರುತ್ತಾರೆ ಮತ್ತು ಅವರ ಆಯ್ಕೆಯ ಆಟಗಾರರನ್ನು ಖರೀದಿಸಬಹುದು.
ಸಿಎಸ್ಕೆ ಮೇಲೆ ಜಡೇಜಾಗೆ ಮುನಿಸು
ಜಡೇಜಾ 2012 ರಲ್ಲಿ ಸಿಎಸ್ಕೆ ತಂಡವನ್ನು ಸೇರಿದರು, ಆದರೆ ಈಗ ಸಿಎಸ್ಕೆಯಿಂದ ಹೊರಗುಳಿದಿದ್ದಾರೆ. ಐಪಿಎಲ್ 2022 ರ ಮಧ್ಯದಲ್ಲಿ ಅವರನ್ನು ನಾಯಕತ್ವದಿಂದ ನಿರ್ದಾಕ್ಷಿಣ್ಯವಾಗಿ ತೆಗೆದುಹಾಕಲಾಯಿತು ಮತ್ತು ಎಂಎಸ್ ಧೋನಿಯನ್ನು ನಾಯಕನಾಗಿ ಮತ್ತೆ ನೇಮಿಸಲಾಯಿತು. ಸಿಎಸ್ಕೆ ಕೇವಲ ನಾಲ್ಕು ಗೆಲುವಿನೊಂದಿಗೆ 9ನೇ ಸ್ಥಾನ ಗಳಿಸಿತು.
ಐಪಿಎಲ್ 2022 ರಿಂದ ಜಡೇಜಾ ಫ್ರಾಂಚೈಸಿಯೊಂದಿಗೆ ಸಂಪರ್ಕದಲ್ಲಿಲ್ಲ . ಅವರು ಸಿಎಸ್ಕೆಯೊಂದಿಗೆ ಮೂರು ವರ್ಷಗಳ ಒಪ್ಪಂದವನ್ನು ಹೊಂದಿದ್ದರೂ, ಸರಿಯಾಗಿ ನಡೆಸಿಕೊಳ್ಳದ ಕಾರಣ ಫ್ರಾಂಚೈಸಿಯೊಂದಿಗೆ ಅವರು ಅಸಮಾಧಾನಗೊಂಡಿದ್ದಾರೆ. ಜಡೇಜಾ ಈಗಾಗಲೇ ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ತಮ್ಮ ಸಿಎಸ್ಕೆ ದಿನಗಳ ಎಲ್ಲಾ ಫೋಟೋಗಳು ಮತ್ತು ವೀಡಿಯೊಗಳನ್ನು ಅಳಿಸಿದ್ದಾರೆ. ಅವರು ಸಿಎಸ್ಕೆಯನ್ನು ಸಹ ಅನ್ಫಾಲೋ ಮಾಡಿದ್ದಾರೆ.
ಸಿಎಸ್ಕೆ ತಂಡಕ್ಕೆ ಬರುವ ಸಾಧ್ಯತೆ ಕಡಿಮೆ
ಜಡೇಜಾ ಗಾಯಕ್ಕಾಗಿ ಎನ್ಸಿಎನಲ್ಲಿ ಪುನರ್ವಸತಿಗೆ ಒಳಗಾಗಿದ್ದರು. ಆದರೆ ಇನ್ನೂ ಸಿಎಸ್ಕೆಯೊಂದಿಗೆ ಒಪ್ಪಂದ ಮಾಡಿಕೊಂಡಿದ್ದರೂ ತನ್ನ ಗಾಯದ ಬಗ್ಗೆ ತಂಡಕ್ಕೆ ಏನನ್ನೂ ತಿಳಿಸಿಲ್ಲ.
ಜಡೇಜಾ ಅವರು ತಮ್ಮ ಸಾಮಾಜಿಕ ಮಾಧ್ಯಮ ಖಾತೆಗಳಿಂದ ಸಿಎಸ್ಕೆಗೆ ಸಂಬಂಧಿಸಿದ ಎಲ್ಲಾ ಪೋಸ್ಟ್ಗಳನ್ನು ಅಳಿಸಿದ್ದಾರೆ. ನಾಯಕ ಧೋನಿ ಅವರ ಜನ್ಮದಿನದಂದು ಶುಭ ಹಾರೈಸಲು ಸಿಎಸ್ಕೆ ಬಿಡುಗಡೆ ಮಾಡಿದ ವೀಡಿಯೊದಲ್ಲಿ ಕೂಡ ಜಡೇಕಾ ಇರಲಿಲ್ಲ.
"ಜಡೇಜಾ ಸಿಎಸ್ಕೆ ವರ್ತನೆಯಿಂದ ಅತೃಪ್ತಿ ಹೊಂದಿದ್ದಾರೆ ಮತ್ತು ತುಂಬಾ ಬೇಸರಗೊಂಡಿದ್ದಾರೆ ಎಂಬುದು ಸ್ಪಷ್ಟವಾಗಿದೆ. ಅವರು ಆಯ್ಕೆಗಳನ್ನು ಹುಡುಕುತ್ತಾರೆ, ಮುಂದಿನ ಬೆಳವಣಿಗೆಗಳು ಏನಾಗುತ್ತದೆ ನೋಡಬೇಕು" ಎಂದು ಜಡೇಜಾಗೆ ನಿಕಟವಾಗಿ ಕೆಲಸ ಮಾಡುವ ವ್ಯಕ್ತಿ ಹೇಳಿದ್ದಾರೆ.