ಬೆಂಗಳೂರು, ಜುಲೈ 25: ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ (ಕೆಎಸ್ ಸಿಎ) ಯ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ಶನಿವಾರ ಬೆಳಗ್ಗೆ ಆಟಗಾರರ ಹರಾಜು ಆರಂಭವಾಗಿದೆ. ಚಾರುಶರ್ಮ ಅವರು ಹರಾಜು ಪ್ರಕ್ರಿಯೆ ನಡೆಸಿಕೊಡುತ್ತಿದ್ದಾರೆ. ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ನಲ್ಲಿ ಯಾವ ಆಟಗಾರರು ಯಾವ ತಂಡಕ್ಕೆ ಸೇರಿದ್ದಾರೆ ಇಲ್ಲಿದೆ ಅಪ್ಡೇಟ್ಸ್
ಸರಿ ಸುಮಾರು 239 ಆಟಗಾರರು ಹರಾಜಿಗೆ ಲಭ್ಯರಿದ್ದರು.ಕರ್ನಾಟಕ ಪ್ರಿಮಿಯರ್ ಲೀಗ್ (ಕೆಪಿಎಲ್) ಹರಾಜು ಪ್ರಕ್ರಿಯೆ ಆರಂಭಕ್ಕೂ ಮುನ್ನ ಯಾವ ಯಾವ ಆಟಗಾರರನ್ನು ತಂಡಗಳು ಉಳಿಸಿಕೊಂಡಿವೆ ಎಂಬ ಪಟ್ಟಿ ಈಗಾಗಲೇ ಬಿಡುಗಡೆಯಾಗಿತ್ತು. [ಕೆಪಿಲ್ ಹರಾಜು: ರಾಬಿನ್, ಸ್ಟುವರ್ಟ್ ಬಿನ್ನಿ ಆಕರ್ಷಣೆ]
ಅಚ್ಚರಿಯೆಂಬಂತೆ ಕಳೆದ ಋತುವಿನ ದುಬಾರಿ ಆಟಗಾರರ ರಾಬಿನ್ ಉತ್ತಪ್ಪ ಅವರನ್ನು ಬಳ್ಳಾರಿ ಟಸ್ಕರ್ಸ್ ತಂಡ ಮುಕ್ತಗೊಳಿಸಿತ್ತು. ಈ ಬಾರಿ ಹರಾಜಿನಲ್ಲೂ ರಾಬಿನ್ ಅವರು ಹೆಚ್ಚಿನ ಮೊತ್ತಕ್ಕೆ ಸೇಲ್ ಆಗುವ ನಿರೀಕ್ಷೆಯಿದೆ. [ಕೆಪಿಎಲ್ : ಯಾವ ತಂಡದ ಬಳಿ ಎಷ್ಟು ದುಡ್ಡಿದೆ?]
* ಬಳ್ಳಾರಿ ತಂಡಕ್ಕ್ಕೆ ಲಿಖಿತ್ ಬನ್ನೂರು 65 ಸಾವಿರಕ್ಕೆ ಸೇಲ್ ಆಗಿದ್ದು ವಿಶೇಷ.
* ಮಂಗಳೂರು ಯುನೈಟೆಡ್ ತಂಡಕ್ಕೆ ಎಡಗೈ ಸ್ಪಿನ್ನರ್ ಸೈಯದ್ ಮೊಯಿನುದ್ದೀನ್.
* ಬಿ ಗುಂಪಿನಿಂದ ವಿಕ್ರಮ್ ವೆಂಕಟೇಶ್ 10 ಸಾವಿರ ರು ಗೆ ನಮ್ಮ ಶಿವಮೊಗ್ಗ ತಂಡಕ್ಕೆ ಸೇರ್ಪಡೆ.
* ನಮ್ಮ ಶಿವಮೊಗ್ಗ ತಂಡಕ್ಕೆ ಆಫ್ ಸ್ಪಿನ್ನರ್ ದೈವಿಕ್ ವಿಶ್ವನಾಥ್ (ಕ್ರಿಕೆಟ್ ದಿಗ್ಗಜ ಜಿಆರ್ ವಿಶ್ವನಾಥ್ ಮಗ) 10,000 ರುಗೆ .
* ಬಿ ಗುಂಪಿನ ಆಟಗಾರರ ಹರಾಜು ಪ್ರಕ್ರಿಯೆ ಆರಂಭ. ಆಟಗಾರರ ಮೂಲ ಬೆಲೆ 10,000 ರು. ಮೊದಲ ಆಟಗಾರ ಅಧೋಕ್ಷ್ ಹೆಗ್ಡೆ ಅವರನ್ನು ಯಾವ ತಂಡವೂ ಖರೀದಿಸಲಿಲ್ಲ. [ಕೆಪಿಎಲ್ : ಯಾವ ಆಟಗಾರ ಯಾವ ತಂಡಕ್ಕೆ ಮಾರಾಟ?]
12.45: ಎ ಗುಂಪಿನ ನಂತರ ಬಿ ಗುಂಪಿನ ಹರಾಜಿಗೂ ಮುನ್ನ 5 ನಿಮಿಷದ ವಿರಾಮ.
* ಅವಿನಾಶ್ ಕೆಸಿಯನ್ನು 50 ಸಾವಿರ ರು ಗೆ ಗೆದ್ದುಕೊಂಡ ಮಂಗಳೂರು ಯುನೈಟೆಡ್.
* ಹುಬ್ಳಿ ಟೈಗರ್ಸ್ ಪಾಲಾದ ಕೆಬಿ ಪವನ್.
* ಎಡಗೈ ಬ್ಯಾಟ್ಸ್ ಮನ್ ಅಮಿತ್ ವರ್ಮಾ 3.8 ಲಕ್ಷ ರು ಗೆ ಬಳ್ಳಾರಿ ಪಾಲು.
* ಭರತ್ ಚಿಪ್ಳಿ 90 ಸಾವಿರ ರು ಗೆ ಬಳ್ಳಾರಿ ಟಸ್ಕರ್ಸ್ ತಂಡದ ಪಾಲು.
* ಭರತ್ ಚಿಪ್ಳಿ (ಬ್ಯಾಟ್ಸ್ ಮನ್) ಪರ ಬಳ್ಳಾರಿ ಹಾಗೂ ಬೆಳಗಾವಿ ಬಿಡ್ಡಿಂಗ್.
* ಕುನಾಲ್ ಕಪೂರ್ ಖರೀದಿಸಲು ಯಾವುದೇ ತಂಡ ಆಸಕ್ತಿ ತೋರಿಸಿಲ್ಲ.
* ಡೇವಿಡ್ ಮಥಾಯಿಸ್ ಮೈಸೂರು ತಂಡಕ್ಕೆ 1.7 ಲಕ್ಷ ರು.ಗೆ
* ಉದಿತ್ ಪಟೇಲ್ ಅವರು 2.4 ಲಕ್ಷ ರು ಗೆ ಮಂಗಳೂರು ಯುನೈಟೆಡ್ ತಂಡಕ್ಕೆ ಸೇರ್ಪಡೆ
* ಬಿ ಅಖಿಲ್ ( ಆಲ್ ರೌಂಡರ್) ಬಿಜಾಪುರ ತಂಡಕ್ಕೆ 1.3 ಲಕ್ಷಕ್ಕೆ ಸೇಲ್.
* ಐಪಿಎಲ್ ನಲ್ಲಿ ಡೆಲ್ಲಿ ಡೇರ್ ಡೆವಿಲ್ಸ್ ಪರ ಆಡುವ ಮಾಯಾಂಕ್ ಅಗರ್ವಾಲ್ ಅವರು ಬೆಳಗಾವಿ ತಂಡಕ್ಕೆ 3.8 ಲಕ್ಷಕ್ಕೆ ಸೇಲ್.
* ಸುನಿಲ್ ಜೋಶಿ ಸಂಬಂಧಿಕರಾದ ಅನಿರುಧ್ ಜೋಶಿ ಅವರು 3.70 ಲಕ್ಷ ರು ಗೆ ಬಳ್ಳಾರಿ ಟಸ್ಕರ್ಸ್ ಪಾಲು.
* ಅನಿರುದ್ಧ್ ಜೋಶಿಗಾಗಿ ಬಳ್ಳಾರಿ ಟಸ್ಕರ್ಸ್, ಮೈಸೂರು ವಾರಿಯರ್ಸ್ ನಿಂದ ಬಿಡ್ಡಿಂಗ್.
* ಅವಿನಾಶ್ ಕೆಸಿ ಕೊಳ್ಳಲು ಯಾವ ತಂಡವೂ ಆಸಕ್ತಿ ತೋರಲಿಲ್ಲ.
* ಕೆ ಗೌತಮ್ (ಆಫ್ ಸ್ಪಿನ್ನರ್) 1.1 ಲಕ್ಷ ರು ಗೆ ಮೈಸೂರು ವಾರಿಯರ್ಸ್ ಗೆ ಸೇರ್ಪಡೆ
* ಆಲ್ ರೌಂಡರ್ ಸ್ಟುವರ್ಟ್ ಬಿನ್ನಿ 5.50 ಲಕ್ಷ ರು ಗೆ ನಮ್ಮ ಶಿವಮೊಗ್ಗ ತಂಡಕ್ಕೆ ಸೇರಿದರು.
* ರಾಬಿನ್ ಉತ್ತಪ್ಪ ದಾಖಲೆ ಮುರಿದ ಸ್ಟುವರ್ಟ್ ಬಿನ್ನಿ. ಈ ಬಾರಿ ಹರಾಜಿನಲ್ಲಿ ಅತಿ ಹೆಚ್ಚು ಮೊತ್ತಕ್ಕೆ ಬಿಡ್ಡಿಂಗ್.
* ಸ್ಟುವರ್ಟ್ ಬಿನ್ನಿ ಕೊಳ್ಳಲು ನಮ್ಮ ಶಿವಮೊಗ್ಗ, ಬೆಳಗಾವಿ ಪ್ಯಾಂಥರ್ಸ್ ಬಿರುಸಿನ ಬಿಡ್ಡಿಂಗ್.
* ವೇಗಿ ಅಭಿಮನ್ಯು ಮಿಥುನ್ 5.10 ಲಕ್ಷ ರು ಮೊತ್ತಕ್ಕೆ ಬಿಜಾಪುರ ಬುಲ್ಸ್ ಪಾಲು
11.15ರ ಸುಮಾರು ಚಾರು ಶರ್ಮ ಅವರಿಂದ ಹರಾಜು ಆರಂಭ. ಹೊಸ ತಂಡ ನಮ್ಮ ಶಿವಮೊಗ್ಗಕ್ಕೆ ಸ್ವಾಗತ ಕೋರಿದರು.
Shreyas Gopal sold for Rs 3.10 lakh http://t.co/VggS6MMAne #Cricket #KPL #Karnataka
— Thatscricket (@thatscricket) July 25, 2015
(ಒನ್ ಇಂಡಿಯಾ ಸುದ್ದಿ)