ತಿಳಿಗೊಳಿಸಿದ ಅಂಪೈರ್ಗಳು
ಗೆಲುವಿಗಾಗಿ ತೀವ್ರ ಪೈಪೋಟಿಯನ್ನು ಎರಡೂ ತಂಡಗಳು ತೀವ್ರ ಪೈಪೋಟಿಯನ್ನು ನಡೆಸಿದ್ದವು. ಆದರೆ ಕಡೆಗೆ ಕರ್ನಾಟಕ ಈ ಪಂದ್ಯದಲ್ಲಿ ಗೆಲುವನ್ನು ಪಡೆದುಕೊಂಡಿತು. ಪಂದ್ಯ ಮುಕ್ತಾಯದ ಬಳಿಕ ಮುಖಾಮುಖಿಯಾದ ಕರ್ನಾಟಕ ನಾಯಕ ಕರುಣ್ ನಾಯರ್ ಹಾಗೂ ತಮಿಳುನಾಡು ತಂಡದ ಪ್ರಮುಖ ಆಟಗಾರ ದಿನೇಶ್ ಕಾರ್ತಿಕ್ ಮಧ್ಯೆ ಮಾತಿನ ಚಕಮಕಿ ನಡೆಯಿತು. ಈ ಸಂದರ್ಭದಲ್ಲಿ ಪಂದ್ಯದ ರೆಫ್ರಿ ಹಾಗೂ ಅಂಪೈರ್ಗಳು ಮಧ್ಯ ಪ್ರವೇಶಿಸಿ ಪರಿಸ್ಥಿತಿ ತಿಳಿಗೊಳಿಸುವ ಪ್ರಯತ್ನ ನಡೆಸಿದರು.
ಮತ್ತೊಮ್ಮೆ ಕಿತ್ತಾಡಿಕೊಂಡ ಆಟಗಾರರು;
ಇಷ್ಟಕ್ಕೇ ಇದು ಮುಗಿದು ಹೋಗಲಿಲ್ಲ. ಆ ಬಳಿಕ ಡ್ರೆಸ್ಸಿಂಗ್ ರೂಮ್ ಬಳಿ ಮತ್ತೊಮ್ಮೆ ಎರಡೂ ತಂಡಗಳ ಪ್ರಮುಖ ಆಟಗಾರರಾದ ಕರುಣ್ ನಾಯರ್ ಮತ್ತು ದಿನೇಶ್ ಕಾರ್ತಿಕ್ ಮುಖಾಮುಖಿಯಾದಾಗ ಮತ್ತೊಮ್ಮೆ ಮಾತಿನ ಚಕಮಕಿ ನಡೆದಿದೆ.ಕರ್ನಾಟಕ ತಂಡದ ಕೋಚ್ಗಳಾದ ಎಸ್ ಅರವಿಂದ್ ಮತ್ತು ಯೆರೇಗೌಡ ಇಬ್ಬರೂ ಆಟಗಾರರನ್ನು ಸಮಾದಾನ ಪಡಿಸಿದ್ದಾರೆ.
ಔಟ್ ನಿರಾಕರಿಸಿದ ಯೂಸುಫ್ ಪಠಾಣ್, ಸಿಟ್ಟಾದ ಅಜಿಂಕ್ಯ ರಹಾನೆ: ವೀಡಿಯೋ
ಇದೆಲ್ಲಾ ಸಾಮಾನ್ಯ ಎಂದ ತಮಿಳುನಾಡು ನಾಯಕ
ಬಳಿಕ ಮಾತನಾಡಿದ ತಮಿಳುನಾಡು ತಂಡದ ನಾಯಕ ವಿಜಯ್ ಶಂಕರ್ " ಕರ್ನಾಟಕ ಮತ್ತು ತಮಿಳನಾಡು ನಡುವಿನ ಪಂದ್ಯಗಳಲ್ಲಿ ಈ ರೀತಿ ಪೈಪೋಟಿಗಳು ನಡೆಯುತ್ತಲೇ ಇರುತ್ತದೆ. ಹೀಗಾಗದಿದ್ದಗಲೇ ನಮಗೆ ಆಶ್ಚರ್ಯವಾಗುತ್ತದೆ" ಎಂದು ಹೇಳುವ ಮೂಲಕ ಇದೊಂದು ತೀರಾ ಸಾಮಾನ್ಯ ಘಟನೆ ಎಂದು ಬಿಂಬಿಸುವ ಪ್ರಯತ್ನ ಮಾಡಿದ್ದಾರೆ.
ಕ್ರಮ ಕೈಗೊಳ್ಳುವ ಸಾಧ್ಯತೆ
ತೀವ್ರ ಪೈಪೋಟಿಯ ಪಂದ್ಯದ ಸಂದರ್ಭದಲ್ಲಿ ಮಾತಿನ ಚಕಮಕಿಗಳು ನಡೆಯುವುದು ಸಾಮಾನ್ಯ. ಇದು ಮಿತಿಮೀರಿದಾಗ ಅದಕ್ಕಾಗ ದಂಡವನ್ನೂ ತೆರಬೇಕಾಗುತ್ತದೆ. ಇದೇ ಪಂದ್ಯದಲ್ಲಿ ಮುರಳಿ ವಿಜಯ್ ಅವರು ಅಶಿಸ್ತಿನ ಕಾರಣಕ್ಕಾಗಿ ಪಂದ್ಯದ ಸಂಭಾವನೆಯ 10 ಶೇಕಡ ದಂಡಕ್ಕೆ ಒಳಗಾಗಿದ್ದಾರೆ. ಈ ಮಾತಿನ ಚಕಮಕಿಗಳನ್ನು ಮೈದಾನದಾಚೆ ಕೊಂಡೊಯ್ಯಲು ಕ್ರೀಡಾಳುಗಳು ಮುಂದಾಗುವುದು ತೀರಾ ಕಡಿಮೆ. ನಿನ್ನೆಯ ಪಂದ್ಯದಲ್ಲಿ ಇದು ನಡೆದುಹೋಗಿದೆ. ಇದಕ್ಕಾಗಿ ಆಟಗಾರರ ವಿರುದ್ಧ ಕಠಿಣ ಕ್ರಮಗಳನ್ನು ಕೈಗೊಂಡರೂ ಅಚ್ಚರಿಯಿಲ್ಲ.